Total Pageviews

Monday, May 7, 2018

ಜಪಾನ್ ಎಂಬ ಬೆರಗು !


             



   ಒಂದು ಸಲ   ನಮ್ಮ ದೇಶದವರಿಗೆ ತುರ್ತಾಗಿ  ಒಂದು ಸಬ್  ಮರಿನ್ ಅವಶ್ಯಕತೆ ಉಂಟಾಗಿ , ಖರೀದಿಸಲು ನಿರ್ಧರಿಸುತ್ತಾರಂತೆ, ಆಗ ಮೊದಲು ಅಮೆರಿಕಾದವರಿಂದ ಖರೀದಿಸಲು ಯೋಚಿಸಿ , ಅವರನ್ನು ಕೇಳಿದಾಗ ಅವರು ಒಂದು ೫೦೦ ಪುಟಗಳು ಟರ್ಮ್ಸ್   ಅಂಡ್ ಕಂಡೀಶನ್ ಬುಕ್ ಅನ್ನು ಕಳಿಸುತ್ತಾರಂತೆ , ಅದನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮೂರು ತಿಂಗಳಾಗಿ ಕೆಲವು ಪುಟಗಳು ಕಳೆದು ಹೋದವಂತೆ! ಆಗ , ಇವರುಗಳು ರಷ್ಯಾ ದೇಶದವರನ್ನು ಸಂಪರ್ಕಿಸಿ ಕೇಳುತ್ತಾರಂತೆ ನಮಗೆ ಇನ್ನಾರು ತಿಂಗಳುಗಳಲ್ಲಿ ತುರ್ತಾಗಿ ಸಬ್ ಮರಿನ್ ನ ಅವಶ್ಯಕೆತೆ ಇದೆ ನೀವೇನಾದರೂ ಕೊಡಬಹುದೆ ಎಂದು ಅದಕ್ಕೆ ರಷ್ಯಾ ೨೫೦ ಪುಟಗಳ ಟರ್ಮ್ಸ್ ಅಂಡ್ ಕಂಡೀಶನ್ ಕಳಿಸಿ ೯ ತಿಂಗಳಲ್ಲಿ ಕಳಿಸಿಕೊಡುತ್ತೇವೆ ಎಂದರಂತೆ ! ಇನ್ನೇನು ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತಾಗ ಯಾರೋ ಜಪಾನ್ ಬಗ್ಗೆ ಹೇಳಿದರಂತೆ ಹೆಚ್ಚಿನ ಕಾಲಾವಕಾಶ ಇರದಿದ್ದರಿಂದ ದೂರವಾಣಿ ಕರೆ ಮೂಲಕ ಡೀಲ್ ಮಾಡುವ ಉದ್ದೇಶದಿಂದ ಫೋನಾಯಿಸಿ ಹೇಗ್ ಹೀಗೆ ಅಂತ ಹೇಳಿದಾಗ ಆ ಕಡೆ ಇಂದ ಸರಿ ಬರೋಬ್ಬರಿ ೫ ತಿಂಗಳು ಹದಿನೈದು ದಿವಸದಲ್ಲಿ ಸಬ್ ಮರೀನ್ ನಿಮ್ಮ ದೇಶದಲ್ಲಿ ಇಂಥಿಂಥ ತಾರೀಖು ಇಂಥಿಂಥ ಸಮಯಕ್ಕೆ ಸರಿಯಾಗಿ ಇಂತಿಥ ಜಾಗಕ್ಕೆ ಬಂದಿರುತ್ತದೆ ಎಂದರಂತೆ , ಇದನ್ನು ಕೇಳಿ ನಮ್ಮ ಅಧಿಕಾರಿ ಮತ್ತೆ ಟರ್ಮ್ಸ್ ಅಂಡ್ ಕಂಡೀಶನ್ ಕಥೆ ಏನ್ ಸ್ವಾಮಿ ಯಾರೂ ಆಗಲ್ಲ ಅಂತ ಹೇಳಿದಾಗ ನೀವು ಕೊಡುತ್ತೇನೆ ಅಂದಿರಿ ಯಾವ ಆಧಾರದ ಮೇಲೆ ನಿಮ್ಮನ್ನು ನಂಬಲಿ ಎಂದು ಕೇಳಿದರಂತೆ ಅದಕ್ಕೆ ಜಪಾನೀ ಅಧಿಕಾರಿ " ನೀವು ನಮ್ಮ್ ಜೊತೆಗೆ  ಮೊದಲನೇ ಸಲ ವ್ಯವಹರಿಸುತ್ತಿದ್ದೀರಿ ಎಂದೆನಿಸುತ್ತದೆ ಅದಕ್ಕೆ ನಿಮಗೆ ನಮ್ಮ ಬಗ್ಗೆ ತಿಳಿದಿಲ್ಲ ನಾವೇನಾದರೂ ಹೇಳಿದ ದಿನಕ್ಕಿಂತ ಒಂದೇ ಒಂದು ದಿನ ಮೀರಿದರೆ ನಮ್ಮ ಸಬ್ ಮರಿನ್ ನಿಮಗೆ ಗಿಫ್ಟ್ ಆಗಿ ಕೊಡುತ್ತೇವೆ ಹಣ ತೆಗೆದುಕೊಳ್ಳುವುದಿಲ್ಲ"! ಎಂದರಂತೆ   ಇದು ಒಂದು ಕಾಲ್ಪನಿಕ ಕಥೆಯಾದರೂ ಜಪಾನ್ ನವರೆಲ್ಲರೂ ಒಪ್ಪುವಂಥ ಹಾಗೆಯೇ ನಡೆದುಕೊಳ್ಳುವಂಥ ಕಥೆ !ನಾವು ಶಾಲೆಯಲ್ಲಿರುವಾಗ ನಮ್ಮ ಮೇಷ್ಟ್ರು ಯಾವಾಗಲೂ ಜಪಾನ್ ಎಂಬ ಪುಟ್ಟ ದೇಶದ ಬಗ್ಗೆ ವಿಪರೀತ ಎನ್ನುವಷ್ಟು ಪ್ರೀತಿ ಹಾಗೂ ಬೆರಗು ಮೂಡುವಂಥ ಕಥೆಗಳನ್ನು ಹೇಳುತ್ತಿದ್ದರು , ಎಲ್ಲರಿಗೂ ಅಮೇರಿಕಾ ಮಾದರಿ ಆದರೆ ನಮ್ಮೆಲರಿಗೂ ಜಪಾನ್ ಎಂದರೆ ಅಚ್ಚರಿ !

ಇವತ್ತು ದೊಡ್ಡಣ್ಣ ಅಮೆರಿಕಾಗೆ ಸಾಟಿಯಾಗಿ ತಾಂತ್ರಿಕವಾಗಿ ಸವಾಲೆಸೆಯಬಲ್ಲ ದೇಶ ಎಂದರೆ ಅದು ಜಪಾನ್ ಮಾತ್ರ! ಜಗತ್ತಿನಲ್ಲಿ ಆ ದೇಶ ಅನುಭವಿಸದಷ್ಟು ಸಾವು ನೋವು ಇನ್ಯಾವ ದೇಶವೂ ಅನುಭವಿಸಿರಲಿಕ್ಕಿಲ್ಲ ಆ ದೇಶ ಕಂಡಷ್ಟು ಪ್ರಕೃತಿ ವಿಕೋಪವನ್ನು ಇನ್ಯಾವ ದೇಶವೂ ಎದುರಿಸರಲಿಕ್ಕಿಲ್ಲ ! ಎಷ್ಟೇ ಅಡೆ  ತಡೆಗಳಿದ್ದರೂ ಮತ್ತೆ ಒಂದು ಅಭೇದ್ಯ ಶಕ್ತಿಯಾಗಿ ಹೊರ ಹೊಮ್ಮುತ್ತದೆ ಪ್ರತಿಬಾರಿಯೂ ಇಡೀ ವಿಶ್ವವೇ ಬೆರಗಾಗಿ  ಅವರತ್ತ ನೋಡುವಂತೆ ಮಾಡುತ್ತದೆ ! ಹಿರೋಷಿಮಾ ನಾಗಸಾಕಿ ದುರಂತದ ನಂತರ ಅದು ಜಗತ್ತಿನ ಭೂಪುಟದಲ್ಲಿ ಉಳಿಯುವ ಯಾವ ಸೂಚನೆಯು ಇರಲಿಲ್ಲ , ಒಂದಾದ ಮೇಲೊಂದು ಭೂಕಂಪ , ಸುನಾಮಿಗಳು ಒಂದೇ ಎರಡೇ  ಪ್ರತಿ ಬಾರಿ ಹೊಸ ದುರಂತ ಹೊಸ ಸಮಸ್ಯೆ ಎಲ್ಲವನ್ನು ಮೆಟ್ಟಿ ನಿಂತುರುವ ಆ ದೇಶದ ಪ್ರತಿ ಪ್ರಜೆಯು ಸಾಹಸಿಯಂತೆ ಕಾಣುತ್ತಾನೆ !

ನಾವೆಲ್ಲಾ ಗಂಡ ಕಚೇರಿಯಿಂದ ಮನೆಗೆ ಬೇಗ ಬಂದರೆ ಖುಶಿ  ಪಟ್ಟು ತಬ್ಬಿ ಮುದ್ದಾಡಿದರೆ , ಜಪಾನ್ ದೇಶದ ಹೆಂಗಸರು ಗಂಡ ಬೇಗ ಮನೆಗೆ ಬರುವುದು ಒಂದು ಅಕ್ಷಮ್ಯ ಅಪರಾಧ ಹಾಗೂ ಅವಮಾನ ಎಂದು ಭಾವಿಸುತ್ತಾರೆ ! ಅಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಪ್ರತಿಯೊಬ್ಬರೂ ದೇಶ ಮೊದಲು ಹಾಗೂ ನಾವು ಕೆಲಸ ಮಾಡುವುದು  ದೇಶಕ್ಕಾಗಿ  ನಂತರ ನಮಗಾಗಿ ನಾವು ನಮ್ಮದು ಎಂಬ ಘೋಷಿತ ವಾಕ್ಯವನ್ನು ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಪಾಲಿಸುತ್ತಾರೆ !

ಅವರಲ್ಲಿನ ವೃತ್ತಿಪರತೆ, ಶಿಸ್ತು , ಕೆಲಸ ಹಾಗೂ ಕೆಲಸ ಮಾಡುವ ಸಂಸ್ಥೆಯನ್ನು ಗೌರವಿಸುವ ಪರಿ ಎಲ್ಲವೂ ಪರಿಪೂರ್ಣ ! ಸಾಮಾನ್ಯವಾಗಿ ಎಲರೂ ಪಾಲಿಸುವಂತೆ ೮ ಗಂಟೆಗಳೇ ಅಲ್ಲಿನ ಕಚೇರಿ ಸಮಯವಾಗಿದ್ದರೂ ಅಲ್ಲಿನ ಪ್ರತಿ ಪ್ರಜೆಯೂ ೧೦ ರಿಂದ ೧೨ ಗಂಟೆ ಸಮಯವನ್ನು ಕಚೇರಿಗೆಂದೇ ಮೀಸಲಿಟ್ಟಿರುತ್ತಾರೆ ! ಕೇವಲ ೧೨೫ ಮಿಲಿಯನ್ ಜನಸಂಖ್ಯೆ ಹೊಂದಿರುವ  ದೇಶ ಇಂದು ಜಗತ್ತಿನಲ್ಲೇ ತಾಂತ್ರಿಕವಾಗಿ ಮುಂದುವರೆದ ಕೆಲವೇ ಕೆಲವು ದೇಶಗಳಲ್ಲಿ ಒಂದು ಮತ್ತು ವಿಶ್ವದಲ್ಲೇ ಎರಡನೇ ದೊಡ್ಡ ಜಿಡಿಪಿ ಹೊಂದಿರುವ ರಾಷ್ಟ್ರ !ಅಲ್ಲಿನ ನಿರುದ್ಯೋಗ ಕೇವಲ ೪. ೧%  ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಕೇವಲ ೧೩. ೫ % , ಸ್ವಾತಂತ್ರ  ಬಂದು ೭೦ ಸಂವತ್ಸರ ದಾಟಿ ಅವರಷ್ಟು ದೊಡ್ಡ ಮಟ್ಟದ ಯುದ್ಧ ಅಥವಾ ಹಾನಿಯಾಗಲಿ ಆಗದೇ ಇದ್ದರೂ ನಮ್ಮಲ್ಲಿ ಧರ್ಮ ಮೊದಲು ನಂತ್ರ ದೇಶ! ನಮ್ಮಷ್ಟು ಧರ್ಮ ,ಜಾತಿ , ಭಾಷೆ ,ಗಡಿ ಸಮಸ್ಯೆ ಅವರಲ್ಲಿ ಇಲ್ಲದಿದ್ದರೂ ಅವರಷ್ಟು ಕಷ್ಟಗಳಿಗೆ ಎದೆ ಒಡ್ಡಿ ಇದನ್ನು ಮಾಡಿಯೇ ತೀರುತ್ತೇವೆ ಎಂಬ  ಎದೆಗಾರಿಕೆ ನಮಗಿಲ್ಲ !

ಒಂದು ದೇಶಕ್ಕೆ ದೇಶವೇ ಅಳಿವಿನಂಚಿನಲ್ಲಿರುವಾಗ ಅಲ್ಲಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಹೇಳುವುದೇ ಬೇಡ ! ಎರಡನೇ ಮಹಾ ಯುದ್ಧದ ನಂತ್ರ ಅಂದರೆ ೧೯೪೦-೪೬ ರ ವರೆಗೆ ಆರ್ಥಿಕವಾಗಿ ದಿವಾಳಿ  ಹೊಂದಿ ಅಮೆರಿಕಾಗೆ ಶರಣಾಗಿಯೂ ಹೇಚ್ಛೆನೂ ಲಾಭ ಸಿಗದೇ ಬಳಲಿ ಹೋಗಿದ್ದ ಜಪಾನಿಗರಿಗೆ ಅಮೆರಿಕನ್ನರೇ ಡಾಡ್ಜ್ ಎಂಬ ಬ್ಯಾಂಕರ್ ನನ್ನ ಕರೆಸಿ ಕೆಲವು ಸಹಾಯಕಾರಿ ಆರ್ಥಿಕ ಸಬಳೀಕರಣದ ಅದರಲ್ಲಿ ೧) ಹಣದುಬ್ಬರ ಇಳಿಕೆ  ೨) ಸಮತೋಲನ ಬಜೆಟ್  ೩) ಜಪಾನೀ ಸರಕಾರದ ಸಾಲ ವಾಪಸಾತಿ  ೪) ಮತ್ತು ಫಿಕ್ಸೆಡ್ ಎಕ್ಸ್ಚೇಂಜ್ ರೇಟ್  (೧ ಡಾಲರ್ =೩೬೦ ಯೆನ್ ) ಅಂತ ನಿಯಮಗಳನ್ನು ಜಪಾನಿಗರ ಮುಂದಿಡುತ್ತಾನೆ ! ಈ ನಿಯಮಗಳನ್ನು ಪಾಲಿಸದೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ

ಇದರಿಂದ ೧೯೪೯ ರ ಹೊತ್ತಿಗೆ ಈ ನಿಯಮದಡಿ ಉದ್ಯಮದಾರರು ಹಾಗೂ ಕಾರ್ಮಿಕ ವರ್ಗ ತಮ್ಮ ಸರಕುಗಳಿಗೆ ಅಂತರಾಷ್ಟ್ರೀಯ ಬೆಲೆಗೆ ತಕ್ಕಂತೆ ಹೊಂದಾಣಿಕೆಯಾಗದೇ ಅತೀ ದುಬಾರಿ ಎನಿಸಿ ಎಲ್ಲರಿಂದ ತಿರಸ್ಕರಿಸಲ್ಪಟ್ಟವು ! ಇದರಿಂದ ಗ್ಲೋಬಲ್ ಮಾರುಕಟ್ಟೆ ಕಳೆದುಕೊಂಡರು ! ಇದರಿಂದ ಎದೆ ಗುಂದದ ಜಪಾನಿಗರಿಗೆ ಅಲ್ಲಿನ ಸ್ಟೇಟ್ ಬ್ಯಾಂಕ್ ಗಳು ಧಾರಾಳವಾಗಿ ಸಾಲ ಸಹಾಯ ಒದಗಿಸಿ ದಿವಾಳಿಯಾಗುದನ್ನು ತಡೆದವು ! ೧೯೫೦ ರ ಹೊತ್ತಿಗೆ ಒಂದು ಹೊಸ ಉದ್ದೇಶ ಹೊತ್ತ ಜಪಾನ್ ನ ಆರ್ಥಿಕ ಉದ್ದೇಶ ಕೇವಲ ರಫ್ತು  ಹೆಚ್ಚಿಸುವದಷ್ಟೇ ಆಗಿತ್ತು ಇದರಿಂದ ಸಹಜವಾಗಿಯೇ ತಲಾ ಸಂಗ್ರಹಣೆ ಕಡೆ ಗಮನ ಹೆಚ್ಚಿಸುವಂತೆ ಆಯಿತು ! ಇದಕ್ಕೆ ಸರಿಯಾಗಿ ಮಧ್ಯಮ ಗಾತ್ರದ  ಉದ್ಯಮಿದಾರರೆಲ್ಲ ಸೇರಿಕೊಂಡು ಟ್ಯಾಕ್ಸ್ ಏರಿಕೆ ಖಂಡಿಸಿ ಹೋರಾಟ ನಡೆಸಿದರು , ಈ ಎಲ್ಲ ಕಾಳಜಿಯನ್ನು ಮುಂದಿಟ್ಟುಕೊಂಡು ಜಪಾನಿಗರು ಹುಟ್ಟು ಹಾಕಿದ್ದು " ಮಾನವ ಕಲ್ಯಾಣ ಸಮಾಜ " ಈ ಮಾನವ ಕಲ್ಯಾಣ ಸಮಾಜಕ್ಕಾಗಿಯೇ ಸ್ವತಂತ್ರ ನಿಯಮ , ಮಾರ್ಪಾಡು ಹೊಂದಿದ ಕಾನೂನು ,ಹೊಸ ಸಾಲದ ನಿಯಮ ಅಷ್ಟೇ ಅಲ್ಲದೆ ಹೊಸದಾಗಿ ಶಾಸನ ಮಾನ್ಯತೆಯನ್ನು ಕೊಡಲಾಯಿತು ! ಕಲ್ಯಾಣ ರಾಷ್ಟ ಎಂದಾಗಿದ್ದರೆ ಟ್ಯಾಕ್ಸ್ ಹೆಚ್ಚಳವನ್ನು ಒಪ್ಪಲೇ ಬೇಕಾದ ಅನಿವಾರ್ಯತೆ ಇತ್ತು ಅದಕ್ಕಾಗಿ ಸಮಾಜದ ಹಿತ ಕಾಯ್ದುಕೊಂಡರೆ ದೇಶ ತಾನೇ ತಾನಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ನಿಯಮವನ್ನು ಅಷ್ಟೇ ಕಟ್ಟು ನಿಟ್ಟಾಗಿ ಪಾಲಿಸಿದರು !

ಈ ಸಮಾಜದ ಸ್ಥಾಪನೆಯಿಂದ ನಿವೃತ್ತಿ ಭತ್ತ್ಯೇ ಗಳನ್ನು ತಮ್ಮ ಸ್ವಂತ ಉಳಿತಾಯದಿಂದಲೇ ನಿರ್ವಹಿಸುವಂತಾಗಿ , ಪ್ರತಿ ಕಾರ್ಮಿಕನ ಹೊಣೆ ಆಯಾ ಉದ್ಯಮಗಳೇ ಹೊತ್ತು ಇನ್ಶೂರೆನ್ಸ್ ಇಂದ ಹಿಡಿದು ಮೆಡಿ ಕ್ಲೇಮ್ ಎಲ್ಲವನ್ನು ಸರಕಾರದ ಬೊಕ್ಕಸಕ್ಕೆ ಧಕ್ಕೆಯಾಗದಂತೆ ಎಲ್ಲ ಆಯಾ ಕಂಪನಿಗಳೇ ನಿರ್ವಹಿಸಿದವು ! ಸಹಜವಾಗಿ ಸರಕಾರೀ ಬೊಕ್ಕಸ ಭಾರಿ ಲಾಭ ಹೊಂದುತ್ತಲಿತ್ತು  , ಆ ಹಣದಲ್ಲಿ ತಾಂತ್ರಿಕ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅರ್ಹತೆಯ ಸ್ಪರ್ಧೆಗೆ  ತಯಾರಿ ನಡೆಸಲು ಮುಂದಾಯಿತು ಜಪಾನ್ !ಇದೆಲ್ಲ ನಡೆದಿದ್ದು ಕೇವಲ ೨೩ ವರ್ಷಗಳ ಅವಧಿಯಲ್ಲಿ ಅಂದರೆ ೧೯೫೦-೭೩ ರ ಅವಧಿ ಜಪಾನಿಗರಿಗೆ ಆರ್ಥಿಕ ಸಬಲೀಕರಣವನ್ನು ತಂದು ಕೊಟ್ಟಿತಲ್ಲದೆ , ೧೯೬೪ ರಲ್ಲೇ ಮೊದಲ ಬುಲೆಟ್ ಟ್ರೈನ್ ಪರಿಚಯಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಿತು !ಇಂದು ಅಲ್ಲಿ ಉತ್ಪಾದನೆ ಹೊಂದುವ ಶೇಕಡಾ ೭೦ ಪ್ರತಿಶತ ಸರಕು ಇಡೀ ವಿಶ್ವದೆಲ್ಲೆಡೆ ರಫ್ತಾಗುತ್ತದೆ (ವಿಥ್ ದಿ ಬ್ರಾಂಡ್ ನೇಮ್ )

ಅಂತಿಮವಾಗಿ ಇದೆಲ್ಲಕ್ಕೂ ಮುಖ್ಯ  ಕಾರಣ ಜಪಾನೀ ಸಾಮಾನ್ಯ ಜನರು ! ಎರಡನೇ ಮಹಾ ಯುಧ್ಧದ ನಂತರ ಪ್ರತಿ ಜಪಾನೀ ಪ್ರಜೆಯು ದೇಶ ಮೊದಲು ಹಾಗೂ ದೇಶಕ್ಕಾಗಿ ಏನು ಬೇಕಾದರೂ   ಮಾಡಲು ಸಿದ್ಧ ಎಂಬ ಧ್ಯೇಯ ವಾಕ್ಯವನ್ನು ಕಾಯಾ  ವಾಚಾ ಹಾಗೂ ಮನಸಾ ಪಾಲಿಸಲು ಪ್ರಾರಂಭಿಸಿದರು !
"ಯಾವಾಗಲೂ ನಾವೆಲ್ಲರೂ ಒಂದೇ , ಮತ್ತು ನಾವೆಲ್ಲರೂ ಉಳಿದ ಏಶಿಯನ್ ಗಳಿಗಿಂತ ಉತ್ತಮರು  ಹಾಗೂ ಬಿಳಿಯರಿಗಿಂತ ಉನ್ನತರು " ಎಂಬ ಪ್ರತಿಜ್ಞೆ ತೆಗೆದುಕೊಂಡು ಹುಟ್ಟುವ ಪ್ರತಿ ಮಗುವಿನಲ್ಲೂ ಈ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಾರೆ ! ಮಹಾ ಯುದ್ಧದ ನಂತರ ತಮ್ಮ ದೇಶದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರತಿ ಪ್ರಜೆಯು ತನ್ನ ವೈಯಕ್ತಿಕ ಸುಖಕ್ಕಾಗಿ ಹಂಬಲಿಸದೆ , ಅದಕ್ಕಾಗಿ ತಮ್ಮ ದೇಶದಲ್ಲಿ ತಮ್ಮದೇ ಸರಕಿನ ಬೆಲೆ ಎರಡರಷ್ಟು ದುಬಾರಿಯಾದರೂ ಚಿಂತಿಸದೇ ಅದನ್ನು ಮನಸಾ  ಸ್ವಾಗತಿಸಿ ಬೆಂಬಲಿಸಿದರು ! ಇದೇ ಮನಸ್ಥಿತಿ ಅವರನ್ನು ಇಂದಿಗೂ ಅವರ ಚಿಂತೆಗಳನ್ನಾಗಲಿ , ಅಥವಾ ಒತ್ತಡಗಳನ್ನಾಗಲಿ , ಧಾರ್ಮಿಕ / ಸಾಂಸ್ಕೃತಿಕ ಹೀಗೆ ಯಾವುದೇ ವ್ಯತ್ಯಾಸಗಳನ್ನ ಸಾರ್ವಜನಿಕವಾಗಿ  ವ್ಯಕ್ತವಾಗದಂತೆ ತಡೆಯುತ್ತ ಬಂದಿದ್ದಲ್ಲದೆ , ಜಗತ್ತಿನ ಅತೀ ಕಡಿಮೆ ಅವಧಿಯಲ್ಲಿ ಮುಂದುವರೆದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿತು !

ನೋಟು ಬ್ಯಾನ್ನಿಂದಾಗಿ ಏಟಿಎಂ ಮಷೀನ್ ಮುಂದೆ ಕಾಯುವುದೇ ದೇಶದ ಅತ್ಯಂತ ಕರಾಳ ದಿನ ಎಂದು , GST  ಬರುವುದರಿಂದ ದೇಶವೇ ದಿವಾಳಿಯಾಗುತ್ತದೆ , ಕಾರ್ಪೊರೇಟ್ ಕಾರ್ಯನಿರ್ವಾಹಕರ  ಆಗಮನದಿಂದಾಗಿ ದೇಶದ ರೈತರೆಲ್ಲರೂ ಬೀದಿಗೆ ಬರುತ್ತಾರೆ ಎಂದು ಪ್ರತಿಯೊಂದಕ್ಕೂ ನಮ್ಮ ಹಾಗೆ ವಿರೋಧ ವ್ಯಕ್ತ ಪಡಿಸಿ  ಬಂದ್ ಮಾಡಿ ಅಡ್ಡಗಾಲು ಹಾಕಿ, ಉದ್ದುದ್ದ ಮಲಗಿದ್ದರೆ ಇವತ್ತು ಜಪಾನ್ ಕೂಡ ಮಿನಿ ಭಾರತವಾಗಿರುತ್ತಿತ್ತು !

Tuesday, May 1, 2018

ಮೋದಿ ಎಂಬ ಮಾಯೆ ಮತ್ತು ನಾವು !


ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು, ಕಾಲೇಜುಗಳಲ್ಲಿ  ಪಾಠ ಮಾಡುವ ಉಪನ್ಯಾಸಕರು, ಪ್ರಾಧ್ಯಾಪಕರು  ಹಾಗೂ ಸಮಾಜದಲ್ಲಿ ಮುಖಂಡ ಎನಿಸಿಕೊಂಡವ ಮತ್ತು ರಾಜಕೀಯ ನಾಯಕ , ಇವರೆಲ್ಲರಿಗೂ ವಕ್ಚಾತುರ್ಯ ಮತ್ತು ಜನರನ್ನು ಆಕರ್ಷಣೆ ಮಾಡುವ ಕಲೆ ಗೊತ್ತಿಲ್ಲದಿದ್ದರೆ ಇವರುಗಳ ಸರ್ವೈವಲ್ ತುಂಬಾ ಕಷ್ಟ !

ನಾನು ಮೋದಿ ಅಭಿಮಾನಿ ಹಾಗೂ ಇತ್ತೀಚಿಗೆ ಈ ಆಗದವರು ಅಂತೆ ಇರುವ ಕೆಲವರು ಹೆಸರಿಸಿರುವ ಹಾಗೆ ಭಕ್ತಳೂ ಹೌದು !
 ಇದಕ್ಕೆ ಕಾರಣ ಇದೆ.. ಎಲ್ಲರೂ ಹೇಳಿರಬಹುದು ಆದರೂ ನಮ್ಮ ಕರ್ನಾಟಕದ ಚುನಾವಣೆಯ ಸಂಧರ್ಭ ಆಗಿದ್ದರಿಂದ ಇದು ನನ್ನ ಅಭಿಯಾನದ ಲೇಖನ ಎಂದುಕೊಳ್ಳಬಹುದು ! ನಮ್ಮೆಲ್ಲರಿಗೂ ರಾಜಕೀಯ ಎಂದರೆ ಬರಿ ಮೋಸ , ದಗಾ , ವಂಚನೆ ಹಾಗೂ  ಹಗರಣಗಳ ಕ್ಷೇತ್ರ , ಇಲ್ಲಿ ಒಳ್ಳೆಯವರು ಮತ್ತು ಓದಿಕೊಂಡವರು ಬರುವಂತಿಲ್ಲ ಎಂಬ ಅಲಿಖಿತ ನಿಯಮ ವನ್ನು ಎಲ್ಲರೂ ಶಿರಸಾ ಪಾಲಿಸುತ್ತಿದ್ದ ದಿನಗಳಲ್ಲಿ ದಿಢೀರನೆ ಒಂದು ಚೈತನ್ಯ ಕಾಣಲು ಸಿಕ್ಕ್ಕಿತು ! ಒಂದೇನೋ ಹೊಸ ಅಲೆ , ಹೊಸ ಯೋಚನೆ,ಹೊಸ ಕನಸು ಹೊತ್ತು ಬಂದ  ಫಕೀರನಂತೆ ಕಂಡದ್ದು  ನಮ್ಮ ಮೋದಿ .

ಮೋದಿ ಎಂಬ ದೈತ್ಯ ವ್ಯಕ್ತಿತ್ವ ಎಂಥೆಂಥವರನ್ನೋ ಮಾರುಳಾಗುವಂತೆ ಮಾಡಿತು, ಏಕೆಂದರೆ ಆ ವ್ಯಕ್ತಿತ್ವ ಕೇವಲ ತನಗಾಗಿ ಮಾಡಲ್ಪಟ್ಟಿದ್ದಲ್ಲ ಬದಲಾಗಿ ಒಂದು ಹೊಸ ಅಲೆಯ ಆಗಮನಕ್ಕಾಗಿ ಇರುವಂಥದ್ದು ಅಂತ ಮನದಟ್ಟು ಮಾಡಲು ಆಯ್ದು ಕೊಂಡ ಮೊದಲ ಅಸ್ತ್ರ ಜನರನ್ನು ತಲುಪುವುದು ಮತ್ತು ತುಂಬಾ ಸರಳ ಹಾಗೂ ಮನಸಿಗೆ ನಾಟುವ ಪದಗಳಿಂದ ಜನರನ್ನ ತಲುಪುವುದು ! ಈರುಳ್ಳಿ ಬೆಲೆ ಇಂದ ಹಿಡಿದು ಬಾಹ್ಯಾಕಾಶದಲ್ಲಿ  ಹಾರಾಡುವ ರಾಕೆಟ್ ವಿಷಯ ಇರಬಹುದು ಅಥವಾ ಡಿಜಿಟಲ್ ಸಂವಹನದಿಂದ ಹಿಡಿದು ಹಲವು ಯೋಜನೆ ಗಳು , ಕಾರ್ಯಕ್ರಮಗಳು  ಕಡೆಗೆ GST ವರೆಗೂ ಪ್ರತಿ ವಿಷಯವನ್ನು ಕೂಲಂಕುಷವಾಗಿ ಅಳೆದು ತೂಗಿ ವಾಹ್ ಮಾತಾಡಿದ್ರೆ ಹೀಗೆ ಮಾತಾಡ್ಬೇಕು ಅಂತ ವಾಜಪೇಯಿ ನಂತರ ಭಾರತದಲ್ಲಿ ಜನ ಯಾರನ್ನಾದರೂ ನೋಡಿ ಪುಳಕಿತರಾಗಿದ್ದರೆ ಅದು ಮೋದಿ ಮಾತ್ರ !

ಒಂದು ಕ್ಷಣ ಯೋಚಿಸಿ ವಾಜಪೇಯಿ ನಂತರದ  ಕಾಲಮಾನದಲ್ಲಿ , ಬರೋಬ್ಬರಿ ಹತ್ತು ವರ್ಷ ನಮ್ಮ ದೇಶ ನಿಚ್ಚಳ ಮೌನದಲ್ಲಿದ್ದಂತೆ ಭಾಸವಾಗುತ್ತಿತ್ತು . ನಮಗ್ಯಾರಿಗೂ ಫೀಲ್ ಗುಡ್ ಫ್ಯಾಕ್ಟರ್ಸ್ ಗಳೇ ಇರಲಿಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಬಾಯಿಗೆ ಸಿಕ್ಕಲ್ಲಿ ಗುಟ್ಕಾ ಪಾನ್ ಜಗಿದು ಗೋಡೆಗಳನೆಲ್ಲ ರಂಗೇರಿಸುತ್ತಿದ್ದ ಜನ ಇವತ್ತು , ಸ್ವಚ್ಚ ಭಾರತ ಅಭಿಯಾನ್ ಕಣ್ರೀ ಹಿಂಗೆಲ್ಲ ಎಸಿಬಾರ್ದು ಅನ್ನೋ ಘಟ್ಟ ತಲುಪಿದ್ದಾರೆ. ಕಚೇರಿ ಇಂದ ಎದ್ದು ಹೊರಡುವಾಗ ಸಿಸ್ಟೆಮ ಆಗ್ಲಿ ಲೈಟ್ ಆಗ್ಲಿ ಆರಿಸುವಾಗ ನಂದಲ್ಲ ಕಂಪನಿ ತಾನೇ ನೋಡ್ಕೊಳ್ತಾರೆ ಬಿಡು ಅನ್ನುವ ಜನ ದೇಶದ ಸಂಪನ್ಮೂಲ ಹಾಳು  ಮಾಡಬಾರದು ಅನ್ನುತ್ತಿದ್ದಾರೆ !   ಹಳ್ಳಿಗಳಲ್ಲಿ ಲಕ್ಷ ಲಕ್ಷ ಜನ ಬಹಿರ್ದೆಸೆಯಿಂದ ಮುಕ್ತಿ ಹೊಂದಿ ಶೌಚಾಲಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ! ಇಲ್ಲಿ ನಾನು ಎಲ್ಲ ಬದಲಾವಣೆ ಆಗಿಯೇ ಹೋಯಿತು ಎಲ್ಲ ಅಂದು ಕೊಂಡಂತೆ ನಡೆದೇ ಹೋಯಿತು ಅಂತ ಹೇಳುತ್ತಿಲ್ಲ , ಒಂದು ಬದಲಾವಣೆಯ ಗಾಳಿಯಂತೂ ಬೀಸುತ್ತಿದೆ ( Let's not get into numerical facts and counter attacks!) ನಾ ಕಂಡಂತೆ ನನ್ನ ಪರಿಧಿಯೊಳಗೆ ನಾ ಕಂಡಷ್ಟು ಮಾತ್ರ ಇಲ್ಲಿ ಹೇಳಿದ್ದೇನೆ . ಯಾವುದೇ ವಿಷಯವನ್ನು ಜನರು  ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದಂತೂ ಇತಿಹಾಸದ ಯಾವ ಪುಟಗಳಲ್ಲೂ  ಕಾಣ ಸಿಗುವುದಿಲ್ಲ !

ಚುನಾವಣಾ ಪೂರ್ವ ಹಲವು ಭರವಸೆಗಳನ್ನು ಮಂಡಿಸಿದ್ದಿರಬಹುದು ಹಾಗೂ ಅದ್ರಲ್ಲಿ ಕೆಲವು ಈಡೇರದೇ ಇರಲುಬಹುದು, ಇಲ್ಯಾರೂ ೧೦೦ ಪ್ರತಿಶತ efficiency  ಕೊಡುವ ಮಶಿನ್ ಗಳಿಲ್ಲ , ಮಲ್ಯ ಓಡಿ  ಹೋಗಿದ್ದಕ್ಕೆ ಮೋದಿ ರಾಜೀನಾಮೆ ಕೊಡಲಿ ಎಂದು ಬೊಬ್ಬೆ ಇಡುವವರು ಅದೇ ಮಲ್ಯನ RCB ಟೀಮ್ನ ಪರ ವಹಿಸಿಕೊಂಡು ಮಲ್ಯ ತೆಂಗಿನಕಾಯಿ ಚಿಪ್ಪು ಕೊಟ್ಟರೂ ಪರ್ವಾಗಿಲ್ಲ ಕಪ್ ನಮ್ದೇ ಎಂದು ಎದೆ ಬಡಿದುಕೊಂಡು ಮ್ಯಾಚ್ ನೋಡಲು ಹೋಗುತ್ತಾರೆ !   ನಮ್ಮ ಸೋಶಿಯಲ್ ಮೀಡಿಯಾ ಪ್ರಭಾವ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರೆ , ಒಬ್ಬ ಮನುಷ್ಯ ತನ್ನ ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದು ಅವನನ್ನು ಯಾರೂ ಗಮನಿಸುತ್ತಿಲ್ಲ ಅವನ ಮಾತು ಯಾರೂ ಕೇಳುತ್ತಿಲ್ಲ ಎಂದೆನಿಸಿ ರಾತ್ರೋ ರಾತ್ರಿ ಮೋದಿ ಬಗ್ಗೆ ಒಂದೆರಡು ಇಲ್ಲ ಸಲ್ಲದ ಹೇಳಿಕೆ ಅಸಲಿಗೆ ಮೋದಿಗೂ ಆ ವಿಷಯಕ್ಕೂ ಸಂಭಂದ ಇರದೇ ಇರುವ ಕೆಲವು ಪ್ರಹಸನಗಳನ್ನು ಮುಂದೆ ಇಟ್ಟುಕೊಂಡು ಮೋದಿ ತಲೆ ಕೆಟ್ಟವ, ರಾಕ್ಷಸ , ರಾಜೀನಾಮೆ ಕೊಡ್ಲಿ ಎಂದು ಹೇಳಿ  ಬಿಟ್ಟರೆ ಆಯ್ತು , ಬೆಳಿಗ್ಗೆ ಆಗುವಷ್ಟಿಗೆ ಎಲ್ಲೋ ಮೂಲೆ ಯಲ್ಲಿ ಅಡಗಿ ಕುಳಿತ ಒಂದು ವಿಲಕ್ಷಣ ವಿಚಾರಧಾರೆಗೆ ಎಲ್ಲರೂ ಬಿಟ್ಟು ಬಿಡದೆ ನೀರೆರದು ಅದನ್ನೊಂದು ದೊಡ್ಡದಾದ ಬರಡು ಮರವನ್ನಾಗಿಸುವಲ್ಲಿ ನಾವು ನೀವೆಲ್ಲರೂ ಕಾರಣಿಕರ್ತರು ! ಬರಗೆಟ್ಟ ಟಿವಿ ಮಾಧ್ಯಮಕ್ಕಂತೂ ಒಂದು ವಾರಕ್ಕಾಗುವಷ್ಟು ಆಹಾರ !


ಅಲ್ಲೆಲ್ಲೋ ದೂರದ ಊರಿನಲ್ಲಿ ಕುಳಿತು ದೇಶದ ಹಿತಕ್ಕಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದು ನಮ್ಮೆಲ್ಲ ಕನಸುಗಳನ್ನು ಈಡೇರಿಸುವತ್ತ ನಿರತರಾಗಿರುವ ಒಬ್ಬ ಪ್ರಾಮಾಣಿಕ ಹಾಗು ದಕ್ಷ ಪ್ರಧಾನ ಮಂತ್ರಿ , ಇಲ್ಯಾರೋ ಕುಡಿದ ಮತ್ತಿನ್ನಲ್ಲಿ ಅನ್ನ  ಯಾವುದು ಹೇಸಿಗೆ ಯಾವುದು ಅಂತಲೂ ಗೊತ್ತಾಗದೆ ತಿನ್ನುತ್ತಾ ಕೂತಿರುವ  ನಿರ್ಗತಿಕ ಕ್ರಿಮಿ ಕೀಟಗಳೆಲ್ಲವೂ ಸೇರಿಕೊಂಡು ತಮ್ಮದೇ ಒಂದು ಗುಂಪು ಮಾಡಿಕೊಂಡು, ಮನೆಯಲ್ಲಿ ಹೆಗ್ಗಣ ಸತ್ತರೂ ಮೋದಿ ಕಾರಣ , ಹೆಂಡತಿ ಹೊಡೆದರೂ ಮೋದಿ ಕಾರಣ ಎಂದು ಬಳೆ ಒಡೆದುಕೊಂಡು ಅಳುವುದನ್ನು ನೋಡುವುದೇ ಒಂದು ತಮಾಷೆ ! ಯಾರೋ ದೊಂಬಿ ಎಬ್ಬಿಸಿ ಗಲಾಟೆ ಮಾಡಿದರೆ, ಅಲ್ಯಾರೋ ರೇಪ್ ಮಾಡಿ ಕೊಲೆ ಮಾಡಿದರೆ ಇನ್ಯಾವನೋ ದೇಶ ಬಿಟ್ಟು ಓಡಿ  ಹೋದರೆ ಎಲ್ಲದಕ್ಕೂ ಪ್ರಧಾನಿ ನೇ ಕಾರಣ ಅಂತಾದರೆ ನಮ್ಮ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬ ಪಟ್ಟದ ಅವಶ್ಯಕತೆ ಇದೆಯೆ ? ಅಸಲಿಗೆ ನಮ್ಮ ರಾಜ್ಯದ ಹೊರೆ ಮೊದಲು ಹೊರಬೇಕಾದ್ದು  ಪ್ರಧಾನಿ ಅಂತ ನನಗೆ ಇತ್ತೀಚಿಗಷ್ಟೇ ಮನವರಿಕೆಯಾದ ವಿಷಯ !


ಮೋದಿಯನ್ನು ನಂಬಿ ಇದುವರೆಗೂ ಹಾಳಾಗಿದ್ದಂತೂ ನಂಗೇನೂ ಕಾಣುತ್ತಿಲ್ಲ , ನಾನು ಭಕ್ತಳೆಂಬ ಕಾರಣವೂ ಇರಬಹುದು ! ಆದರೆ ಇದುವರೆಗೂ ದೇವಸ್ಥಾನ , ಮಠ,  ಮಂದಿರಗಳಿಗೆ ಸೀಮಿತವಾದ ಭಕ್ತ ಎಂಬ ವರ್ಗವೊಂದು ದೇಶ ಕಂಡ ಮಹಾನ್ ನಾಯಕನಿಗೂ ಅನ್ವಯವಾಗುತ್ತಿರುವುದು ಸಂತಸದ ವಿಷಯವೇ ಸರಿ ! ಕೇವಲ ಒಂದು ಜಿಲ್ಲೆಯ ಅಧಿಕಾರಿಯಾಗಿ ನೇಮಕಗೊಂಡವರನ್ನ ಕೇಳಿ ನೋಡಿ ಎಲ್ಲವೂ ಪಾರದರ್ಶಕವಾಗಿ ಒಂದಿಷ್ಟೂ ಹಗರಣಗಳಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು! ಇಂತಹ ನೂರಾರು  ಜಿಲ್ಲೆಗಳನ್ನೊಳಗೊಂಡ ೨೨ ರಾಜ್ಯಗಳನ್ನು ಅದ್ಹೇಗೆ ನಿಭಾಯಿಸುತ್ತಿರಯುವ ಆ ಶಕ್ತಿ ಅದೆಂಥದ್ದಿರಬಹುದು ?!

ಗಡಿಯಲ್ಲಿ ನಮಗಾಗಿ ಬಡಿದಾಡಿ ವೀರ ಮರಣ ಹೊತ್ತ ಒಬ್ಬೇ ಒಬ್ಬ ಸೈನಿಕನ ಹೆಸರನ್ನು ಹೇಳಲಾಗದ ನಮ್ಮೆಲ್ಲರ ದೇಶಭಕ್ತಿಗೆ ಹಾಗೂ ಒಂದು ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದು ಎಂದರೆ ಕೋತಂಬ್ರಿ ಸೊಪ್ಪನ್ನು ಮಾರುವಷ್ಟೇ ಸುಲಭ ಎಂದು ತಿಳಿದು ಹಗಲಿರುಳು ಬಾಯಿ ಬಡೆದುಕೊಳ್ಳುವ ಜನರನ್ನು ವಿಶ್ವ ವಿಖ್ಯಾತರನ್ನಾಗಿ ಮಾಡುವ ನಮ್ಮ ಅವಿರತ ಪ್ರಯತ್ನಕ್ಕೊಂದು ದೊಡ್ಡ ಸಲಾಂ !