Total Pageviews

Thursday, November 12, 2020

ಬದುಕು ಮಹೋತ್ಸವ ಎಂದ ಬೆಳಗೆರೆ

 

ನಾವು ಎಂಜಿನಿಯರಿಂಗ್ ಓದುವ ದಿನಗಳಲ್ಲಿ (ನಮ್ಮನ್ನ ತುಂಬಾ ಹಳೆ ಕಾಲದವರು ಅಂದುಕೊಳ್ಳೋ ಅವಶ್ಯಕತೆ ಇಲ್ಲ , ತೊಂಭತ್ತರ ಕಿಡ್ಸ್ ) ವಾಟ್ಸ್ ಆಪ್ , ಇನ್ಸ್ಟಾ , ಅಮೆಜಾನ್ ನೆಟ್ಫ್ಲಿಸ್ ಯಾವದೂ ಇರ್ಲಿಲ್ಲ , ಆಗಷ್ಟೇ ಹವಾ ಶುರು ಮಾಡಿದ ಆರ್ಕುಟ್ ಬಳಕೆದಾರರನ್ನು ಫೇಸ್ಬುಕ್ ತನ್ನೆಡೆಗೆ ಸೆಳೆಯುತ್ತಲಿತ್ತು, ಆಗ ನನ್ನಂತೆ ಅನೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬ್ಲಾಗಿಂಗ್  ಹವ್ಯಾಸ ಶುರು ಹಚ್ಚಿಕೊಂಡಿದ್ದರು, ಹಾಸ್ಟೆಲ್ ದಿನಗಳಲ್ಲಿ ಎಂಟ್ರ್ಟಟೈನ್ಮೆಂಟ್ ಅಂದ್ರೆ ಲ್ಯಾಪ್ಟಾಪ್ಗಳಲ್ಲಿ ಎಲ್ಲರೂ ಸೇರಿ ಮೂವಿ ನೋಡೋದು ಇಲ್ಲ ಒಬ್ಬರಾದಮೇಲೆ ಒಬ್ಬರು ರೊಟೇಷನ್  ಬೇಸ್ ಮೇಲೆ ಯಾವುದೊ ನಾವೆಲ್ ಓದುವುದು, ಸ್ವರ್ಗದಂಥ ದಿನಗಳವು. 

ಇವತ್ತು ಕನ್ನಡದಲ್ಲಿ ನನಗೆ ಸಂತೋಷ ಹಾಗೂ ತೃಪ್ತಿ ಸಿಗುವಷ್ಟು ವಿಚಾರ ಹಂಚಿಕೊಂಡು ಬರೆಯಲು ಪ್ರೇರಣೆ ನೀಡಿದ ಅನೇಕ ಜನರಲ್ಲಿ ಬೆಳಗೆರೆ ಕೂಡ ಒಬ್ಬರು, ಆ ದಿನಗಳಲ್ಲಿ, ನೂರೆಂಟು ಮಾತು, ಬೆತ್ತಲೆ ಜಗತ್ತು ಕಾಲಂ ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ ನನ್ನ ಓದುವ ಹುಚ್ಚು ನೋಡಿ ಗೆಳತೀ ಅರ್ಪಿತಾ ರವಿ ಬೆಳಗೆರೆಯ "ಹಿಮಾಲಯನ್ ಬ್ಲಂಡರ್" , "ಹೇಳಿ ಹೋಗು ಕಾರಣ" ಹಾಗೂ "ಖಾಸ್ ಬಾತ್" ಸೀರೀಸ್ ಪುಸ್ತಕಗಳನ್ನು ಓದಲು ಕೊಟ್ಟಳು, ಹಿಮಾಲಯನ್ ಬ್ಲಂಡರ್ ಓದು ಮುಗಿಸುವಷ್ಟರಲ್ಲಿ ಈ ಬೆಳಗೆರೆ ಎಂಬ ಮಾಂತ್ರಿಕ ನನ್ನ ಪೂರ್ಣ ಪ್ರಮಾಣದಲ್ಲಿ ಮೋಡಿ ಮಾಡಿದ್ದ, ಅದು ಟ್ರಾನ್ಸ್ಲೇಷನ್ ಕಣೆ ಖಾಸ್ ಬಾತ್ ಓದು ಅಂತ ಹೇಳಿದಾಗ, ಇಲ್ಲೇ ಯಾರೋ ಪಕ್ಕದಲ್ಲೇ ನಿಂತು ಹರಟೆ ಹೊಡೆಯುತ್ತ ಹರಟೆಯಲ್ಲೇ ಕೆಲವು ಸೂಕ್ಷ ವಿಚಾರಗಳನ್ನು ಆಪ್ತವಾಗಿ ಹೇಳುತ್ತಿದ್ದಾರೇನೋ ಅನ್ನಿಸಲು ಶುರುವಾಗಿತ್ತು, ಖಾಸ್ ಬಾತ್ ಹುಚ್ಚು ಹಿಡಿದು ನಾನು ಅರ್ಪಿತಾ ಸೇರಿ ಪ್ರತಿ ವಾರ ಹೈ  ಬೆಂಗಳೂರು ಓದಲು ಶುರು ಮಾಡಿದೆವು, ಜಾನಕೀ ಕಾಲಂ , ಹಾಗೂ ಖಾಸ್ ಬಾತ್ ಮತ್ತೆ  ಕೆಲವು ಗಾಸಿಪ್ ಬರಹಗಳು ನಮ್ಮ ಚರ್ಚೆಯ ವಿಷಯಗಳಾಗಿದ್ದವು, ಜಾನಕಿ ಹೆಸರಲ್ಲಿ ಜೋಗಿ ಬರೆಯುತ್ತಿದ್ದಿದು ತುಂಬ ವರ್ಷಗಳ ಮೇಲೆ ಗೊತ್ತಾಯ್ತು. 

ಅಷ್ಟರಲ್ಲಾಗಲೇ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎಂಥ happening ಕ್ಷೇತ್ರಗಳು ನಾವು ಮಾತ್ರ ಜೀವ ವಿಲ್ಲದ ಮಷೀನ್ , ಹಾಗೂ ಕಣ್ಣಿಗೆ ಕಾಣದ ಎಲೆಕ್ಟ್ರೋನ್ಸ್ಗಳ  ಬಗ್ಗೆ  ಓದುತ್ತ ಎಂಥ ಬೋರಿಂಗ್ ಜೀವನ ಮಾಡ್ತಾ ಇದೀವಿ ಅಂತ ಹಲವು ಬಾರಿ ಅನಿಸಿದರೂ ನಮ್ಮ ಜನರೇಶನ್ ನವರಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಬಿಟ್ರೆ ಆಯ್ಕೆಗಳೇ ಇರಲಿಲ್ಲವಲ್ಲ, ಓದು ಜೀವನ್ ನಡೆಸುವುದಕ್ಕಾಗಿ  , ಹಾಗೂ ಒಳ್ಳೆಯ ಉದ್ಯೋಗಕ್ಕಾಗಿ, ಆತ್ಮ ಸಂತೋಷಕ್ಕಾಗಿ ಬ್ಲಾಗ್ ಶುರು ಮಾಡಿದೆ, ಅದಕ್ಕೆ ಸಿಕ್ಕ ರೆಸ್ಪಾನ್ಸ್ ಒಮ್ಮೆಲೇ ಜರ್ನಲಿಸ್ಟ್ ಆಗುವ ಉಮೇದಿ ಹೆಚ್ಚಿಸಿತು . 

ಹೀಗೆ ಒಂದಿನ ಹೈ ಬೆಂಗಳೂರು ಓದುವಾಗ ಅಶೋಕ್ ಶೆಟ್ಟರ್ ಬಗ್ಗೆ ಒಂದು ಲೇಖನ ಬರೆದಿದ್ದರು ಬೆಳಗೆರೆ, ಆ ಲೇಖನ ಹೇಗಿತ್ತೆಂದರೆ, ಒಂದು ವರ್ಷದಿಂದ ಹೈ  ಬೆಂಗಳೂರು, ಓದುತ್ತಿದ್ದರೂ ಬೆಳಗೆರೆಯನ್ನು ಭೇಟಿಯಾಗಬೇಕು ಎನಿಸಿರಲಿಲ್ಲ, ಶೆಟ್ಟರ್ ಸರ್ ಧಾರವಾಡ, ನಂಗೆ ಪರಿಚಯನೇ ಇಲ್ವಲ್ಲ ಈ ಸೆಮ್ಸ್ಟರ್ ರಜೆ ಲಿ ಹೋಗಿ ಅವ್ರನ್ನು ಭೇಟಿ ಆಗಲೇ ಬೇಕು ಎಂದುಕೊಂಡು ಫೇಸ್ಬುಕ್ ಅಲ್ಲಿ ಹುಡುಕಿ ರಿಕ್ವೆಸ್ಟ್ ಕಳ್ಸಿದೆ, ಒಂದು ಮೆಸೇಜ್ ಕೂಡ ಹಾಕಿದೆ ಸರ್ ನಿಮ್ಮನ್ನ ಭೇಟಿ ಆಗ್ಬೇಕು ಅಂತ ಕರ್ನಾಟಕ ಯೂನಿವರ್ಸಿಟಿ archeology ಡಿಪಾರ್ಟ್ಮೆಂಟ್ ಗೆ ನನ್ನ ಬ್ಲಾಗ್ ಬರಹಗಳ ಪ್ರಿಂಟ್ ಔಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲ ಲೇಖನಗಳನ್ನು ಒಂದು ಫೈಲ್ನಲ್ಲಿ ಹಾಕಿಕೊಂಡು ನಾಳೆ ನೇ ಪತ್ರಕರ್ತೆ ಆಗಿ ಬಿಡುವ ಉತ್ಸಾಹದಿಂದ ಶೆಟ್ಟರ್ ಸರ್ ನ ಭೇಟಿಯಾದೆ, "ಭಾಳ್ ಚೊಲೋ ಬರೀತಿ ಆದ್ರ ರವಿ ಬೆಳೆಯಗೆ ಇನ್ಫ್ಲುಯೆನ್ಸ್ ಭಾಳ್ ಆಗೇತಿ ನಿಂಗ ಸ್ವಲ್ಪ ದಿನ ಅವನ ಬರಹ ಓದದೇ, ನಿನ್ನ ಲೇಖನ ಬರಿ" ಅಂದ್ರು. ಸರಿ ಅಂತ ಒಪ್ಪಿಕೊಂಡು "ಸರ್, ನಾ  ಇಂಜಿನಿಯರಿಂಗ್ ವಲ್ಯ ಭಾಳ ಬೋರಿಂಗ್ ಇದು ನ್ಯೂಸ್ anchor ಆಗ್ತೀನಿ ನಂಗ್ ರೆಫರ್ ಮಾಡ್ರಿ ಬೆಳಗೆರೆಗೆ ಹೇಳಿ" ಅಂದೇ, ನನ್ನ ಮಾರ್ಕ್ಸು ಸೆಮಿಸ್ಟರ್ ರಿಸಲ್ಟ್ ಕೇಳಿ "ತಲಿ ಕೆಟ್ಟದೇನವಾ ?, ಚೊಲೋ ಓದುಮುಂದ ಅರ್ದಕ್ಕ ಯಾಕ್ ಬಿಡತಿ , ಎಲ್ಲವೂ ಒಂದು ಹಂತ ಆದ್ಮೇಲೆ ಮೊನೊಟೋನೂಸ್ ಅನ್ಸೇ ಅನ್ಸುತ್ತೆ , ಸುಮ್ನ ಬ್ಲಾಗ್ ಬರ್ಕೊಂಡು ಓದು ಮುಗಸು, ಜೀವನಕ್ಕ ಏನು ಬೇಕು ಅನ್ನೋಕಿಂತ ಬದುಕಿಗೆ ಏನು ಬೇಕು ಅನ್ನೋದು ಇನ್ನು ತಿಳಿಯದ ವಯಸ್ಸು ನಿಂದು , ಮುಂದೊಂದಿನ  ನೀನೆ  ಇದರ ಬಗ್ಗೆ ತಮಾಷೆ ಮಾಡ್ತಿ ನೋಡು ಅಂತ ಬುದ್ಧಿ ಹೇಳಿ ಕಳ್ಸಿದ್ರು . 

ಅದಾದ್ಮೇಲೆ ನಿಧಾನವಾಗಿ, ಬೆಳಗೆರೆ ಮೇನಿಯಾ ಇಂದ ಹೊರಬರಲು ಶುರು ಮಾಡಿ ಅನೇಕ ಲೇಖಕರು, ಕಥೆಗಾರರು , ಕಾದಂಬರಿಗಾರರು ಭಿನ್ನ ಸಿದ್ಧಾಂತ, ಭಿನ್ನ ವೈಚಾರಿಕತೆ, ಎಲ್ಲದೂ ಅರ್ಥವಾಗುತ್ತಾ ಹೋದಂತೆ, ಬೆಳಗೆರೆಯವರ ಕಾಂಟ್ರವರ್ಸಿಗಳು ಒಹ್ ಇವರು ಇಷ್ಟೇ ಎಲ್ಲರೂ ಇಷ್ಟೇ ಬದುಕೇ ಬೇರೆ ಬರಹವೇ ಬೇರೆ ಎಂದು ಒಂದು ರೀತಿಯ ಘಾಸಿ ಉಂಟಾಯ್ತು, ಆವಾಗ್ಲೇ ಯಾರೇ ಇರಲಿ ಅವರ ವೈಯಕ್ತಿಕ ಬದುಕಿಗಿಂತ ಅವರ ಯಾವ ಗುಣದಿಂದ ಅಥವಾ ಯಾವ ಕೆಲಸದಿಂದ ಅವರು ನಮಗೆ ಇಷ್ಟ ಹಾಗೂ ಅದರಿಂದ ಯಾವ ಒಳ್ಳೆಯ ಗುಣವನ್ನು ನಾನು ಮೈಗೂಡಿಸಿಕೊಳ್ಳಬಹುದು ಎಂಬ transformational phase ನಲ್ಲಿ ಬೆಳಗೆರೆಯ ಹಾರ್ಡವರ್ಕ್ , ಅವರ ಅದಮ್ಯ ಜೀವನ ಪ್ರೀತಿ ಹಾಗೂ ಪೂರ್ಣ ಪ್ರಮಾಣದಲ್ಲಿ ಜೀವನ ಅನುಭವಿಸುವ ಗುಣಗಳು, ಅವರ ಕಷ್ಟದ ದಿನಗಳ ಹೋರಾಟ ಎಲ್ಲವನ್ನೂ ಮೆಚ್ಚಿಯೂ ಅವರನ್ನೂ ವೈಯಕ್ತಿಕವಾಗಿ ಭೇಟಿಯಾಗಲು ಬಯಸಲಿಲ್ಲ, ಭೇಟಿಯಾಗಲಿಲ್ಲ ಎಂಬ ಕೊರಗೂ ಇಲ್ಲ, ಆ ಮನುಷ್ಯನ ಅಕ್ಷರ ಕ್ರಾಂತಿ ನಮ್ಮ ಜನರೇಶನ್ ಹಲವು ಜನರಿಗೆ ಸ್ಪೂರ್ತಿ, ಈ ಬೆಳಗೆರೆಯವರ ಖಾಸ್ ಬಾತ್ ಓದದೇ  ಇದ್ದಿದ್ದರೆ ನನಗೆ ಗುರುವರ್ಯ ಶೆಟ್ಟರ್ ಸರ್ ಸಿಗುತ್ತಿರಲಿಲ್ಲ. 

೬೨ ಕಮ್ಮಿ ಅಂತ ನಮಗೆ ಅನ್ನಿಸಿದರೂ ಒಂದಿನಿತು ರಿಗ್ರೆಟ್ ಇಲ್ಲದೇ ಬದುಕಿಹೋದ ಅವರ ಛಲ ಹಾಗೂ ಜೀವವೋತ್ಸಾಹ ನಮಗೆಲ್ಲರಿಗೂ ಮಾದರಿ, He celebrated his life and  Am Glad that I witnessed his existence !!


No comments:

Post a Comment