Back home :-)! ಅಂತು- ಇಂತೂ ಇಂಜಿನಿಯರಿಂಗ್ ಮುಗಿಸಿದ್ದಾಯ್ತು. ನಿನ್ನೆ ಮನೆಗೆ ಬಂದಾಗಿನಿಂದ ನಿಜವಾಗಲು ನಾನು ಡಿಗ್ರಿ ಮುಗಿಸಿದ್ದೇನ? ತುಂಬಾ ದೊಡ್ಡವಳು ಆದೆನ? ನನ್ನ ಪುಣ್ಯಕ್ಕೆ ಈವತ್ತು ಸಂಡೇ ಅಮ್ಮನಿಗೆ ರಜೆ, ಮನೆಯಲ್ಲಿ ಇದಾಳಲ್ಲ, ಸರಿ ಅಮ್ಮನ ತೆಲೆ ತಿನ್ನೋಣ ಅಂತ, ಅಮ್ಮ.. ನಾನು ನಿಜವಾಗಲು....? ಬಂದಾಗಿನಿಂದ ೧೦೦ ಸಲ ಕೇಳಿದ್ದೆ ಕೇಳ್ತಾ ಇದ್ದೀಯ ಏನಾಗಿದೆ ನಿನಗೆ? ಜಗತ್ತಿನಲ್ಲಿ ನೀನೊಬ್ಬಳೆ ಡಿಗ್ರಿ ಮುಗ್ಸಿದಿಯ ಏನ್ ಕಥೆ? ನನ್ನ ಪುಟ್ಟ ಮಗು ನನಗೆ ಯಾವಾಗಲು ಪುಟ್ಟ ಮಗುನೆ! ನಾಲ್ಕು ವರ್ಷ ನೀನು ಮನೇಲಿ ಇರಲಿಲ್ಲ ಅನ್ನೋದು ಬಿಟ್ಟರೆ, ನಿನ್ನಲ್ಲಂತೂ ಯಾವ maturity ಕೂಡ ನನಗೆ ಕಾಣುತ್ತಿಲ್ಲ, ಆದರು ಹೊರಗಿನ ಜನಕ್ಕೆ ನೀನು ಈಗ ದೊಡ್ದವಳೇ! ಇನ್ನು ಮೇಲಾದರೂ ತಮ್ಮನ ಜೊತೆ ಹೊಡೆದಾಡಬೇಡ, ದೊಡ್ಡ ದನಿಯಲ್ಲಿ ಕೂಗಾಡಬೇಡ, ಸ್ವಲ್ಪ ಸೀರಿಯಸ್ ಆಗಿ ಇರೋದನ್ನ ಕಲಿ, ಚೆಲ್ಲು ಚೆಲ್ಲಾಗಿ ಆಡುವದನ್ನು ಬಿಡು........and the list continues...ಯಾಕಾದರೂ ಅಮ್ಮನ್ನ ಕೆಳಿದೇನೋ ಅನ್ನುವಷ್ಟು advise ಗಳ ಸುರಿಮಳೆ!
ಇತ್ತ ಅಮ್ಮ ಹೇಳಿದ್ದನ್ನೇ ಹೇಳುತ್ತಿರುವಾಗ,ಸದ್ದಿಲದಂತೆ ಹಾಲಿನ ಲೋಟ ಎತ್ತುಕೊಂಡು, ಬಿಸಿ ಬಿಸಿ ಟೀ ಹೀರುತ್ತಾ ಪೇಪರ್ ಓದುತ್ತ ಕುಳಿತ ಅಪ್ಪನ ಪಕ್ಕದಲ್ಲಿ ಹೋಗಿ ಕುಳಿತು, ಟಿವಿ ಆನ್ ಮಾಡಿದಾಗ ಬಂದ ಮೊದಲ ಸುದ್ದಿ FDA ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ ೭ ಲಕ್ಷ ರುಪಾಯೀ ಎಂಬ breaking ನ್ಯೂಸ್! ಅಮ್ಮ ಅಡುಗೆ ಮನೆಯಿಂದ ಹೊರ ಬಂದು, ನನ್ನ ತೆಲೆ ಮೊಟಕಿ , ನೋಡು ಬರೀ FDA ಪರೀಕ್ಷೆಗೆ ಈ ಪರಿಸ್ಥಿತಿ, ಇನ್ನು ನೀನು ಇಂಜಿನಿಯರಿಂಗ್ ಓದಿದ್ದು ಸಾಕು, Mtech ಮಾಡಲ್ಲ, IAS ಮಾಡ್ತೀನಿ ಅಂತೀಯ? ಎಲ್ಲ ಸರಕಾರೀ ಪರಿಕ್ಷೆಗಳದ್ದು ಇದೆ ಹಣೆ ಬರಹ, ಆಮೇಲೆ ನೀನು depressed ಆಗಿ ತೆಲೆ ಕೆಡಿಸಿಕೊಳ್ಳುವುದು ಬೇಕಿಲ್ಲ, ಸುಮ್ಮನೆ PGCET ಬರೆದು Mtech ಮಾಡು. ಅದಾದಮೇಲೆ ಏನು ಬೇಕೋ ಅದನ್ನ ಮಾಡ್ಕೋ...ಅಮ್ಮ ನಂಗೆ ಹೇಳುತ್ತಿಲ್ಲವೇನೋ ಎಂಬಂತೆ ಪೇಪರ್ ಓದುತ್ತ ಕುಳಿತುಕೊಂಡೆ.
ಅತ್ತ ಅಪ್ಪ ಕೂಡ, ಹೌದು ಪುಟ್ಟ ಸುಮ್ಮನೆ ಸಮಯ ವ್ಯರ್ಥ ಮಾಡಬೇಡ PGCET preparation ಶುರು ಮಾಡು. ನಾನು ಯಾವತ್ತು ನಿನ್ನ ಕನಸುಗಳಿಗೆ ಅಡ್ಡ ಬಂದವನಲ್ಲ, ಈವತ್ತಿಗೂ ನನಗೆ ನಿನ್ನ ಸಾಮರ್ಥ್ಯದ ಬಗ್ಗೆ ಅನುಮಾನಗಳಿಲ್ಲ, ನೀನು ಮೊದಲು Mtech ಮುಗಿಸಿ ಆಮೇಲೆ ಇದರತ್ತ ಗಮನಹರಿಸು. ನಮ್ಮ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಖಂಡಿಸುವ, ಖಂಡಿಸಿ ಬರೆಯುವ ಹುಮ್ಮಸ್ಸು, ಧೈರ್ಯ ಎರಡೂ ನಿನ್ನಲಿದೆ, ಆದರೆ ಇದು ಕೇವಲ ಇವೆರಡರಿಂದ ಆಗುವ ಕೆಲಸವಲ್ಲ. ನಾನು ಅಮ್ಮನ ಹಾಗೆ ಮಾತಾಡ್ತಾ ಇದೀನಿ ಅನ್ಕೊಬೇಡ, lets be practical, ನಮಗೆ ಇನ್ನೊಂದು option ಇರಲೇಬೇಕು, ಇದಾಗದಿದ್ದರೆ ಇನ್ನೊಂದು ಅನ್ನೋ ಥರ, ನೋಡು ಯೋಚನೆ ಮಾಡು, ಇಷ್ಟಾಗಿಯೂ ನಿನಗೆ ಅದೇ ಮಾಡುವುದಿದ್ದರೆ ಮಾಡು ಪರವಾಗಿಲ್ಲ, ನಾವೇನು ಅಡ್ಡ ಬರೋಲ್ಲ, ದೆಲ್ಹಿಗೆ ಹೋಗುವ ವ್ಯವಸ್ಥೆ ಮಾಡ್ತೇನೆ.
ಬೆಳಗ್ಗೆ ಬೆಳೆಗ್ಗೆನೆ ತುಂಬಾ ಖಿನ್ನತೆಗೆ ಆವರಿಸಿ ಕೊಂಡಿರುವಂತಾಗಿ, ಏನು ಮಾಡಿ ಏನು ಪ್ರಯೋಜನ? ನಾನು ಯಾವ ಊರಿನ ದಾಸಯ್ಯ? ಯಾವ ಆದರ್ಶ ಅಂತ ಇಟ್ಟು ಕೊಂಡು ಬದುಕಿ ಏನಾಗ ಬೇಕಿದೆ? ಒಂದು ಕಡೆಯಲ್ಲಿ ಭ್ರಷ್ಟ ಸರಕಾರ, ಇನ್ನೊಂದು ಕಡೆ ತಮ್ಮನ್ನು ತಾವು ಸನ್ಯಾಸಿಗಳು ಎಂದು ಹೇಳಿಕೊಂಡು ೧೦೦ ತೆಲೆಮಾರಿಗಾಗುವಷ್ಟು ಸಾವಿರ ಕೋಟಿಗಳಲ್ಲಿ ದುಡ್ಡು ಮಾಡುವ ಬಾಬಾಗಳು, ಹೇಸಿಗೆ ಹುಟ್ಟುವಷ್ಟು ಜನರ ಮೌಢ್ಯ, ಇಂಥವರ ಮುಖವಾಡ ಬಯಲು ಮಾಡಿ ಪುಟಗಟ್ಟಲೆ ಲೇಖನ ಬರೆದು, ಗಂಟಗಟ್ಟಲೆ TV ಪರದೆಯ ಮೇಲೆ ಭಾಷಣ ಹೊಡೆದು, ಕಡೆಗೆ ಅವಕಾಶ ಸಿಕ್ಕಾಗಲೆಲ್ಲ ಇದೆ ಭ್ರಷ್ಟರಿಂದ ಸೈಟು-ಮನೆ ಮಾಡಿಕೊಂಡು ಸಮಾಜಕ್ಕೆ ನೈತಿಕ ಪಾಠ ಹೇಳಿ ಕೊಡುತ್ತಿರುವಾಗ, ನನ್ನೊಬ್ಬಳಿಂದ ಅಥವಾ ನನ್ನಂಥ ಅನೆಕರಿಂದಾದರು ಏನು ಮಾಡಲು ಸಾಧ್ಯ? ನಾವೆಲ್ಲಾ ಎತ್ತ ಸಾಗುತ್ತಿದ್ದೇವೆ? ಮುಂತಾದ ಪ್ರಶ್ನೆಗಳು ತೆಲೆಯಲ್ಲಿ ಹೊಕ್ಕಿ ಕೊರೆಯಲು ಶುರು ಮಾಡಿದವು.
ಏನಾಗಿದೆ ನಮ್ಮ ಜನರಿಗೆ? ಬಾಬಾ ರಾಮದೇವ್ ಆಸ್ತಿ ಸವಿಸ್ತಾರವಾಗಿ ಅಂಕೆ ಅಂಶಗಳ ಬಹಿರಂಗ ಪಡಿಸಿದ್ದಾಗಿಯು, ಪಕ್ಕದ ಮನೆ ಆಂಟಿ ಅವನಿಂದಲೇ ಅವರ ಮಧುಮೇಹ ವಾಸಿ ಆಯಿತು ಅಂತ ಹೇಳ್ಕೊತಾರಲ್ಲ ಯಾಕೆ? ಪುಟ್ಟ ಪರ್ತಿಯ ಜನರಿಗಂತೂ ಸತ್ಯ ಸಾಯಿ ಬಾಬಾ ನಡೆದಾಡುವ ದೇವರು, ಸಚಿನ್ ತೆಂಡೂಲ್ಕರ್ ಅಂಥ ಸ್ಟಾರ್ ಕೂಡ ಬಾಬಾನ ಚಮತ್ಕಾರಗಳಿಗೆ ಮಾರು ಹೋಗಿದ್ದನೆಂದರೆ, ಉಳಿದ ಜನ ಸಾಮಾನ್ಯರ ಪಾಡೇನು? ಯಾಕೆ ಜನರು ಇಷ್ಟು ಸುಲಭವಾಗಿ ಮೋಸ ಹೋಗುತ್ತಾರೆ? ಜನರ ಅಮಯಕತೆಯನ್ನೇ ಬಂಡವಾಳ ಮಾಡಿಕೊಂಡು, ಕೋಟಿಗಟ್ಟಲೆ ಹಣ ಮಾಡುವ ಇಂಥ ನೀಚ ಬಾಬಾಗಳನ್ನು ಅವತಾರ ಪುರುಷರು ಎಂಬಂತೆ 24x7 ಹೇಳಿದ್ದನ್ನೇ ಹೇಳುವ ಚನ್ನೆಲ್ಲುಗಳು, ಅಸಾಹಯಕ ವೀಕ್ಷಕರು ಥೂ-ಛಿ ಎಂಬ ಉಧ್ಗಾರಗಳನ್ನು ಬಿಟ್ಟು ಬೇರೆ ಇನ್ನೇನು ಮಾಡಲು ಸಾಧ್ಯ?
ಸೆಕ್ಸ್-ಸ್ಕ್ಯಾಂಡಲ್ ಇಂದಾಗಿ ಇಡೀ ಸನ್ಯಾಸಿಗಳ ಅಸ್ತಿತ್ವವನ್ನೇ ಅವಮಾನಿಸಿದ, ಸ್ವಾಮಿ ನಿತ್ಯಾನಂದನಿಗೆ ಇವತ್ತಿಗೂ ದೇಶ ವಿದೇಶಗಳಿಂದ ಭಕ್ತ ಸಾಗರ ಹರಿದು ಬರುತ್ತಿರುವದು, ನಿಜಕ್ಕೂ ವಿಪರೀತ ಭಕ್ತಿಯ ಪರಾಕಾಷ್ಟೆ ಅಂತೆ ಹೇಳಬೇಕು..ನಮ್ಮಂತೆ ಅವನು ಕೂಡ ಉಪ್ಪು-ಖಾರ ತಿನ್ನುವ ಮನುಷ್ಯ ತಪ್ಪು ಮಾಡಿದ್ದರೂ ಮಾಡಿರಬಹುದು, ತಪ್ಪನ್ನು ನೋಡಿಕೊಳ್ಳಲು ಕೋರ್ಟ್ ಇದೆ, ಆದರು ಆತ ಕೇವಲ ಮುಟ್ಟಿಯೇ ನನ್ನ ರೋಗ ಗುಣ ಪಡಿಸಿರುವ ಪವಾಡ ಪುರುಷ. ಯಾರು ಏನೇ ಹೇಳಿದರು ಅವನಿಂದ ನಂಗೆ ಒಳ್ಳೆಯದೇ ಆಗಿದೆ ಹಾಗಾಗಿ ನಾನು ಅವನಲ್ಲಿಗೆ ಮತ್ತೆ ಮತ್ತೆ ಹೋಗಿ ನನ್ನ ರೋಗ ವಾಸಿ ಮಾಡಿಕೊಂಡು ಬರುತ್ತೇನೆ ಅಂತ ಹೇಳುವ ಅವಿವೇಕಿ ಭಕ್ತರಿಗೆ ಏನನ್ನು ಹೇಳಲು ಸಾಧ್ಯ?
ಅಯ್ಯೋ ನಮ್ಮ ಬಾಬಾ ರಾಮದೇವ್, ಆ ನಿತ್ಯಾನಂದನಿಗಿಂತ ಒಳ್ಳೆಯವನಲ್ಲವ? ಈವತ್ತು ಎಲ್ಲ ಸ್ವಾಮಿಗಳು ದುಡ್ಡು ಮಾಡುತ್ತಿದ್ದಾರೆ, ರಾಮದೇವ್ ಒಬ್ಬನೇ ಏನು ಅಲ್ಲವಲ್ಲ? ಅವನು ಎಷ್ಟೇ ದುಡ್ಡು ಮಾಡಿದ್ದರೆನಂತೆ, ಅವನು ಕ್ಯಾನ್ಸೆರ್ ಮತ್ತು ಏಡ್ಸ ರೋಗಗಳನ್ನು ವಾಸಿ ಮಾಡಬಲ್ಲ, ನಮಗೆ ಅವನ ವೈಯಕ್ತಿಕ ಬದುಕು, ಅವನ ಹಣ, ಆಸ್ಥಿಗಳಿಂದ ಏನಾಗಬೇಕಿದೆ? ನನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರೆ ಕತ್ತೆ ಕಾಲಾದರೂ ಹಿಡಿದು ಬಗೆ ಹರಿಸಿ ಕೊಳ್ಳಲು ಸಿದ್ಧನಿರುವಾಗ, ರಾಮದೇವ್ ಎಂಬ ಪರಮ ದೇಶ ಭಕ್ತನ ಅನುಯಾಯಿ ಆದರೆ ತಪ್ಪೇನು ಎಂದು ಕೇಳುವವರಿಗೆ ಏನು ಹೇಳಬಹುದು?
ಇವತ್ತು ನಮ್ಮ ದೇಶದಲ್ಲಿ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆಯೋ, ಅದರ ಎರಡು ಪಟ್ಟು ಮಠ-ಮಂದಿರಗಳು ಮತ್ತು ಅದರ ಸ್ವಾಮಿಗಳು ಆ ಗಬ್ಬಿನಲ್ಲೇ ಮುಳಿಗೆದ್ದು ಹೋಗಿದ್ದಾರೆ, ಹಿಂದೆ ಕೆಟ್ಟು ಹೋದ ಸಾಮ್ರಾಜ್ಯ ಎಂದೇ ಖ್ಯಾತಿಗಳಿಸಿದ್ದ ರಾಜಕೀಯ ಕೂಡ ಈ ಬಾಬಾಗಳ ಭ್ರಷ್ಟತೆ ಗಿಂತ ವಾಸಿ ಎನ್ನುವ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದಿದಿರುವುದು ಎಂಥ ವಿಪರ್ಯಾಸ? ಭಾರತ ದೇಶ ತನ್ನ ಸಂಸ್ಕೃತಿ, ಧ್ಯಾನ, ಆಧ್ಯಾತ್ಮ, ಯೋಗಗಳಿಂದಲೇ, ಹೊರಜಗತ್ತಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದು, ಈವತ್ತು ನಿಜವಾಗಲು ನಮ್ಮ ಮಣ್ಣಿನಲ್ಲೇ ಸ್ವಾಮಿ ವಿವೇಕಾನಂದ ನಂಥ ಮಹಾ ಪುರುಷರು ಜನಿಸಿದ್ದರಾ? ಎಂಬ ಪ್ರಶ್ನೆ ಕೇಳುವ ಹಾಗಾಗಿದೆ? ಎಷ್ಟೋ ವರ್ಷಗಳ ಹಿಂದೆ ಸರ್ವಜ್ಞ್ಯ'' ತನ್ನ ಬಿಟ್ಟು ದೇವರಿಲ್ಲ'' ಎಂಬ ಉಕ್ತಿಯನ್ನು ಇಂಥ ಕಲಿಯುಗದ ಢೋಂಗಿ ಬಾಬಾಗಳನ್ನು ತೆಲೆಯಲ್ಲಿ ಇಟ್ಟುಕೊಂಡೆ ಹೇಳಿರಬಹುದ? ಏನೇ ಆದರು ಸರ್ವಜ್ನ್ಯನ ದೂರಾಲೋಚನೆಗೆ HATS OFF!




