Total Pageviews

Tuesday, May 1, 2018

ಮೋದಿ ಎಂಬ ಮಾಯೆ ಮತ್ತು ನಾವು !


ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು, ಕಾಲೇಜುಗಳಲ್ಲಿ  ಪಾಠ ಮಾಡುವ ಉಪನ್ಯಾಸಕರು, ಪ್ರಾಧ್ಯಾಪಕರು  ಹಾಗೂ ಸಮಾಜದಲ್ಲಿ ಮುಖಂಡ ಎನಿಸಿಕೊಂಡವ ಮತ್ತು ರಾಜಕೀಯ ನಾಯಕ , ಇವರೆಲ್ಲರಿಗೂ ವಕ್ಚಾತುರ್ಯ ಮತ್ತು ಜನರನ್ನು ಆಕರ್ಷಣೆ ಮಾಡುವ ಕಲೆ ಗೊತ್ತಿಲ್ಲದಿದ್ದರೆ ಇವರುಗಳ ಸರ್ವೈವಲ್ ತುಂಬಾ ಕಷ್ಟ !

ನಾನು ಮೋದಿ ಅಭಿಮಾನಿ ಹಾಗೂ ಇತ್ತೀಚಿಗೆ ಈ ಆಗದವರು ಅಂತೆ ಇರುವ ಕೆಲವರು ಹೆಸರಿಸಿರುವ ಹಾಗೆ ಭಕ್ತಳೂ ಹೌದು !
 ಇದಕ್ಕೆ ಕಾರಣ ಇದೆ.. ಎಲ್ಲರೂ ಹೇಳಿರಬಹುದು ಆದರೂ ನಮ್ಮ ಕರ್ನಾಟಕದ ಚುನಾವಣೆಯ ಸಂಧರ್ಭ ಆಗಿದ್ದರಿಂದ ಇದು ನನ್ನ ಅಭಿಯಾನದ ಲೇಖನ ಎಂದುಕೊಳ್ಳಬಹುದು ! ನಮ್ಮೆಲ್ಲರಿಗೂ ರಾಜಕೀಯ ಎಂದರೆ ಬರಿ ಮೋಸ , ದಗಾ , ವಂಚನೆ ಹಾಗೂ  ಹಗರಣಗಳ ಕ್ಷೇತ್ರ , ಇಲ್ಲಿ ಒಳ್ಳೆಯವರು ಮತ್ತು ಓದಿಕೊಂಡವರು ಬರುವಂತಿಲ್ಲ ಎಂಬ ಅಲಿಖಿತ ನಿಯಮ ವನ್ನು ಎಲ್ಲರೂ ಶಿರಸಾ ಪಾಲಿಸುತ್ತಿದ್ದ ದಿನಗಳಲ್ಲಿ ದಿಢೀರನೆ ಒಂದು ಚೈತನ್ಯ ಕಾಣಲು ಸಿಕ್ಕ್ಕಿತು ! ಒಂದೇನೋ ಹೊಸ ಅಲೆ , ಹೊಸ ಯೋಚನೆ,ಹೊಸ ಕನಸು ಹೊತ್ತು ಬಂದ  ಫಕೀರನಂತೆ ಕಂಡದ್ದು  ನಮ್ಮ ಮೋದಿ .

ಮೋದಿ ಎಂಬ ದೈತ್ಯ ವ್ಯಕ್ತಿತ್ವ ಎಂಥೆಂಥವರನ್ನೋ ಮಾರುಳಾಗುವಂತೆ ಮಾಡಿತು, ಏಕೆಂದರೆ ಆ ವ್ಯಕ್ತಿತ್ವ ಕೇವಲ ತನಗಾಗಿ ಮಾಡಲ್ಪಟ್ಟಿದ್ದಲ್ಲ ಬದಲಾಗಿ ಒಂದು ಹೊಸ ಅಲೆಯ ಆಗಮನಕ್ಕಾಗಿ ಇರುವಂಥದ್ದು ಅಂತ ಮನದಟ್ಟು ಮಾಡಲು ಆಯ್ದು ಕೊಂಡ ಮೊದಲ ಅಸ್ತ್ರ ಜನರನ್ನು ತಲುಪುವುದು ಮತ್ತು ತುಂಬಾ ಸರಳ ಹಾಗೂ ಮನಸಿಗೆ ನಾಟುವ ಪದಗಳಿಂದ ಜನರನ್ನ ತಲುಪುವುದು ! ಈರುಳ್ಳಿ ಬೆಲೆ ಇಂದ ಹಿಡಿದು ಬಾಹ್ಯಾಕಾಶದಲ್ಲಿ  ಹಾರಾಡುವ ರಾಕೆಟ್ ವಿಷಯ ಇರಬಹುದು ಅಥವಾ ಡಿಜಿಟಲ್ ಸಂವಹನದಿಂದ ಹಿಡಿದು ಹಲವು ಯೋಜನೆ ಗಳು , ಕಾರ್ಯಕ್ರಮಗಳು  ಕಡೆಗೆ GST ವರೆಗೂ ಪ್ರತಿ ವಿಷಯವನ್ನು ಕೂಲಂಕುಷವಾಗಿ ಅಳೆದು ತೂಗಿ ವಾಹ್ ಮಾತಾಡಿದ್ರೆ ಹೀಗೆ ಮಾತಾಡ್ಬೇಕು ಅಂತ ವಾಜಪೇಯಿ ನಂತರ ಭಾರತದಲ್ಲಿ ಜನ ಯಾರನ್ನಾದರೂ ನೋಡಿ ಪುಳಕಿತರಾಗಿದ್ದರೆ ಅದು ಮೋದಿ ಮಾತ್ರ !

ಒಂದು ಕ್ಷಣ ಯೋಚಿಸಿ ವಾಜಪೇಯಿ ನಂತರದ  ಕಾಲಮಾನದಲ್ಲಿ , ಬರೋಬ್ಬರಿ ಹತ್ತು ವರ್ಷ ನಮ್ಮ ದೇಶ ನಿಚ್ಚಳ ಮೌನದಲ್ಲಿದ್ದಂತೆ ಭಾಸವಾಗುತ್ತಿತ್ತು . ನಮಗ್ಯಾರಿಗೂ ಫೀಲ್ ಗುಡ್ ಫ್ಯಾಕ್ಟರ್ಸ್ ಗಳೇ ಇರಲಿಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಬಾಯಿಗೆ ಸಿಕ್ಕಲ್ಲಿ ಗುಟ್ಕಾ ಪಾನ್ ಜಗಿದು ಗೋಡೆಗಳನೆಲ್ಲ ರಂಗೇರಿಸುತ್ತಿದ್ದ ಜನ ಇವತ್ತು , ಸ್ವಚ್ಚ ಭಾರತ ಅಭಿಯಾನ್ ಕಣ್ರೀ ಹಿಂಗೆಲ್ಲ ಎಸಿಬಾರ್ದು ಅನ್ನೋ ಘಟ್ಟ ತಲುಪಿದ್ದಾರೆ. ಕಚೇರಿ ಇಂದ ಎದ್ದು ಹೊರಡುವಾಗ ಸಿಸ್ಟೆಮ ಆಗ್ಲಿ ಲೈಟ್ ಆಗ್ಲಿ ಆರಿಸುವಾಗ ನಂದಲ್ಲ ಕಂಪನಿ ತಾನೇ ನೋಡ್ಕೊಳ್ತಾರೆ ಬಿಡು ಅನ್ನುವ ಜನ ದೇಶದ ಸಂಪನ್ಮೂಲ ಹಾಳು  ಮಾಡಬಾರದು ಅನ್ನುತ್ತಿದ್ದಾರೆ !   ಹಳ್ಳಿಗಳಲ್ಲಿ ಲಕ್ಷ ಲಕ್ಷ ಜನ ಬಹಿರ್ದೆಸೆಯಿಂದ ಮುಕ್ತಿ ಹೊಂದಿ ಶೌಚಾಲಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ! ಇಲ್ಲಿ ನಾನು ಎಲ್ಲ ಬದಲಾವಣೆ ಆಗಿಯೇ ಹೋಯಿತು ಎಲ್ಲ ಅಂದು ಕೊಂಡಂತೆ ನಡೆದೇ ಹೋಯಿತು ಅಂತ ಹೇಳುತ್ತಿಲ್ಲ , ಒಂದು ಬದಲಾವಣೆಯ ಗಾಳಿಯಂತೂ ಬೀಸುತ್ತಿದೆ ( Let's not get into numerical facts and counter attacks!) ನಾ ಕಂಡಂತೆ ನನ್ನ ಪರಿಧಿಯೊಳಗೆ ನಾ ಕಂಡಷ್ಟು ಮಾತ್ರ ಇಲ್ಲಿ ಹೇಳಿದ್ದೇನೆ . ಯಾವುದೇ ವಿಷಯವನ್ನು ಜನರು  ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದಂತೂ ಇತಿಹಾಸದ ಯಾವ ಪುಟಗಳಲ್ಲೂ  ಕಾಣ ಸಿಗುವುದಿಲ್ಲ !

ಚುನಾವಣಾ ಪೂರ್ವ ಹಲವು ಭರವಸೆಗಳನ್ನು ಮಂಡಿಸಿದ್ದಿರಬಹುದು ಹಾಗೂ ಅದ್ರಲ್ಲಿ ಕೆಲವು ಈಡೇರದೇ ಇರಲುಬಹುದು, ಇಲ್ಯಾರೂ ೧೦೦ ಪ್ರತಿಶತ efficiency  ಕೊಡುವ ಮಶಿನ್ ಗಳಿಲ್ಲ , ಮಲ್ಯ ಓಡಿ  ಹೋಗಿದ್ದಕ್ಕೆ ಮೋದಿ ರಾಜೀನಾಮೆ ಕೊಡಲಿ ಎಂದು ಬೊಬ್ಬೆ ಇಡುವವರು ಅದೇ ಮಲ್ಯನ RCB ಟೀಮ್ನ ಪರ ವಹಿಸಿಕೊಂಡು ಮಲ್ಯ ತೆಂಗಿನಕಾಯಿ ಚಿಪ್ಪು ಕೊಟ್ಟರೂ ಪರ್ವಾಗಿಲ್ಲ ಕಪ್ ನಮ್ದೇ ಎಂದು ಎದೆ ಬಡಿದುಕೊಂಡು ಮ್ಯಾಚ್ ನೋಡಲು ಹೋಗುತ್ತಾರೆ !   ನಮ್ಮ ಸೋಶಿಯಲ್ ಮೀಡಿಯಾ ಪ್ರಭಾವ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರೆ , ಒಬ್ಬ ಮನುಷ್ಯ ತನ್ನ ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದು ಅವನನ್ನು ಯಾರೂ ಗಮನಿಸುತ್ತಿಲ್ಲ ಅವನ ಮಾತು ಯಾರೂ ಕೇಳುತ್ತಿಲ್ಲ ಎಂದೆನಿಸಿ ರಾತ್ರೋ ರಾತ್ರಿ ಮೋದಿ ಬಗ್ಗೆ ಒಂದೆರಡು ಇಲ್ಲ ಸಲ್ಲದ ಹೇಳಿಕೆ ಅಸಲಿಗೆ ಮೋದಿಗೂ ಆ ವಿಷಯಕ್ಕೂ ಸಂಭಂದ ಇರದೇ ಇರುವ ಕೆಲವು ಪ್ರಹಸನಗಳನ್ನು ಮುಂದೆ ಇಟ್ಟುಕೊಂಡು ಮೋದಿ ತಲೆ ಕೆಟ್ಟವ, ರಾಕ್ಷಸ , ರಾಜೀನಾಮೆ ಕೊಡ್ಲಿ ಎಂದು ಹೇಳಿ  ಬಿಟ್ಟರೆ ಆಯ್ತು , ಬೆಳಿಗ್ಗೆ ಆಗುವಷ್ಟಿಗೆ ಎಲ್ಲೋ ಮೂಲೆ ಯಲ್ಲಿ ಅಡಗಿ ಕುಳಿತ ಒಂದು ವಿಲಕ್ಷಣ ವಿಚಾರಧಾರೆಗೆ ಎಲ್ಲರೂ ಬಿಟ್ಟು ಬಿಡದೆ ನೀರೆರದು ಅದನ್ನೊಂದು ದೊಡ್ಡದಾದ ಬರಡು ಮರವನ್ನಾಗಿಸುವಲ್ಲಿ ನಾವು ನೀವೆಲ್ಲರೂ ಕಾರಣಿಕರ್ತರು ! ಬರಗೆಟ್ಟ ಟಿವಿ ಮಾಧ್ಯಮಕ್ಕಂತೂ ಒಂದು ವಾರಕ್ಕಾಗುವಷ್ಟು ಆಹಾರ !


ಅಲ್ಲೆಲ್ಲೋ ದೂರದ ಊರಿನಲ್ಲಿ ಕುಳಿತು ದೇಶದ ಹಿತಕ್ಕಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದು ನಮ್ಮೆಲ್ಲ ಕನಸುಗಳನ್ನು ಈಡೇರಿಸುವತ್ತ ನಿರತರಾಗಿರುವ ಒಬ್ಬ ಪ್ರಾಮಾಣಿಕ ಹಾಗು ದಕ್ಷ ಪ್ರಧಾನ ಮಂತ್ರಿ , ಇಲ್ಯಾರೋ ಕುಡಿದ ಮತ್ತಿನ್ನಲ್ಲಿ ಅನ್ನ  ಯಾವುದು ಹೇಸಿಗೆ ಯಾವುದು ಅಂತಲೂ ಗೊತ್ತಾಗದೆ ತಿನ್ನುತ್ತಾ ಕೂತಿರುವ  ನಿರ್ಗತಿಕ ಕ್ರಿಮಿ ಕೀಟಗಳೆಲ್ಲವೂ ಸೇರಿಕೊಂಡು ತಮ್ಮದೇ ಒಂದು ಗುಂಪು ಮಾಡಿಕೊಂಡು, ಮನೆಯಲ್ಲಿ ಹೆಗ್ಗಣ ಸತ್ತರೂ ಮೋದಿ ಕಾರಣ , ಹೆಂಡತಿ ಹೊಡೆದರೂ ಮೋದಿ ಕಾರಣ ಎಂದು ಬಳೆ ಒಡೆದುಕೊಂಡು ಅಳುವುದನ್ನು ನೋಡುವುದೇ ಒಂದು ತಮಾಷೆ ! ಯಾರೋ ದೊಂಬಿ ಎಬ್ಬಿಸಿ ಗಲಾಟೆ ಮಾಡಿದರೆ, ಅಲ್ಯಾರೋ ರೇಪ್ ಮಾಡಿ ಕೊಲೆ ಮಾಡಿದರೆ ಇನ್ಯಾವನೋ ದೇಶ ಬಿಟ್ಟು ಓಡಿ  ಹೋದರೆ ಎಲ್ಲದಕ್ಕೂ ಪ್ರಧಾನಿ ನೇ ಕಾರಣ ಅಂತಾದರೆ ನಮ್ಮ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬ ಪಟ್ಟದ ಅವಶ್ಯಕತೆ ಇದೆಯೆ ? ಅಸಲಿಗೆ ನಮ್ಮ ರಾಜ್ಯದ ಹೊರೆ ಮೊದಲು ಹೊರಬೇಕಾದ್ದು  ಪ್ರಧಾನಿ ಅಂತ ನನಗೆ ಇತ್ತೀಚಿಗಷ್ಟೇ ಮನವರಿಕೆಯಾದ ವಿಷಯ !


ಮೋದಿಯನ್ನು ನಂಬಿ ಇದುವರೆಗೂ ಹಾಳಾಗಿದ್ದಂತೂ ನಂಗೇನೂ ಕಾಣುತ್ತಿಲ್ಲ , ನಾನು ಭಕ್ತಳೆಂಬ ಕಾರಣವೂ ಇರಬಹುದು ! ಆದರೆ ಇದುವರೆಗೂ ದೇವಸ್ಥಾನ , ಮಠ,  ಮಂದಿರಗಳಿಗೆ ಸೀಮಿತವಾದ ಭಕ್ತ ಎಂಬ ವರ್ಗವೊಂದು ದೇಶ ಕಂಡ ಮಹಾನ್ ನಾಯಕನಿಗೂ ಅನ್ವಯವಾಗುತ್ತಿರುವುದು ಸಂತಸದ ವಿಷಯವೇ ಸರಿ ! ಕೇವಲ ಒಂದು ಜಿಲ್ಲೆಯ ಅಧಿಕಾರಿಯಾಗಿ ನೇಮಕಗೊಂಡವರನ್ನ ಕೇಳಿ ನೋಡಿ ಎಲ್ಲವೂ ಪಾರದರ್ಶಕವಾಗಿ ಒಂದಿಷ್ಟೂ ಹಗರಣಗಳಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು! ಇಂತಹ ನೂರಾರು  ಜಿಲ್ಲೆಗಳನ್ನೊಳಗೊಂಡ ೨೨ ರಾಜ್ಯಗಳನ್ನು ಅದ್ಹೇಗೆ ನಿಭಾಯಿಸುತ್ತಿರಯುವ ಆ ಶಕ್ತಿ ಅದೆಂಥದ್ದಿರಬಹುದು ?!

ಗಡಿಯಲ್ಲಿ ನಮಗಾಗಿ ಬಡಿದಾಡಿ ವೀರ ಮರಣ ಹೊತ್ತ ಒಬ್ಬೇ ಒಬ್ಬ ಸೈನಿಕನ ಹೆಸರನ್ನು ಹೇಳಲಾಗದ ನಮ್ಮೆಲ್ಲರ ದೇಶಭಕ್ತಿಗೆ ಹಾಗೂ ಒಂದು ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದು ಎಂದರೆ ಕೋತಂಬ್ರಿ ಸೊಪ್ಪನ್ನು ಮಾರುವಷ್ಟೇ ಸುಲಭ ಎಂದು ತಿಳಿದು ಹಗಲಿರುಳು ಬಾಯಿ ಬಡೆದುಕೊಳ್ಳುವ ಜನರನ್ನು ವಿಶ್ವ ವಿಖ್ಯಾತರನ್ನಾಗಿ ಮಾಡುವ ನಮ್ಮ ಅವಿರತ ಪ್ರಯತ್ನಕ್ಕೊಂದು ದೊಡ್ಡ ಸಲಾಂ !






1 comment:

  1. Ashwini Dasare ಯವರೇ ನಿಮ್ಮ ಈ ಲೇಖನ ಅದ್ಬುತ....
    ಮೋದಿಜಿಗೆ ಜಯವಾಗಲಿ...

    ReplyDelete