Total Pageviews

Friday, March 8, 2024

ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು.....

 



ಇದಾಗಿ ಒಂದೂ ಒಂದೂವರೆ ವರ್ಷ ಆಗಿರ್ಬೇಕು, ಅವತ್ತು ನಮ್ಮ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಗೆ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬರೋವ್ರಿದ್ರು, ಅದೊಂದು ಹಬ್ಬದ ಸಂಭ್ರಮವಿತ್ತು. ನಮ್ಮ ಆಗಿನ ಸೆನೆಟ್ ನ ಚೇರ್ ಪರ್ಸನ್ ಆಗಿದ್ದ ಸುಧಾಮೂರ್ತಿ ಕೂಡ ಬೆಳಿಗ್ಗೆ ಎಂಟು ಗಂಟೆಗೆ, ಎಲ್ಲ ಸರಿಯಾಗಿದೀಯಾ ಅಂತ ನೋಡೋಕೆ ಬಂದಿದ್ರು. ರಾಷ್ಟ್ರಪತಿಗಳ ರೂಮ್ ಉಸ್ತುವಾರಿ ನನ್ನ ಮೇಲಿತ್ತು, ಸುಧಾ ಮೂರ್ತಿಯವರ ಜೊತೆ ಮೊದಲ ಭೇಟಿ ಅದಾಗಿತ್ತು, ಅವರು ಬಂದಾಗ ಇಲ್ಲಿ ಯಾರು ಇರ್ತಾರೆ ಅಂತ ಕೇಳಿದ್ರು, ಅಲ್ಲಿರುವವರು ಯಾರೋ ನನ್ನ ಹೆಸರು ಹೇಳಿದ್ರು, ನನ್ನ ಜೊತೆ ಏನ್ ಮಾತಿರುತ್ತೆ ಇವರಿಗೆ ಅಂತ ಅಲ್ಲೇ ಸೈಡ್ ಅಲ್ಲಿ ಸುಮ್ನೆ ನಿಂತು ನಾನೇ ಅಂತ ಹೇಳಿದೆ. ಕೂಡಲೇ ಅಶ್ವಿನಿ ಬಾರಮ್ಮ ಹೋಗಿ ರೂಮ್ ಚೆಕ್ ಮಾಡಿ ಬರುಣು, ಕನ್ನಡ ಬರ್ತದ ಅಲ ನಿಂಗ ಅಂದ್ರು. ಹ್ಞೂ ಅಂತ ತಲೆ ಅಲ್ಲಾಡಿಸಿದೆ. ನೋಡು ಎಲ್ಲ ಚೆನ್ನಾಗಿ ನೋಡ್ಕೊಬೇಕಮ್ಮ ಅವರಿಗೆ ಗಿಫ್ಟ್ ಆಗಿ ಒಂದು ಸಾರಿ ತಂದೀದಿನಿ ಅದನ್ನು ಇಲ್ಲೇ ಇಟ್ಟಿರು, ಆಮೇಲೆ ತೊಗೊಂಡು ಹೋಗ್ತೀನಿ, ರಾಷ್ಟ್ರಪತಿ ಅನ್ನೋದು ನೆನಪಿರಲಿ ಏನೂ ಲೋಪ ಆಗ್ದೇ ಇರೋಹಂಗೆ ನೋಡ್ಕೊಳಿ ಅಂತ ಹೆಗಲ ಮೇಲೆ ಕೈ ಹಾಕಿ ಥೇಟ್ ಮನೆಯವರ್ಯಾರೋ ಮಾತಡ್ತಿದಾರೇನೋ ಅನ್ನೋ ಅನುಭವ. ನಂಗಿನ್ನೂ ನೆನಪಿದೆ ಇನ್ಫೋಸಿಸ್ ಆಗಲಿ, ಚೇರ್ ಪರ್ಸನ್ ಅನ್ನೋ ಯಾವ ದರ್ಪ ಇಲ್ಲದೇನೆ ಹೌಸ್  ಕೀಪಿಂಗ್ ಸ್ಟಾಫ್ ನವರ ಜೊತೆಯೂ ಅಷ್ಟೇ ವಿನಮ್ರವಾಗಿ ನಡೆದುಕೊಂಡಿದ್ದರು!!  ಮಧ್ಯಾನದ ವೇಳೆಗೆ ರಾಷ್ಟ್ರಪತಿಗಳ ಆಗಮನ ಇದ್ದಿದ್ದು... 

ರಾಷ್ಟ್ರಪತಿಯವರು ನಿಮ್ಮ ಸಂಸ್ಥೆಗೆ ಬಂದಿದ್ದರು ಅವರನ್ನು ಭೇಟಿ ಆಗಲು prior ಅಪ್ಪೋಯಿಂಟ್ಮೆಂಟ್ ಬೇಕಾಗುತ್ತೆ, ಮುಂಚೆ ನಿಮ್ ಷೆಡ್ಯೂಲ್ ಫಿಕ್ಸ್ ಮಾಡಿರಬೇಕಾಗಿರುತ್ತೆ. ಅವರ ಸುತ್ತಲಿರುವ ಸೆಕ್ಯೂರಿಟಿ ಮುಲಾಜಿಲ್ಲದೇ ಭೇಟಿ ಆಗ ಬಂದವರನ್ನು ಆಚೆ ಕಳಿಸುತ್ತಾರೆ. ಕೋಣೆಯ ಉಸ್ತುವಾರಿ ನನ್ನ ಮೇಲಿದ್ದರಿಂದ ಒಂದು ಬಾರಿ ಮಾತ್ರ  ನಂಗೆ ಒಳ ಹೋಗಲು ಅವಕಾಶ ಕೊಟ್ಟಿದ್ದರು ಅದು ನನ್ನ ಹತ್ರ ಪ್ರಾಕ್ಸಿಮಿಟಿ ಪಾಸ್ ಇದ್ದ ಕಾರಣ. ಊಟದ ಸಮಯಕ್ಕೆ ಸುಧಾ ಮೂರ್ತಿಯವರು, ನಾನು ಒಂದ್ಸಲ ಊಟದ ವಿಷಯವಾಗಿ ರಾಷ್ಟ್ರಪತಿಗಳ ಹತ್ತಿರ ಮಾತಾಡಬಹುದೇ ಅಂತ ನಮ್ಮ ರೂಮ್ ಬಳಿ ಬಂದರು, ಅವ್ರನ್ನ ಕಂಡು ಡಿಸಿ ಮತ್ತು ಎಸ್ .ಪಿ ಕೂಡ ಅವರು ಒಬ್ಬರೇ ಹೋಗೋದು ತಪ್ಪಾಗುತ್ತೇನೋ ಅಂತ ಅವರ ಜೊತೆಯಾಗಿ ಎಂಟ್ರನ್ಸ್ ವರೆಗೂ ಹೋದ್ರು, ಆದರೆ ಸೆಕ್ಯೂರಿಟಿ ಮಾತ್ರ ಅವರನ್ನು ಒಳಗಡೆ ಬಿಡಲಿಲ್ಲ!!! ಏಯ್ ಏನ್ ನಡೀತಿದೆ ಇಲ್ಲಿ ಗುರೂ ಅವರು ನಮ ಚೇರ್ ಪರ್ಸನ್ ಅವರನ್ನೇ ಬಿಡಲ್ವ ? ಏನ್ ಕಥೆ ಇವ್ರದ್ದು ಅನ್ಕೊಂಡು ನಂಗೆ ನಾನು ಸಮಾಧಾನ ಮಾಡ್ಕೊಂಡು ಅಲ್ಲೇ ಇದ್ದ ಧಡೂತಿ ಸೆಕ್ಯೂರಿಟಿ ಯವರನ್ನ ಗುರಾಯಿಸಿದೆ. ಆಪ್ ಕೋ ಪತಾ ಹಾಯ್ ಕೀ ವೋ ಕೌನ್ ಹೈ ? ಅಂದೆ ಸಿಂಡರಿಸಿಕೊಂಡಿದ್ದ ಮುಖದಿಂದಲೇ ನನ್ನ ಐಡಿ  ನೋಡಿ ಅದರ ಮೇಲೆ ಪ್ರಾಕ್ಸಿಮಿಟಿ ಪಾಸ್ ಅಂತ ಇರೋದಕ್ಕೆ ಮೋಸ್ಟ್ಲಿ ರಿಪ್ಲೈ ಮಾಡಿದ್ರು ಅನ್ಸುತ್ತೆ, "ಕೊಯಿ ಭೀ ಹೊ ಹಮೆ  ಕ್ಯಾ , ಉಧರ್ ದೇಖ್  ರಹೇ ಹೊ ನಾ ಚೀಫ್ ಮಿನಿಸ್ಟರ್ , ಔರ್ ಗವರ್ನರ್ ಕೋಭಿ ದುಸರೇ ರೂಮ್ ಮೇ ಬಿಠಾಯಾ ಹೈ."  ನಾವು ಪ್ರೋಟೋಕಾಲ್ ಫಾಲೋ ಮಾಡ್ತೇವೆ ಅಪ್ಪೋಯಿಂಟ್ಮೆಂಟ್ ಇದ್ರೆ ಮಾತ್ರ ಒಳಗಡೆ ಅಂದ್ರು. ಇನ್ಫೋಸಿಸ್ ಗೊತ್ತಿಲ್ವ ನಿಮಗೆ ಅದರ ಮಾಲೀಕರು ಕಣ್ರೀ ಅಂತ ಏನೋ ಹೇಳೋಕೆ ಹೋದೆ ಆ ಮನುಷ್ಯ ಕ್ಯಾರೇ ಅನ್ಲಿಲ್ಲ!! 

ನಮ್ಮೆಲ್ಲರ ಮುಂದೆ ಅವರನ್ನು ಒಳ ಹೋಗಲು ಬಿಡದೆ ಇದ್ದ ಸ್ಟಾಫ್ ಮೇಲೆ ರೇಗಿಯೋ , ಅಲ್ಲೇ ಇದ್ದ ಎಂಪಿ ಹಾಗೂ ಎಂ ಎಲ್ ಎ ಗಳ  ಸಹಾಯ ಪಡೆದು ಒಳ ಹೋಗೋದೇನೋ ದೊಡ್ಡ ವಿಷಯ ವಾಗಿರಲಿಲ್ಲ but she  chose not to go !!  ಇದನ್ನ ಸಿಂಪ್ಲಿಸಿಟಿ ಅನ್ನದೆ ಇನ್ನೇನು ಅಂತಾರೆ, ಒಳಗಡೆ ಬಿಟ್ಟು ಕೊಡದೆ ಇದ್ದಿದ್ದಕ್ಕೆ ಬೇಜಾರಾಯ್ತೆನೋ ಗೊತ್ತಿಲ್ಲ ಹೊರಗಡೆ ತೋರಿಸಿಕೊಡಲಿಲ್ಲ. ರಾಷ್ಟ್ರಪತಿ ಅಲ್ವ ಏನೋ ರೂಲ್ಸ್ ಇರುತ್ತೆ ತೊಂದರೆ ಇಲ್ಲ ಬಿಡಿ ಅಂತ ನಗು ಮುಖದಿಂದಲೇ ವಾಪಾಸ್ ಹೋದ್ರು. ಐರನಿ ಅಂದ್ರೆ ಸ್ಟೇಜ್ ಮೇಲೆ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳಬೇಕಾಗಿದ್ದು ಸುಧಾ ಮೂರ್ತಿ ನೇ !! ಭಾಷಣ ಉಡುಗೊರೆ ಎಲ್ಲದೂ ಚೆನ್ನಾಗೆ ನಡೀತು ಅದು ದೊಡ್ಡ ನ್ಯೂಸ್ ಕೂಡ ಆಗಿತ್ತು, ನಮ್ಮ  ಕಡೆಯ ಕೌದಿಯನ್ನು ಸಹ ಉಡುಗೊರೆಯಾಗಿ ಕೊಟ್ಟಿದ್ದಕ್ಕೆ!! 

ವೈಚಾರಿಕ ಭಿನ್ನಾಭಿಪ್ರಾಯಗಳ ಮಧ್ಯೆ , ಹಾಗೂ ವಯೋಸಹಜವಾಗಿ ಏನೋ ಹೇಳಲು ಹೋಗಿ , ಇನ್ನೇನೋ ಅರ್ಥೈಸಿಕೊಳ್ಳೋ  ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಎಲ್ಲದೂ ಕಾಂಟ್ರವರ್ಸಿ ಆಗುವ ಸಾಧ್ಯತೆ ತುಸು ಹೆಚ್ಛೆ!! ನಾವು ಎಲ್ಲದನ್ನು ಸಿನಿಕರಾಗಿ ನೋಡಲು ಶುರುಮಾಡಿದರೇ, ಪ್ರತಿಯೊಬ್ಬರಲ್ಲೂ ತಪ್ಪೇ ಹುಡುಕೊಂಡು ಕೂರೋದಾದ್ರೆ ವೆನ್ ಟು embrace positive  side of  humanity ?! ರಾಜಕೀಯ ಹಾಗೂ ಬಿಸಿನೆಸ್ ಕಾರಣಗಳೇನೇ ಇರಲಿ, this lady truly deserves it !! ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು , ಅಂಬಾನಿ ಮದುವೇನೂ ಆಡ್ಕೋತಾರೆ ಇವರ simplicity ಕೂಡ ಆಡ್ಕೋತಾರೆ!! ಮದುವೆ, ದಾನ ಎಲ್ಲ ವೈಯಕ್ತಿಕ ಆಯ್ಕೆ!!  ಆಡಿಕೊಳ್ಳುವವವರು ಫೇಸ್ಬುಕ್ ವಾಲ್ ಗಳಿಗೆ ಸೀಮಿತ, ನಮ್ಮ ವ್ಯಂಗ್ಯ ಅವರಿಗೆ ತಾಕೋದೂ ಇಲ್ಲ, ಅದರಿಂದ ಪ್ರಯೋಜನವೂ ಇಲ್ಲ!! stereotypical mindset ಹಾಗೂ ಸಮಾಜದ ಕಟ್ಟುಪಾಡುಗಳನ್ನು ೫ ದಶಕಗಳ ಹಿಂದೇನೆ ಮುರಿದ ಇವರು ವಿಮೆನ್ಸ್  ಡೇ ದಿನ, ಅದೇ ರಾಷ್ಟ್ರಪತಿಗಳಿಂದ ಆಯ್ಕೆ ಆಗಿದ್ದು ಖುಷಿ ಕೊಟ್ಟಿದೆ  !!  #ಬದುಕಿನ_ಕಲಿಕೆ 



No comments:

Post a Comment