Total Pageviews

Sunday, July 10, 2011

ಚರ್ಚೆ

''ಆರಂಭದಲ್ಲೇ ಆಂಗ್ಲ ಮಾಧ್ಯಮದಲ್ಲಿ ಅರೆಯುವುದು ಅವೈಜ್ನ್ಯಾನಿಕ'' ಎಂಬ ಶೀರ್ಷಿಕೆಯಡಿ ಪ್ರಕಟವಾದ ಡಾ. ಎಸ. ಎಲ್  ಭೈರಪ್ಪ ನವರ ಚರ್ಚೆ ಲೇಖನಕ್ಕೆ ನನ್ನ ಅನಿಸಿಕೆ.

                       ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಮಗುವು ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಆಂಗ್ಲ ಅಥವಾ ಕನ್ನಡ ಮಾಧ್ಯಮ  ಅನ್ನುವುದಕ್ಕಿಂತ, ಗ್ಲೋಬಲ್  ಲಾಂಗ್ವೇಜ್  ಎಂದೇ ಕರೆಸಿಕೊಳ್ಳುವ ಭಾಷೆಯ ಕಲಿಕೆ ಮತ್ತು ತಿಳಿವಳಿಕೆ ಆರಂಭದಲ್ಲಿ ಅವಶ್ಯಕವಾಗಿ ಕಲಿಸಲೇಬೇಕಾದ ಅನಿವಾರ್ಯತೆ ಇದೆ. ನಮ್ಮ ಮಾತೃ ಭಾಷೆ ಕನ್ನಡ, ಹಾಗಾಗಿ ಮಗು ಮಾತು ಕಲಿಯುವ ಮುನ್ನ ಪ್ರಪ್ರಥಮವಾಗಿ ಹೇಳುವ ಪದವೇ ಅಮ್ಮ.(ಅಪ್ಪ-ಅಮ್ಮ ಆಂಗ್ಲ ವ್ಯಾಮೊಹಿಗಳು ಇರದಿದ್ದರೆ). ನಮ್ಮ ಮಾತೃ ಭಾಷೆಯನ್ನು ಕಲಿಯಲು ನಾವೆಂದು ವ್ಯಾಕರಣದ ಅಧ್ಯಾಯ ಮಾಡುವ ಅವಶ್ಯಕತೆ ಇಲ್ಲ. ಮಾತೃ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಬಂದ ಮೇಲೆ ತಾನೆ ಶಾಲೆಯಲ್ಲಿ ವ್ಯಾಕರಣದ ಪಾಠ  ಹೇಳಿ ಕೊಡುವುದು? ಹಾಗೆಯೇ ಯಾವುದೇ ಭಾಷೆಯಾಗಲಿ ಅಥವಾ ಆಂಗ್ಲ ಭಾಷೆಯಾಗಲಿ ಕೇವಲ ಪಾಠ ಹೇಳಿಕೊಡುವುದರಿಂದ ಬರುವಂಥದಲ್ಲ. ಹೀಗಿರುವಾಗ ಆರಂಭದಲ್ಲಿಯೇ ಮಕ್ಕಳಿಗೆ ಆಂಗ್ಲದಲ್ಲಿ ಹೇಳಿಕೊಡುವುದರಿಂದ ಆಗುವ ಹಾನಿ ಏನು?

                     ನಾನು ಮೊದಲಿನಿಂದ ಆಂಗ್ಲ ಮಾಧ್ಯಮದಲ್ಲೇ ಓದಿದವಳು, ಹಾಗಂತ ನನಗೆ ಕನ್ನಡ ಬರೆಯಲು, ಓದಲು ಬರುವುದಿಲ್ಲವೇ? ನನ್ನ ಹೈ ಸ್ಕೂಲ್  ದಿನಗಳಿಂದಲೇ ಭೈರಪ್ಪನವರು ನನ್ನ ನೆಚ್ಚಿನ ಲೇಖಕರು. ಇವತ್ತಿಗೂ ಕನ್ನಡ ಕೃತಿಗಳನ್ನ ಓದುತ್ತೇನೆ. ಮತ್ತು ಕನ್ನಡದಲ್ಲೇ ಬ್ಲಾಗ್ ಬರೆಯುತ್ತೇನೆ.ನನ್ನ ಹಾಗೆ ಇಂಜಿನಿಯರಿಂಗ್ ಮಾಡಿದ  ಅನೇಕ ಸ್ನೇಹಿತ-ಸ್ನೇಹಿತೆಯರು, ಮೊದಲಿನಿಂದಲೂ 
 ಆಂಗ್ಲ ಶಾಲೆಯಲ್ಲೇ ಓದಿದ್ದರೂ, ಆಂಗ್ಲಕ್ಕಿಂತ ಕನ್ನಡದ ಮೇಲೆಯೇ ಜಾಸ್ತಿ ವ್ಯಾಮೋಹ ಇರುವುದರಿಂದಲೇ ಇವತ್ತು ಕನ್ನಡ ಬ್ಲಾಗರ ಗಳ  ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಲ್ಲಿಗೆ ಆಂಗ್ಲ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಕನ್ನಡದ ಜ್ನ್ಯಾನ ಕಡಿಮೆ ಎನ್ನುವ ಮಾತು ಅಪ್ರಸ್ತುತ!.

                     ಇನ್ನು ಮೊದಲಿನಿದ ಕನ್ನಡ ಮಾಧ್ಯಮದಲ್ಲಿ ಕಲಿತು, ಒಮ್ಮೆಲೇ ಪಿ.ಯು .ಸಿ  ಗೆ ಆಂಗ್ಲ ಮಾಧ್ಯಮಕ್ಕೆ ಸೇರಿದ ವಿಧ್ಯಾರ್ಥಿಗಳ ಗೋಳು ಕೇಳಿ ನೋಡಿ, ಅವರು ಹೇಳುವ ಒಂದೇ ಮಾತು ನಾವು ಮೊದಲಿನಿದ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಬೇಕಿತ್ತು ಅನ್ನುವುದು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆಲ್ಲ ಇಂಗ್ಲಿಷ್ ಬರುವುದಿಲ್ಲ್ವೆಂದಲ್ಲ, ಅಲ್ಲಿಯೂ ಆಂಗ್ಲ ಮಾಧ್ಯಮದವರನ್ನು ಮೀರಿಸುವ ಹಾಗೆ ಮಾತನಾಡುವ ವಿಧ್ಯಾರ್ಥಿಗಳು ಇರಬಹುದು, ಆದರೆ ಮೆಜೋರಿಟಿ ವಿಧ್ಯಾರ್ಥಿಗಳಿಗೆ ಅದು ಕಷ್ಟವೇ. ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಯಾವ ತೊಂದರೆಯನ್ನು ಅನುಭವಿಸುವದಿಲ್ಲ, ಆದರೆ ಮಾತನಾಡಲು ಮಾತ್ರ ಹಿಂಜರಿಕೆ. ಕರ್ನಾಟಕದಲ್ಲಿದ್ದು ಕಡ್ಡಾಯವಾಗಿ ಕನ್ನಡದಲ್ಲಿಯೇ ಕಲಿಯಬೇಕು, ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳುವ ಅದೆಷ್ಟು ಜನ ಬುದ್ಧಿ  ಜೀವಿಗಳು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾರೆ? ವ್ರತ್ತಿ ಪರ ಕೋರ್ಸ್  ತೆಗುದುಕೊಂಡ ವಿಧ್ಯಾರ್ಥಿಗಳಿಗೆ, ಅದರಲ್ಲೂ ಇಂಜಿನಿಯರಿಂಗ್ ಓದುವ ವಿಧ್ಯಾರ್ಥಿಗಳನ್ನು ಕಂಪನಿ ಗಳು  ಆರಿಸಿಕೊಳ್ಳುವಾಗ  ಇಂಗ್ಲಿಷ್ ಭಾಷೆಯೇ ಮಾನದಂಡ ವಾಗಿರುವ, ಇಂಗ್ಲಿಷ್ ಮಾತನಾಡಲು ಬಾರದ ಒಂದೇ ಕಾರಣಕ್ಕೆ, ನಾಲ್ಕು ವರ್ಷ ಪಟ್ಟ ಕಷ್ಟ ವ್ಯರ್ಥ ವಾಗಬೇಕೆ?

                      ಯಾವುದೇ ಭಾಷೆಯ ಕಲಿಕೆ ಇಂದ ಅಥವಾ ಆರಂಭದಿಂದಲೇ ಅದರ ಅಧ್ಯಯನದಿಂದ ಕನ್ನಡಕ್ಕೆ ಕುತ್ತು ಬರುವ ಹಾಗಿದ್ದರೆ, ನಮ್ಮೆಲ್ಲ ಕನ್ನಡ ದಿನಪತ್ರಿಕೆಗಳು, ಕನ್ನಡ ಪುಸ್ತಕಗಳು, ಕಾದಂಬರಿಗಳು,ಹಾಗೂ ಟೀವಿ ಚನ್ನೆಲ್ಲುಗಳು ಎಂದೋ ದಿವಾಳಿ ಎದ್ದು ಹೋಗಬೇಕಿತ್ತಲ್ಲವೇ? ಯಾವ ಮಾಧ್ಯಮದಲ್ಲಿ ಓದಿಸಿದರೂ ಮನೆಯಲ್ಲಿ ಮಾತೃ ಭಾಷೆ ಕನ್ನಡ ಆಗಿರುವುದರಿಂದ, ಆಂಗ್ಲವೇ ಇರಲಿ ಇನ್ನ್ಯಾವ ಭಾಷೆಯೇ ಇರಲಿ ಮಕ್ಕಳು ಅದನ್ನ ಕನ್ನಡಕ್ಕೆ ಅನುವಾದ ಮಾಡಿಕೊಂಡೆ ಕಲಿಯುತ್ತಾರಾದರಿಂದ, ಕನ್ನಡಕ್ಕಂತೂ  ಯಾವ ಕುತ್ತೂ ಇಲ್ಲ.

                      ಯಾವ  ಮಾಧ್ಯಮದಲ್ಲಿ ಓದುತ್ತಿದ್ದರೂ ಮಕ್ಕಳಿಗೆ ದಿನಪತ್ರಿಕೆಗಳನ್ನು ಓದಿಸಬೇಕು.ಕನ್ನಡ ಸಾಹಿತ್ಯದಬಗ್ಗೆ ಆಸಕ್ತಿ ಬೆಳೆಸಬೇಕು  ಮತ್ತು ಕನ್ನಡದ  ಅಪ್ರತಿಮ, ಲೇಖಕ, ಸಾಹಿತಿ ಹಾಗೂ ಕವಿಗಳ ಕೃತಿಗಳನ್ನು ಬಿಡುವಿನ ವೇಳೆಯಲ್ಲಿ  ಓದುವಂತೆ ಪ್ರೇರೇಪಿಸಬೇಕು.ಇದನ್ನು ಬಿಟ್ಟು ಕೇವಲ ಕನ್ನಡ ಕಲಿಸಿ ಕನ್ನಡ ಕಲಿಸಿ ಎಂದು ಹೇಳುವುದರಿಂದ, ಕನ್ನಡ ಕೇವಲ ಒಂದು ವಿಷಯವಾಗಿ ಉಳಿದು ಹೋಗುತ್ತದೆಯೇ ಹೊರತು ಅದರಿಂದಾಗುವ ಲಾಭ ಏನೂ ಇಲ್ಲ.ಕನ್ನಡ ಮಾಧ್ಯಮದಲ್ಲಿ ಕಲಿಯುವದಕ್ಕು ಮಕ್ಕಳು ಕನ್ನಡದ ಮೇಲೆ ಆಸಕ್ತಿ ಬೆಳೆಸಿಕೊಲ್ಲುವುದಕ್ಕು ಸಂಭಂದವಿಲ್ಲ. ಅದೆಷ್ಟು ಜನ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಕನ್ನಡ ಸಾಹಿತ್ಯದ ಅರಿವಿದೆ? ಕನ್ನಡ ಮಾಧ್ಯಮದಲ್ಲಿ ಕಲಿತ ಮಾತ್ರಕ್ಕೆ ಕನ್ನಡವನ್ನು ಉಳಿಸಲು ಸಾಧ್ಯವೇ? ಮಾಧ್ಯಮ ಯಾವುದಾದರೇನು? ಆಸಕ್ತಿ ಬೆಳೆಸಿ ಉಳಿಸುವುದು ನಮ್ಮ ಕೈಯಲ್ಲಿದೆ. 

Wednesday, June 22, 2011

ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು.....

                

                 ಯಾವ ಮಹಾನುಭಾವ ಹೇಳಿದ್ದಾನೋ  ಗೊತ್ತಿಲ್ಲ, ನಮ್ಮ ಉತ್ತರ ಕರ್ನಾಟಕದೆಡೆಗೆ, ತುಂಬಾ popular ಮಾತೊಂದಿದೆ. ''ಧಾರವಾಡ ಮಳಿ ನಂಬ ಬ್ಯಾಡ, ಬೆಳಗಾವಿ ಹುಡುಗಿ ನಂಬ ಬ್ಯಾಡ!'' ನಮ್ಮ ವರಕವಿ ಬೇಂದ್ರೆ ಅವರು  ನಮ್ಮ ಧಾರವಾಡದ ಮಳೆಯ ಬಗ್ಗೆ ತುಂಬಾ ಅಧ್ಭುತವಾದ ಕವನಗಳನ್ನ ಬರೆದಿದ್ದಾರೆ, ಅವುಗಳೆಲ್ಲ ನಿಜ ಎಂದು ಕಳೆದು ನಾಲ್ಕು ದಿನಗಳಿಂದ ಅನ್ನಿಸುತ್ತಿದೆ, ನಾನು ಬೇಸಿಗೆಯಲ್ಲಿ ಹುಟ್ಟಿದ ಕಾರಣಕ್ಕೋ ಏನೋ ಮಳೆಗೂ ನಂಗು ಮೊದಲಿನಿಂದ ಅಷ್ಟಕ್ಕಷ್ಟೇ. ನನ್ನೆಲ್ಲ ಸ್ನೇಹಿತೆಯರು, ಮಳೆಯಂದ್ರೆ ಇಷ್ಟ ಇಲ್ವಾ? ಯಾವ ಸೀಮೆಯವಳೇ ನೀನು? ಅಂತ ರೆಗಿಸಿದಾಗ,ಮಳೆಗೆ ನನ್ನ ಕಂಡ್ರೆ ಇಷ್ಟ ಕಣ್ರೆ, ಅಂತ ಹೊಟ್ಟೆ ಉರಿಸುತ್ತಿದ್ದೆ! ಈಗಲೂ ಅಷ್ಟೇ ಬಿಟ್ಟು ಬಿಡದೆ ಧಾರಾಕಾರವಾಗಿ ಸುರಿಯುವ ಮಳೆ ನೋಡಲು ನನಗೆ ಕಷ್ಟವೇ.. 

               ಮನೆಯಿಂದ ಹೊರನಡೆದ ಎರಡನೇ ಹೆಜ್ಜೆಗೆ, ನನ್ನನ್ನು ಅತೀ ಯಾಗಿ ಪ್ರೀತಿಸುವ ಮಳೆರಾಯನೆಡೆಗೆ ಒಂದು ಅಕ್ಕರೆಯ ಮುಗುಳ್ನಗೆ! ನನ್ನ ಒಂದು ನಗುವಿಗಾಗಿ ವರ್ಷವಿಡಿ ಚಡಪಡಿಸಿದ ಹುಡುಗನಂತೆ, ಒಂದೇ ಕ್ಷಣದಲ್ಲಿ ತನ್ನೆಲ್ಲ ಮನದ ಭಾವನೆಗಳನ್ನು, ಹರ್ಷೋದ್ಗಾರಗಳನ್ನು  ನನ್ನ ಮೇಲೆ ಚಿಮ್ಮಿಸಿ ಆನಂದಿಸುವ ಮಳೆರಾಯನಿಗಿಂತ ಇನ್ನೊಬ್ಬ ಗೆಳೆಯ ಬೇಕೇ?


               ಇದೆಲ್ಲ ಕೇವಲ ನನ್ನ ಕಲ್ಪನೆಯೂ, ಅಥವಾ ಭ್ರಮೆಯೋ ನನಗಂತೂ ಕಳೆದ ನಾಲ್ಕು ದಿನಗಳಿಂದ ಮಳೆಯೊಂದಿಗೆ ವಿಪರೀತ ಪ್ರೇಮ! ನಮ್ಮಿಬ್ಬರಲ್ಲಿ ಕೇವಲ ನಾನೊಬ್ಬಳೆ ಮಾತಿನ ಮೂಲಕ ಪ್ರತಿಕ್ರಿಯುಸುತ್ತೇನೆ, ಮಳೆರಾಯನೋ ನಿರ್ಲಿಪ್ತ ಭಾವನೆಯ, ಅತ್ಯಂತ ಸಹನಶೀಲ ಮತ್ತು ಶಾಂತ ಸ್ವಭಾವದ, ಎಲ್ಲವನ್ನು ವರ್ಷಧಾರೆಯ ಮೂಲಕ ವ್ಯಕ್ತ ಪಡಿಸುವ ಅಪರೂಪದ ಹುಡುಗ!ಅವನು ನನ್ನ ಎಷ್ಟು ಪ್ರೀತಿಸುತ್ತನೆಂದರೆ, ನನ್ನ ಅನುಮತಿ ಇಲ್ಲದೆ ಹೋದರೆ ಬರದೆ ಕೇವಲ ಗುಡುಗು ಮತ್ತು ಮಿಂಚಿನ ಮೂಲಕ ನನ್ನ ಪ್ರತಿಕ್ರಿಯೆಗೆ ಕಾಯುತ್ತ ಕುಳಿತಿರುತ್ತಾನೆ.

              ಮೊನ್ನೆ ಕಲಾಭವನ್ ಸರ್ಕಲ್ ಇಂದ ನನ್ನ ಸ್ಕೂಟಿ ಕಿವಿ ಹಿಂಡಿ, ಮುಂದೆ ಹೋಗುವಾಗ ಧಬಲ್ಲನೆ ಎದುರಾದ ಸಿಗ್ನಲ್  ಕಂಡು ಗಾಡಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ, ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದನ್ನು ಕಂಡು, ಜರ್ಕಿನ್  ಮತ್ತು ಕ್ಯಾಪ್ ಮರೆತು ಬಂದ ನನ್ನನ್ನು ನಾನೇ  ಹಳಿದುಕೊಂಡು, ಉಪಾಯ ಮಾಡಿ ಆಕಾಶವನ್ನೇ ನೋಡುತ್ತಾ, ಮನದಲ್ಲೇ ಪ್ಲೀಸ್ ಕಣೋ ನಾನು ಮನೆಗೆ ಹೋಗುವ ವರೆಗೂ ಬರಬೇಡ, ನಿನ್ನ ಪ್ರೀತಿಯ ಹುಡುಗಿಯನ್ನ ಮನೆವರೆಗೂ ಸೇಫ್ ಆಗಿ ತಲುಪಿಸುವುದು ನಿನ್ನ ಜವಾಬ್ದಾರಿ ಅಲ್ವ? ಪ್ಲೀಸ್ ಬರಲ್ಲ ತಾನೆ ಅಂತ ಗೊಣಗುತ್ತಿರುವುದನ್ನು, ನನ್ನ ಪಕ್ಕದ ಬೈಕ್ ಮೇಲೆ ಕುಳಿತ ಸ್ಪುರದ್ರೂಪ ಹುಡುಗ  ಅವಕ್ಕಾಗಿ, what's going on? ಅಂದ, nothing serious, speaking to my boy friend Mr Rain! ಅಂದೆ, ಆ ಹುಡುಗನ reaction ಪಡೆಯುವದರೊಳಗಾಗಿ, ಗ್ರೀನ್ ಸಿಗ್ನಲ್  ಬಂತು, ಮತ್ತೆ ನನ್ನ ಸ್ಕೂಟಿಯ ಕಿವಿ ಹಿಂಡಿ ಮನೆಯೆಡೆಗೆ ಹೋಗುವಾಗ ಒಂದೇ ಪ್ರಶ್ನೆ ಮನದಲ್ಲಿ ಕಾಡುತ್ತಿತು ಮಳೆರಾಯ ನನ್ನ ಮಾತು ಕೇಳುತ್ತಾನ? ಕೇಳದೆ ಏನು ಮನೆ ತಲುಪೋ  ವರೆಗೂ ಒಂದು ಹನಿಯನ್ನೂ ಸುರಿಸದೇ,  ಇರುವದನ್ನು ಕಂಡು ಆಕಾಶವನ್ನು ನೋಡಿ ಸಿಹಿ ಮುತ್ತೊಂದನ್ನ ನನ್ನ ಪ್ರೀತಿಯ ಹುಡುಗನೆಡೆಗೆ  ತೇಲಿ  ಬಿಟ್ಟೆ. ಮನೆಸೇರಿದ ಎರಡೇ ನಿಮಿಷಕ್ಕೆ ಧಾರಾಕಾರ ಮಳೆ!

            ಅಮ್ಮ ಆಫೀಸಿಂದ ಮನೆಗೆ ಬಂದ ತಕ್ಷಣ, ಈವತ್ತು ಸಿಗ್ನಲ್ನಲ್ಲಿ ನಿಂತಾಗ.........................................................  ಹಿಂಗಾಯ್ತು. ಅಂತ ವಿವರಿಸಿದಾಗ ಅಮ್ಮ ನನ್ನನ್ನು ಪೆದ್ದಿ ಅನ್ನೋ ಹಾಗೆ ಒಂದು ಹುಸಿ ನಗು ನಕ್ಕಳು. ನಂಗೊತ್ತು  ನೀನು ನಂಬೋಲ್ಲ ಅಂತ, ಆಯಿತು ಈಗಲೇ prove ಮಾಡ್ತಿನಂತೆ. ಈಗ ಮಳೆ ಜೋರಾಗಿದೆ ತಾನೇ? ಆಯ್ತು ಈಗ ನಾನು ಹೊರಗೆ ಹೋಗಿ ಆಕಾಶವನ್ನು ನೋಡಿ ನಾನು ಮತ್ತು ಅಮ್ಮ ಪಾರ್ಕ್ ವರೆಗೂ ಹೋಗಿ ಬಾರೋ ತನಕ ನಿಲ್ಲು. ಅಂತ ಕೇಳ್ತೀನಿ ನೋಡು.ಅವಾಗ್ ನೀನೆ ನಂಬ್ತಿ.  ಅಮ್ಮ ಕಾಫಿ ಕುಡಿದು ಹೊರಗೆ ಬರುವದರೋಳಗಾಗಿ ನನ್ನ ಪ್ರೀತಿಯ ಹುಡುಗನಿಗೆ ನನ್ನ ವಿನಂತಿ ತಲುಪಿಸಿದ್ದೆ. ಅವನದು ನನ್ನಡೆಗೆ ನಿಜವಾದ ಪ್ರೀತಿಯಮ್ಮ, ನೋಡು ನನ್ನ ಮಾತನ್ನೆಲ್ಲ ಕೇಳುತ್ತಾನೆ, ಎಂದು ಹರಟುತ್ತ ನಡೆದ ಸ್ವಲ್ಪ ಸಮಯದ ನಂತರ, ಪುಟ್ಟ ಮನೆಗೆ ಮೆಂಟಲ್ ಹಾಸ್ಪಿಟಲ್ ತುಂಬಾ ಹತ್ರ ಇರೋದ್ರಿಂದ ನಿನಗೆ ಸೈಡ್ ಎಫ್ಫೆಕ್ಟ್ಸ್ ಆಗ್ತಾ ಇದೆ ಕಣೋ , ಒಂದ್ಸಲ  ಹೋಗಿ ಚೆಕ್ ಅಪ್ ಮಾಡಿಸೋಣ, ಮನೆಗೆ ಹೋಗುವ ಮೊದಲು ಆಸ್ಪತ್ರೆಗೆ ಹೋಗೋಣ್ವಾ? !

            ಅಮ್ಮ ......ಗುರ್ರ್ರ್ ...ಅನ್ನುವಾಗ ಮತ್ತೆ ನನ್ನ ಪ್ರೀತಿಯ ಹುಡುಗನ ಆರ್ಭಟ ಶುರುವಾಯ್ತು. ಮನೆಗೆ ಹೋಗೋ ವರೆಗೂ ಬರಲ್ಲ ಅಂದೆಲ್ಲ ಈಗ ಏನ್ ಹೇಳ್ತಿಯ? ನನ್ನ ಪ್ರೀತಿಯ ಹುಡುಗ ನನ್ನಷ್ಟೇ ಪ್ರೀತಿಸ್ತಾನೆ, ಅವನ ಅತ್ತೆಯನ್ನಲ್ಲ ! ಅಮ್ಮ ನನ್ನ ಕಿವಿ ಹಿಡಿದು ಏನಂದೆ ಅಂದಾಗ, ಹೌದಮ್ಮ  ನೀನು ನನ್ನ ಬೈದ್ರೆ ಅವನಿಗೆ ಕೋಪ ಬರುತ್ತೆ, ಎಲ್ಲಿ ಒಂದು ಮುತ್ತು ಕೊಡು ನೋಡೋಣ ? ಮತ್ತೆ ಮಳೆ ನಿಂತು ಹೋಗುತ್ತೆ  ಅಂದೆ. ನಿನಗೇನು ತೆಲೆ ಕೆಟ್ಟಿದೆಯ ? ಪಾರ್ಕ್ನಲ್ಲಿ ಮುತ್ತು ಕೊಡು ಅಂತಿಯ ? ಅಮ್ಮ ನಾನೇನು ಅಪ್ಪನಿಗೆ ಮುತ್ತು ಕೊಡು ಅಂದ್ನ ? ಇಲ್ವಲ್ಲ ನಾಚ್ಕೊಬೇಡ  ಬೇಗ ಕೊಡು ಇಲ್ದೆ ಹೋದ್ರೆ  ಇಬ್ರೂ ನೆನೆದು ಹೋಗ್ತೇವೆ ಅಮ್ಮ .  ಆಯ್ತು ನೋಡೇ ಬಿಡೋಣ ಅಮ್ಮ ನನ್ನ ಕೆನ್ನೆಗೆ ಮುತ್ತಿಡಲು ಮಳೆರಾಯ ಶಾಂತ! ಏನೇ ಕಂದ ಇದು ವಿಸ್ಮಯ? ಎಂದು ಅಮ್ಮ ಕಣ್ಣು ಬಿಟ್ಟು ನೋಡ್ತಾ ಕುಳಿತು ಬಿಟ್ಲು   ! ನೋಡು  ನಿನಗೆ ಮಳೆರಾಯನಿಗಿಂತ  ಒಳ್ಳೆ ಅಳಿಯ ಬೆಕ?  ಈವತ್ತೇ ಅಪ್ಪನೊಟ್ಟಿಗೆ ಮಾತಾಡಿ ನನಗು ಮಳೆರಾಯನಿಗು ಮದ್ವೆ ಫಿಕ್ಸ್ ಮಾಡು.    ''ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು, ಹಗಲಿರಲಿ ಇರುಳಿರಲಿ ನೀನಿರದೆ ನಾ ಹೇಗಿರಲಿ?.......'' ಪ್ರೇಮ ಕವಿ ಕಲ್ಯಾಣರ ಪತ್ನಿಯೆಡೆಗೆ, ಸಣ್ಣ ಮರುಕ! 

Sunday, June 19, 2011

ಜನ ಮರುಳೋ ಜಾತ್ರೆ ಮರುಳೋ?

                       Back home :-)! ಅಂತು- ಇಂತೂ  ಇಂಜಿನಿಯರಿಂಗ್ ಮುಗಿಸಿದ್ದಾಯ್ತು. ನಿನ್ನೆ ಮನೆಗೆ ಬಂದಾಗಿನಿಂದ ನಿಜವಾಗಲು ನಾನು ಡಿಗ್ರಿ ಮುಗಿಸಿದ್ದೇನ? ತುಂಬಾ ದೊಡ್ಡವಳು ಆದೆನ? ನನ್ನ ಪುಣ್ಯಕ್ಕೆ ಈವತ್ತು ಸಂಡೇ ಅಮ್ಮನಿಗೆ ರಜೆ, ಮನೆಯಲ್ಲಿ ಇದಾಳಲ್ಲ, ಸರಿ ಅಮ್ಮನ ತೆಲೆ ತಿನ್ನೋಣ ಅಂತ, ಅಮ್ಮ.. ನಾನು ನಿಜವಾಗಲು....? ಬಂದಾಗಿನಿಂದ ೧೦೦ ಸಲ ಕೇಳಿದ್ದೆ ಕೇಳ್ತಾ ಇದ್ದೀಯ ಏನಾಗಿದೆ ನಿನಗೆ? ಜಗತ್ತಿನಲ್ಲಿ ನೀನೊಬ್ಬಳೆ ಡಿಗ್ರಿ ಮುಗ್ಸಿದಿಯ ಏನ್ ಕಥೆ? ನನ್ನ ಪುಟ್ಟ ಮಗು ನನಗೆ ಯಾವಾಗಲು ಪುಟ್ಟ ಮಗುನೆ! ನಾಲ್ಕು ವರ್ಷ ನೀನು ಮನೇಲಿ ಇರಲಿಲ್ಲ ಅನ್ನೋದು ಬಿಟ್ಟರೆ, ನಿನ್ನಲ್ಲಂತೂ ಯಾವ maturity  ಕೂಡ ನನಗೆ ಕಾಣುತ್ತಿಲ್ಲ, ಆದರು ಹೊರಗಿನ ಜನಕ್ಕೆ ನೀನು ಈಗ ದೊಡ್ದವಳೇ! ಇನ್ನು ಮೇಲಾದರೂ ತಮ್ಮನ ಜೊತೆ  ಹೊಡೆದಾಡಬೇಡ, ದೊಡ್ಡ ದನಿಯಲ್ಲಿ ಕೂಗಾಡಬೇಡ, ಸ್ವಲ್ಪ ಸೀರಿಯಸ್ ಆಗಿ ಇರೋದನ್ನ ಕಲಿ, ಚೆಲ್ಲು ಚೆಲ್ಲಾಗಿ  ಆಡುವದನ್ನು ಬಿಡು........and the list continues...ಯಾಕಾದರೂ ಅಮ್ಮನ್ನ ಕೆಳಿದೇನೋ ಅನ್ನುವಷ್ಟು  advise ಗಳ  ಸುರಿಮಳೆ!

                     ಇತ್ತ ಅಮ್ಮ ಹೇಳಿದ್ದನ್ನೇ ಹೇಳುತ್ತಿರುವಾಗ,ಸದ್ದಿಲದಂತೆ  ಹಾಲಿನ ಲೋಟ ಎತ್ತುಕೊಂಡು, ಬಿಸಿ ಬಿಸಿ ಟೀ ಹೀರುತ್ತಾ ಪೇಪರ್ ಓದುತ್ತ ಕುಳಿತ ಅಪ್ಪನ ಪಕ್ಕದಲ್ಲಿ ಹೋಗಿ ಕುಳಿತು, ಟಿವಿ ಆನ್ ಮಾಡಿದಾಗ  ಬಂದ ಮೊದಲ ಸುದ್ದಿ FDA  ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ ೭ ಲಕ್ಷ ರುಪಾಯೀ ಎಂಬ breaking  ನ್ಯೂಸ್! ಅಮ್ಮ ಅಡುಗೆ ಮನೆಯಿಂದ ಹೊರ ಬಂದು, ನನ್ನ ತೆಲೆ ಮೊಟಕಿ , ನೋಡು ಬರೀ FDA ಪರೀಕ್ಷೆಗೆ ಈ ಪರಿಸ್ಥಿತಿ, ಇನ್ನು ನೀನು ಇಂಜಿನಿಯರಿಂಗ್ ಓದಿದ್ದು ಸಾಕು, Mtech ಮಾಡಲ್ಲ, IAS ಮಾಡ್ತೀನಿ ಅಂತೀಯ? ಎಲ್ಲ ಸರಕಾರೀ ಪರಿಕ್ಷೆಗಳದ್ದು ಇದೆ ಹಣೆ ಬರಹ, ಆಮೇಲೆ ನೀನು depressed ಆಗಿ ತೆಲೆ ಕೆಡಿಸಿಕೊಳ್ಳುವುದು ಬೇಕಿಲ್ಲ, ಸುಮ್ಮನೆ PGCET ಬರೆದು Mtech ಮಾಡು. ಅದಾದಮೇಲೆ ಏನು ಬೇಕೋ ಅದನ್ನ ಮಾಡ್ಕೋ...ಅಮ್ಮ ನಂಗೆ ಹೇಳುತ್ತಿಲ್ಲವೇನೋ ಎಂಬಂತೆ ಪೇಪರ್ ಓದುತ್ತ ಕುಳಿತುಕೊಂಡೆ.

                    ಅತ್ತ ಅಪ್ಪ ಕೂಡ, ಹೌದು ಪುಟ್ಟ ಸುಮ್ಮನೆ  ಸಮಯ ವ್ಯರ್ಥ ಮಾಡಬೇಡ PGCET preparation ಶುರು ಮಾಡು. ನಾನು ಯಾವತ್ತು ನಿನ್ನ ಕನಸುಗಳಿಗೆ ಅಡ್ಡ ಬಂದವನಲ್ಲ, ಈವತ್ತಿಗೂ ನನಗೆ ನಿನ್ನ ಸಾಮರ್ಥ್ಯದ ಬಗ್ಗೆ ಅನುಮಾನಗಳಿಲ್ಲ, ನೀನು ಮೊದಲು Mtech ಮುಗಿಸಿ ಆಮೇಲೆ ಇದರತ್ತ ಗಮನಹರಿಸು. ನಮ್ಮ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಖಂಡಿಸುವ, ಖಂಡಿಸಿ ಬರೆಯುವ ಹುಮ್ಮಸ್ಸು, ಧೈರ್ಯ ಎರಡೂ ನಿನ್ನಲಿದೆ, ಆದರೆ ಇದು ಕೇವಲ ಇವೆರಡರಿಂದ ಆಗುವ ಕೆಲಸವಲ್ಲ. ನಾನು ಅಮ್ಮನ ಹಾಗೆ ಮಾತಾಡ್ತಾ ಇದೀನಿ ಅನ್ಕೊಬೇಡ, lets be practical, ನಮಗೆ ಇನ್ನೊಂದು option ಇರಲೇಬೇಕು, ಇದಾಗದಿದ್ದರೆ ಇನ್ನೊಂದು ಅನ್ನೋ ಥರ, ನೋಡು ಯೋಚನೆ ಮಾಡು, ಇಷ್ಟಾಗಿಯೂ ನಿನಗೆ ಅದೇ ಮಾಡುವುದಿದ್ದರೆ ಮಾಡು ಪರವಾಗಿಲ್ಲ, ನಾವೇನು ಅಡ್ಡ ಬರೋಲ್ಲ, ದೆಲ್ಹಿಗೆ ಹೋಗುವ ವ್ಯವಸ್ಥೆ ಮಾಡ್ತೇನೆ.

                   ಬೆಳಗ್ಗೆ ಬೆಳೆಗ್ಗೆನೆ ತುಂಬಾ ಖಿನ್ನತೆಗೆ ಆವರಿಸಿ ಕೊಂಡಿರುವಂತಾಗಿ, ಏನು ಮಾಡಿ ಏನು ಪ್ರಯೋಜನ? ನಾನು ಯಾವ  ಊರಿನ ದಾಸಯ್ಯ? ಯಾವ ಆದರ್ಶ ಅಂತ ಇಟ್ಟು ಕೊಂಡು ಬದುಕಿ ಏನಾಗ ಬೇಕಿದೆ? ಒಂದು ಕಡೆಯಲ್ಲಿ ಭ್ರಷ್ಟ ಸರಕಾರ, ಇನ್ನೊಂದು ಕಡೆ ತಮ್ಮನ್ನು ತಾವು ಸನ್ಯಾಸಿಗಳು ಎಂದು ಹೇಳಿಕೊಂಡು ೧೦೦ ತೆಲೆಮಾರಿಗಾಗುವಷ್ಟು ಸಾವಿರ ಕೋಟಿಗಳಲ್ಲಿ ದುಡ್ಡು ಮಾಡುವ ಬಾಬಾಗಳು, ಹೇಸಿಗೆ ಹುಟ್ಟುವಷ್ಟು ಜನರ ಮೌಢ್ಯ, ಇಂಥವರ ಮುಖವಾಡ ಬಯಲು ಮಾಡಿ ಪುಟಗಟ್ಟಲೆ ಲೇಖನ ಬರೆದು, ಗಂಟಗಟ್ಟಲೆ TV ಪರದೆಯ ಮೇಲೆ ಭಾಷಣ ಹೊಡೆದು, ಕಡೆಗೆ ಅವಕಾಶ ಸಿಕ್ಕಾಗಲೆಲ್ಲ ಇದೆ ಭ್ರಷ್ಟರಿಂದ ಸೈಟು-ಮನೆ  ಮಾಡಿಕೊಂಡು ಸಮಾಜಕ್ಕೆ ನೈತಿಕ ಪಾಠ ಹೇಳಿ ಕೊಡುತ್ತಿರುವಾಗ, ನನ್ನೊಬ್ಬಳಿಂದ ಅಥವಾ ನನ್ನಂಥ ಅನೆಕರಿಂದಾದರು ಏನು ಮಾಡಲು ಸಾಧ್ಯ? ನಾವೆಲ್ಲಾ ಎತ್ತ ಸಾಗುತ್ತಿದ್ದೇವೆ? ಮುಂತಾದ ಪ್ರಶ್ನೆಗಳು ತೆಲೆಯಲ್ಲಿ ಹೊಕ್ಕಿ ಕೊರೆಯಲು ಶುರು ಮಾಡಿದವು.

                    ಏನಾಗಿದೆ ನಮ್ಮ ಜನರಿಗೆ? ಬಾಬಾ ರಾಮದೇವ್ ಆಸ್ತಿ ಸವಿಸ್ತಾರವಾಗಿ ಅಂಕೆ ಅಂಶಗಳ  ಬಹಿರಂಗ ಪಡಿಸಿದ್ದಾಗಿಯು, ಪಕ್ಕದ ಮನೆ ಆಂಟಿ ಅವನಿಂದಲೇ ಅವರ ಮಧುಮೇಹ ವಾಸಿ ಆಯಿತು  ಅಂತ ಹೇಳ್ಕೊತಾರಲ್ಲ ಯಾಕೆ? ಪುಟ್ಟ ಪರ್ತಿಯ ಜನರಿಗಂತೂ ಸತ್ಯ ಸಾಯಿ ಬಾಬಾ ನಡೆದಾಡುವ ದೇವರು, ಸಚಿನ್ ತೆಂಡೂಲ್ಕರ್ ಅಂಥ ಸ್ಟಾರ್ ಕೂಡ ಬಾಬಾನ ಚಮತ್ಕಾರಗಳಿಗೆ ಮಾರು ಹೋಗಿದ್ದನೆಂದರೆ, ಉಳಿದ ಜನ ಸಾಮಾನ್ಯರ ಪಾಡೇನು? ಯಾಕೆ ಜನರು ಇಷ್ಟು ಸುಲಭವಾಗಿ ಮೋಸ ಹೋಗುತ್ತಾರೆ? ಜನರ ಅಮಯಕತೆಯನ್ನೇ ಬಂಡವಾಳ  ಮಾಡಿಕೊಂಡು, ಕೋಟಿಗಟ್ಟಲೆ ಹಣ ಮಾಡುವ ಇಂಥ ನೀಚ ಬಾಬಾಗಳನ್ನು ಅವತಾರ ಪುರುಷರು ಎಂಬಂತೆ 24x7 ಹೇಳಿದ್ದನ್ನೇ ಹೇಳುವ ಚನ್ನೆಲ್ಲುಗಳು, ಅಸಾಹಯಕ ವೀಕ್ಷಕರು ಥೂ-ಛಿ ಎಂಬ ಉಧ್ಗಾರಗಳನ್ನು ಬಿಟ್ಟು ಬೇರೆ ಇನ್ನೇನು ಮಾಡಲು ಸಾಧ್ಯ? 

                    ಸೆಕ್ಸ್-ಸ್ಕ್ಯಾಂಡಲ್  ಇಂದಾಗಿ ಇಡೀ ಸನ್ಯಾಸಿಗಳ ಅಸ್ತಿತ್ವವನ್ನೇ ಅವಮಾನಿಸಿದ, ಸ್ವಾಮಿ ನಿತ್ಯಾನಂದನಿಗೆ ಇವತ್ತಿಗೂ ದೇಶ ವಿದೇಶಗಳಿಂದ ಭಕ್ತ ಸಾಗರ ಹರಿದು ಬರುತ್ತಿರುವದು, ನಿಜಕ್ಕೂ ವಿಪರೀತ ಭಕ್ತಿಯ ಪರಾಕಾಷ್ಟೆ ಅಂತೆ ಹೇಳಬೇಕು..ನಮ್ಮಂತೆ ಅವನು ಕೂಡ ಉಪ್ಪು-ಖಾರ ತಿನ್ನುವ ಮನುಷ್ಯ ತಪ್ಪು ಮಾಡಿದ್ದರೂ ಮಾಡಿರಬಹುದು, ತಪ್ಪನ್ನು ನೋಡಿಕೊಳ್ಳಲು ಕೋರ್ಟ್ ಇದೆ, ಆದರು ಆತ ಕೇವಲ ಮುಟ್ಟಿಯೇ ನನ್ನ ರೋಗ ಗುಣ ಪಡಿಸಿರುವ ಪವಾಡ ಪುರುಷ. ಯಾರು ಏನೇ ಹೇಳಿದರು ಅವನಿಂದ ನಂಗೆ ಒಳ್ಳೆಯದೇ ಆಗಿದೆ ಹಾಗಾಗಿ ನಾನು ಅವನಲ್ಲಿಗೆ ಮತ್ತೆ ಮತ್ತೆ ಹೋಗಿ ನನ್ನ ರೋಗ ವಾಸಿ ಮಾಡಿಕೊಂಡು ಬರುತ್ತೇನೆ ಅಂತ ಹೇಳುವ ಅವಿವೇಕಿ ಭಕ್ತರಿಗೆ ಏನನ್ನು ಹೇಳಲು ಸಾಧ್ಯ? 

                  ಅಯ್ಯೋ ನಮ್ಮ ಬಾಬಾ ರಾಮದೇವ್, ಆ ನಿತ್ಯಾನಂದನಿಗಿಂತ  ಒಳ್ಳೆಯವನಲ್ಲವ? ಈವತ್ತು ಎಲ್ಲ ಸ್ವಾಮಿಗಳು ದುಡ್ಡು ಮಾಡುತ್ತಿದ್ದಾರೆ, ರಾಮದೇವ್ ಒಬ್ಬನೇ ಏನು ಅಲ್ಲವಲ್ಲ? ಅವನು ಎಷ್ಟೇ ದುಡ್ಡು ಮಾಡಿದ್ದರೆನಂತೆ, ಅವನು ಕ್ಯಾನ್ಸೆರ್ ಮತ್ತು ಏಡ್ಸ ರೋಗಗಳನ್ನು ವಾಸಿ ಮಾಡಬಲ್ಲ, ನಮಗೆ ಅವನ ವೈಯಕ್ತಿಕ ಬದುಕು, ಅವನ ಹಣ, ಆಸ್ಥಿಗಳಿಂದ ಏನಾಗಬೇಕಿದೆ? ನನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರೆ ಕತ್ತೆ ಕಾಲಾದರೂ ಹಿಡಿದು ಬಗೆ ಹರಿಸಿ ಕೊಳ್ಳಲು ಸಿದ್ಧನಿರುವಾಗ, ರಾಮದೇವ್ ಎಂಬ ಪರಮ ದೇಶ ಭಕ್ತನ ಅನುಯಾಯಿ ಆದರೆ ತಪ್ಪೇನು ಎಂದು ಕೇಳುವವರಿಗೆ ಏನು ಹೇಳಬಹುದು?

                 ಇವತ್ತು ನಮ್ಮ ದೇಶದಲ್ಲಿ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆಯೋ, ಅದರ ಎರಡು ಪಟ್ಟು ಮಠ-ಮಂದಿರಗಳು ಮತ್ತು ಅದರ ಸ್ವಾಮಿಗಳು ಆ ಗಬ್ಬಿನಲ್ಲೇ ಮುಳಿಗೆದ್ದು ಹೋಗಿದ್ದಾರೆ, ಹಿಂದೆ ಕೆಟ್ಟು ಹೋದ ಸಾಮ್ರಾಜ್ಯ  ಎಂದೇ  ಖ್ಯಾತಿಗಳಿಸಿದ್ದ ರಾಜಕೀಯ ಕೂಡ ಈ ಬಾಬಾಗಳ ಭ್ರಷ್ಟತೆ ಗಿಂತ ವಾಸಿ ಎನ್ನುವ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದಿದಿರುವುದು ಎಂಥ ವಿಪರ್ಯಾಸ? ಭಾರತ ದೇಶ ತನ್ನ ಸಂಸ್ಕೃತಿ, ಧ್ಯಾನ, ಆಧ್ಯಾತ್ಮ, ಯೋಗಗಳಿಂದಲೇ, ಹೊರಜಗತ್ತಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದು, ಈವತ್ತು  ನಿಜವಾಗಲು ನಮ್ಮ ಮಣ್ಣಿನಲ್ಲೇ ಸ್ವಾಮಿ ವಿವೇಕಾನಂದ ನಂಥ ಮಹಾ ಪುರುಷರು   ಜನಿಸಿದ್ದರಾ? ಎಂಬ ಪ್ರಶ್ನೆ ಕೇಳುವ ಹಾಗಾಗಿದೆ? ಎಷ್ಟೋ ವರ್ಷಗಳ ಹಿಂದೆ ಸರ್ವಜ್ಞ್ಯ'' ತನ್ನ ಬಿಟ್ಟು ದೇವರಿಲ್ಲ'' ಎಂಬ ಉಕ್ತಿಯನ್ನು ಇಂಥ ಕಲಿಯುಗದ ಢೋಂಗಿ ಬಾಬಾಗಳನ್ನು ತೆಲೆಯಲ್ಲಿ ಇಟ್ಟುಕೊಂಡೆ ಹೇಳಿರಬಹುದ? ಏನೇ ಆದರು ಸರ್ವಜ್ನ್ಯನ ದೂರಾಲೋಚನೆಗೆ   HATS OFF!

Wednesday, May 11, 2011

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ?ಇರೋದ್ರೊಳಗೆ ಬಿದ್ದು ನೋಡಿ ಪ್ರೇಮದ ಗುಂಡಿ! ಅಂತ ಹೇಳ್ತಾರ್ ದೊಡ್ಡ ಮಂದಿ!!

                          
                      ಪ್ರೀತಿ, ಪ್ರೇಮ, ಆಕರ್ಷಣೆ, ಯವ್ವನ, ಹುಚ್ಚು ಮನಸು, ಹರೆಯ, ಮುಂತಾದ ಪದಗಳನ್ನು ಒಂದಿಲ್ಲೊಂದು ರೀತಿಯಲ್ಲಿ, ಸಿನಿಮಾ, ಧಾರವಾಹಿ, ಅಥವಾ ಪತ್ರಿಕೆ ಎಲ್ಲಿಯಾದರೂ ಕೇಳಿಯೇ ಕೇಳಿರುತ್ತೇವೆ. ನಾನಿರುವ ಹಂತ ಗಮನಿಸಿದರೆ ನನಗಂತೂ ಇದೊಂದು ಕೇವಲ ಮಾನಸಿಕ ಅಸ್ವಸ್ಥತೆ ಅಂತ ಅನ್ನಿಸುತ್ತದೆ!! ಹಾಗಂತ ನಾನು ತೀರ ಪ್ರೇಮ ವಿರೋಧಿ ಏನಲ್ಲ, ನನ್ನಲ್ಲೂ  ಕನಸುಗಳಿವೆ, ಕನಸುಗಳಿಗೆ ಬಣ್ಣ ತುಂಬುವ ಸಂಗಾತಿಯ ಅಸ್ಪಷ್ಟ ಚಿತ್ರವಿದೆ! ಆದರೆ ಪ್ರಶ್ನೆ ಇರುವುದು ಪ್ರೀತಿ ಯಾವ ಹಂತದಲ್ಲಿ ನಿಜವಾಗಿ ಹುಟ್ಟುತ್ತದೆ? ಅನ್ನೋದು. ನನಗೆ ಗೊತ್ತು ಇವತ್ತು ಪೋಸ್ಟ್ ಮಾಡಿ ನಾಳೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ inbox  ತುಂಬಿ ಹೋಗುವಷ್ಟು ಜನ ನನ್ನ ಸ್ನೇಹಿತರೆಲ್ಲರೂ ನನ್ನನ್ನ ಹಿಗ್ಗ ಮುಗ್ಗ ಬೈದು sms  ಮಾಡಿರುತ್ತಾರೆ! but friends am helpless:-( ನಾನು ನಿಮ್ಮ ಪ್ರೀತಿಯನ್ನು ಅವಮಾನಿಸುತ್ತಿಲ್ಲ, ಬದಲಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೆನಷ್ಟೇ.

                        ಯಾರನ್ನೇ ಕೇಳಿ ನೋಡಿ ಪ್ರೀತಿ ಒಂದು ಅನನ್ಯ ಅನುಭವ, ಮಾಡಿದವರಿಗೆ ಮಾತ್ರ ಗೊತ್ತಾಗುತ್ತದೆ, ಮಾಡದೆ ಇರುವವರು ದೊಡ್ಡ ನಷ್ಟ ಅನುಭವಿಸುವವರು ಎಂಬ ರೀತಿಯಲ್ಲಿ, ಪ್ರೀತಿಯಲ್ಲಿ ತೇಲಾಡುವ ಮನಸ್ಸುಗಳು ಹೇಳುವ ಮಾತಿದು. ಹಾಗಾದರೆ, ಪ್ರೀತಿ ಎಂಬುದು ಒಬ್ಬ ಹುಡುಗ/ಹುಡುಗಿಗೆ ಮಾತ್ರ ಸೀಮಿತವಾದ ಅಮೂಲ್ಯ ಸಂಪತ್ತಾ?  ಯಾಕೆ ನಮ್ಮ ಯುವ ಜನಾಂಗ ತನ್ನ ಹುಚ್ಚು  ಬಯಕೆಗಳಿಗೆ, ಅಪ್ರಭುದ್ಧ ಭಾವನೆಗಳಿಗೆ ಪ್ರೀತಿ ಎಂಬ ಹೆಸರನ್ನು ಕೊಟ್ಟು ಸಂಭ್ರಮಿಸುತ್ತಾರೆ? ಯಾಕೆಂದರೆ, ನಮ್ಮಲ್ಲಿರುವ ಒಂದೇ ಒಂದು ಬಯಕೆ ಏನೆಂದರೆ ನಾನು ಯಾರಿಂದಲಾದರೂ ಗುರುತಿಸಿಕೊಳ್ಳಬೇಕು ಎಂಬ ಕೆಟ್ಟ ಐಡೆಂಟಿಟಿ ಸೀಕಿಂಗ್!! 

                 ಹಾಗಾದ್ರೆ ಪ್ರೀತಿ ಮಾಡುವವರೆಲ್ಲ ಮೂರ್ಖರು ಅಂತಲ್ಲ, ಪ್ರೀತಿಸುವುದು, ಪ್ರೀತಿಸಲ್ಪಡುವುದು ತಪ್ಪು ಅಲ್ಲ, ಆದರೆ ನಮ್ಮ ಆಕರ್ಷಣೆಗಳಿಗೆ, ಭಾವನೆಗಳಿಗೆ, ಪ್ರೀತಿ ಎಂಬ ಶಬ್ದದ ಬಳಕೆ ಸರಿಯಲ್ಲ.  ನಾವು ಹುಟ್ಟಿದಾಗಿನಿಂದ ಅಮ್ಮ  ತೋರಿಸಿದ್ದು   ನಿಸ್ವಾರ್ಥ unconditional ಪ್ರೀತಿ!, ಅಪ್ಪ ತೋರಿಸುವ ಕಾಳಜಿ ನಿಜವಾದ ಪ್ರೀತಿ, ತನ್ನ ಕರುವಿಗಾಗಿ ಹಪ ಹಪಿಸುವ ಹಸುವಿನದ್ದು ಪ್ರೀತಿ. ಅಪರಿಚಿತ ಮಗುವನ್ನು ಎತ್ತಿಕೊಂಡು ಮುದ್ದು ಮಾಡುವುದು ಪ್ರೀತಿ! ಯಾರದ್ದೋ ಕಣ್ಣಿರಿಗೆ    ಕೆನ್ನೆಯಾಗುವುದು   ಪ್ರೀತಿ!  ಕತ್ತಲು ಕೋಣೆಯಲ್ಲಿ ದುಃಖತಪ್ತ ಸ್ನೇಹಿತನನ್ನು/ಸ್ನೇಹಿತೆಯನ್ನು ಸಮಾಧಾನ ಪಡಿಸುವುದು ಪ್ರೀತಿ! ತಮ್ಮ- ತಂಗಿ, ಅಣ್ಣ- ಅಕ್ಕ ರೋಡೆಗಿನ ಒಡನಾಟ ಪ್ರೀತಿ! ಇಳೀ ವಯಸ್ಸಿನಲ್ಲಿ ತಮ್ಮ ಮಕ್ಕಳಿಗಾಗಿ  ಪರಿತಪಿಸುವ ಹಿರಿಯ ಕಣ್ನುಗಳದ್ದು  ನಿಜವಾದ ಪ್ರೀತಿ!  ಪ್ರಪಂಚ ನಿಂತಿರುವುದೇ ಪ್ರೀತಿ ಎಂಬ ಎರಡಕ್ಷರದ  ಮೇಲೆ ನಿಜ, ಅದು ನಮ್ಮ ಸುತ್ತಲಿರುವ ಪ್ರತಿ ವ್ಯಕ್ತಿಯೊಂದಿಗೆ ಆಗಬಹುದಲ್ಲ? ಪ್ರೀತಿ ಎನ್ನುವುದು ಹೆಣ್ಣು-ಗಂಡಿಗೆ ಸಂಭಂದಿಸಿದ ವಿಷಯ ಅಂತ ಯಾಕೆ ಭಾವಿಸಬೇಕು?


               ನಾವು ಏನೇ ಕಂಡುಕೊಳ್ಳಲು ಹೊರಟರು, ಅಥವಾ ಯಾರನ್ನೇ ಆಗಲಿ ಇಷ್ಟಪಡುವಾಗ ಅಲ್ಲಿ  ಸ್ವಾರ್ಥ ಎಂಬ ಪದ ಹುಟ್ಟಿಕೊಂಡರೆ ಅದು ಪ್ರೀತಿಯೇ ಅಲ್ಲ!! ನನ್ನದು ಆಕೆಯೇಡೆಗಿನ ನಿಸ್ವಾರ್ಥ ಪ್ರೀತಿ ಎಂದು ಕೊಚ್ಚಿಕೊಳ್ಳುವ ಹುಡುಗರೆಲ್ಲರಿಗೂ ಒಂದು ಸಿಂಪಲ್ ಪ್ರಶ್ನೆ, ಅವಳು ನೋಡಲು ಸುಂದರವಾಗಿರದಿದ್ದರೆ ನೀವು  ಅವಳನ್ನು ಇಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಅಂತ ಹೇಳಿಕೊಳ್ಳುತಿದ್ದಿರ? ಖಂಡಿತ ಇಲ್ಲ!! ಕಣ್ನು ಇಷ್ಟ ಪಡುವುದೇ ಸುಂದರವಾದ ವಸ್ತುಗಳನ್ನ ಮತ್ತು ಸುಂದರವಾದ ವಸ್ತುಗಳನ್ನ! ನೋಡದೆ ಪ್ರೀತಿಸುತ್ತಿದ್ದೇವೆ ಅಂತ ಹೇಳಿಕೊಳ್ಳುವ ಶತ ಮೂರ್ಖರಿಗೆ ಇನ್ನೊಂದು ಪ್ರಶ್ನೆ, ಕೇವಲ ಧ್ವನಿ ಕೇಳಿ ಇಷ್ಟ ಪಡುವ ನೀವುಗಳು, backround , career , profession  ಕೇಳದೆಯೇ ನೀನು ಏನೇ ಆಗಿರು ನಿನ್ನನ್ನೇ ಪ್ರೀತಿಸುತ್ತೇನೆ ಅಂತ ಹೇಳಲು ಸಾಧ್ಯವೇ? ಹೇಳುವ  ಸಾಹಸಿಗರು ಬೆರಳಣಿಕೆಯಷ್ಟು  ಸಿಗಬಹುದೇನೋ ಆದರೆ ಅದು ಕೇವಲ ಅವಿವೇಕದ ಪರಮಾವಧಿಯಾಗಬಹುದು.!


                       ಮನುಷ್ಯ ಸಮಾಜ ಜೀವಿ. ಎಲ್ಲರಿಂದ ಪ್ರೀತಿಸಲ್ಪಡುವ ಹಾಗು ಎಲ್ಲರನ್ನು ಪ್ರೀತಿಸಲು ಬರುವ ಏಕೈಕ ಮಾತು ಬಲ್ಲ ಜೀವಿ!  ಹೀಗಿರುವಾಗ ಯಾಕೆ ನಮ್ಮ ಪ್ರೀತಿಯನ್ನು ಒಬ್ಬಳಿಗಾಗಿ/ ಒಬ್ಬನಿಗಾಗಿ ಜೀವಮಾನವಿಡಿ ಕಾಯಿದಿರಿಸಬೇಕು? ಪ್ರೀತಿ ಹಂಚಿದಷ್ಟು ಬೆಳೆಯುತ್ತ ಹೋಗುವ  ವಿಸ್ಮಯ! ಇರುವಷ್ಟು ದಿನ ಎಲ್ಲರೊಳಗೊಂದಾಗಿ ಬಾಳು ಮಂಕು ತಿಮ್ಮ ಅಂತ d v g  ಹೆಳಿದ್ದಾರೆ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರುವುದು ಕೇವಲ ಆಕರ್ಷಣೆ ಹೊರತು ಪ್ರೀತಿಯಲ್ಲ. ದೇಹಕ್ಕೆ-ಕಾಮ, ಹರೆಯಕ್ಕೆ-ಭಾವನೆ, ಕಣ್ಣಿಗೆ- ಸೌಂದರ್ಯ, ನಾಲಿಗೆಗೆ-ರುಚಿ, ಹೇಗೋ ಹಾಗೆ ಯವ್ವನದಲ್ಲಿ- ಸಂಗಾತಿಯ ಅವಶ್ಯಕತೆ ಇರುತ್ತದೆ, ಅದನ್ನ ಪ್ರೀತಿ ಅನ್ನುವುದು ತಪ್ಪಾಗುತ್ತದೆ.  ಪ್ರೀತಿಗೆ, ಕಾಮದ, ಆಕರ್ಷಣೆಯ,  ಭಾವನೆಯ, ಸೌಂದರ್ಯದ ಹಂಗಿಲ್ಲ, ಅದು ಸದಾ ಹರಿಯುವ ಜಲಧಾರೆ! ಮದುವೆಯಾದ ೫೦ ವರ್ಷದ ನಂತರವೂ ಗಂಡ ಹೆಂಡತಿಯ ಸಂಗತಕ್ಕೆ ಅಥವಾ ಹೆಂಡತಿ ಗಂಡನ ಸಂಗಾತಕ್ಕೆ ಹಾತೊರೆಯುವುದು ನಿಜವಾದ ಪ್ರೀತಿ! ಹರೆಯ ಮುಗಿದ ತಕ್ಷಣ ಸತ್ತು ಹೋಗುವ ಆಕರ್ಷಣೆಗೂ ಸಾವಿಲ್ಲದಿರುವ ಪ್ರೀತಿಗೂ ಎತ್ತಣದಿಂದೆತ್ತ  ಸಂಭಂದವಯ್ಯ??!!

                 well , ನಾನು ಬ್ಲಾಗ್ನಲ್ಲಿ ಕನ್ನಡದಲ್ಲಿ ಬರೆಯಲು ಶುರು ಮಾಡಿ ಕೇವಲ ಒಂದು ತಿಂಗಳಾಗಿದೆ. ಆದರೆ ಈ ಒಂದು ತಿಂಗಳಲ್ಲಿ ನನಗೆ ಸಿಕ್ಕ ಪ್ರತಿಕ್ರಿಯೆ, ಟೀಕೆ, ವಿಭಿನ್ನವಾದದ್ದು!! ಕೆಲವು ಸ್ನೇಹಿತರು ಯಾವಾಗ continue ಮಾಡ್ತಿಯ? ಅಂತ ಕೇಳ್ದ್ರೆ, ಇನ್ನು ಕೆಲವರು ಯಾವಾಗ ನಿಲ್ಲಿಸ್ತಿಯ? ಕೆಲವರಂತೂ ಮಾಡೋಕೆ ಕೆಲಸ ಇಲ್ಲ ಅಂತ ಕಾಣುತ್ತೆ ಅದಕ್ಕೆ  ಬೇರೆಯವರ  ಸಮಯವನ್ನು ವ್ಯರ್ಥ ಮಾಡ್ತಾ ಇದ್ದೀಯ? ಅಂತ ಕೇಳ್ತಾ ಇದಾರೆ. ನನಗೆ ಪ್ರೋತ್ಸಾಹಕ್ಕಿಂತ criticise  ಮಾಡಿದ ಸ್ನೇಹಿತರೆ ಸರಿ ಅನ್ನಿಸುತ್ತಿದ್ದಾರೆ. ಹಾಗಂತ ಅವರು ಕೇವಲ ನಿಂದನೆ ಮಾಡದೆ ವಿಮರ್ಶೆ ಮಾಡಿ ಸಲಹೆ ನೀಡಿದ್ದಾರೆ ಅವರಿಗೆಲ್ಲ ನನ್ನ ಧನ್ಯವಾದಗಳು. ಹಾಗಂತ ಯಾರೋ ಹೇಳ್ತಾರೆ ಅಂತ ನಾನು ಬ್ಲಾಗ್ ಅಂತು ನಿಲ್ಲಿಸುವುದಿಲ್ಲ, ನಿಮ್ಮ ಟೀಕೆಗಳನ್ನು ನನ್ನ ಬ್ಲಾಗ್ ಸದಾ ಸ್ವಾಗತಿಸುತ್ತದೆ.

Friday, April 29, 2011

Masti ki paathshala!!!!!

                            ನಮ್ಮ ಫಸ್ಟ್ ಸೆಮೆಸ್ಟರ್  ಒಂದು ಚೂರು ಭಯ, ಆತಂಕ, ಮತ್ತು ಕೊಂಚ ಮಜೆಯನ್ನೊಳಗೊಂಡ, ದಿನಗಳಾಗಿದ್ದವು. ಎಲ್ಲವು ಓಕೆ, ಆದ್ರೆ ಈ  " constitution  of  india  and  professional ethics " ಎಂಬ ಸಬ್ಜೆಕ್ಟ್ ಯಾಕೆ?? ಎಂಬ ವಾದ ನಮ್ಮೆಲ್ಲರದ್ದಾಗಿತ್ತು!!  ಅಷ್ತಾಗ್ಗಿಯು ಅದೇ period ನ ನಾವು ತುಂಬಾ ಎಂಜಾಯ್ ಮಾಡ್ತಾ ಇದ್ವಿ. A ಮತ್ತು B section ಎಲ್ಲರು ಒಂದೇ ಕ್ಲಾಸಿನಲ್ಲಿ, ಒಂದೇ ಬೆಂಚನಲ್ಲಿ ನಾಲ್ಕು ಜನ ಕುಳಿತುಕೊಂಡು, ಪಾಠ ಕೇಳೋದಕ್ಕಿಂತ ಜಾಸ್ತಿ ಹರಟೆ  ಹೊಡಿತಾ ಇದ್ವಿ!!


                          ಈ ಸಬ್ಜೆಕ್ಟ್ ನಾ ಅಂಕಗಳು ಕೇವಲ ಆಟಕ್ಕುಂಟು ಲೆಕ್ಕಕಿಲ್ಲ ಅನ್ನೋ ರೀತಿಯಲ್ಲಿ ಇದ್ದರಿಂದ, ನಮಗೂ ಅಷ್ಟೊಂದು seriousness ಇರಲಿಲ್ಲ, ನಾವು ಹುಡುಗಿಯರು ಫಸ್ಟ್ ಬೆಂಚನಲ್ಲಿ ಕುಳಿತುಕೊಂಡೆ, ಸಂಸಾರ ತಾಪತ್ರ್ಯಗಳೆಲ್ಲ ನಮ್ಮ ತೆಲೆಯ ಮೇಲೆ ಇದೆಯೇನೋ ಅನ್ನೋ ಹಾಗೆ ವಟ ವಟ, ಮಾತು ಕಟಿಯುತ್ತಿದ್ದರೆ, ನಮ್ಮ ಸರ್, ಎನ್ರಮ್ಮ ನಿಮ್ಮ ಗಂಡ ದಿನಾ ಕುಡಿದು ಬಂದು ನಿಮ್ಮನ ಹೊಡಿತಾನ್ರೆನಮ್ಮ? ಅದ್ಯಾಕೆ ಈ ಪರಿ ಮಾತು ಸುಮ್ಮನೆ ಕೇಳ್ಬಾರ್ದ?  ಅಂತ ಗದರಿಸಿದಾಗ , ಸ್ವಲ್ಪ ಪಾಠದ ಕಡೆ ಗಮನ ಕೊಡುತ್ತಿದ್ದೆವಾದರು, ಆ amendments , years ,  ಬಿಲ್ ಪಾಸು,  upper  house , lower  house  ಪ್ರೆಸಿಡೆಂಟು, prime  ಮಿನಿಸ್ಟರ್,ಎಲ್ಲವು ಹುಡಿಗೀಯರಿಗಂತೂ ಭಯಂಕರ ಬೋರಿಂಗ್ ಥಿಂಗ್ಸ್ ಅನ್ನಿಸ್ತಾ ಇದ್ದವು!!    


                        ಈ ಹಂತದಲ್ಲೇ ನಾನು ಮತ್ತು ಅಪ್ಪಿ ತುಂಬಾ ಕ್ಲೋಸ್ ಆಗಿದ್ದು,ಇಬ್ಬರು ಫಸ್ಟ್ ಬೆಂಚ್ ಗರ್ಲ್ಸ್! ಮೊದಲು ಬಂದವರೆಲ್ಲ ತಮಗೆ ಬೇಕಾದ ಬೆನ್ಚ್ನಲ್ಲೇ ಕುಳಿತು ಕೊಳ್ಳುತ್ತಿದ್ದರು, ಆದರೆ ನಾವು ಎಷ್ಟೇ ಲೇಟ್ ಆಗಿ ಹೋದರು ನಮ್ಮ ಬೆಂಚ್ ಮಾತ್ರ reserved  ಆಗೇ ಇರುತ್ತಿತ್ತು!! ಈಡಿ ಕ್ಲಾಸ್ ನವ್ರೆಲ್ಲ ಫಸ್ಟ್ ಬೆಂಚ್ ನಲ್ಲಿ ಕುಳಿತುಕೊಳ್ಳಲು ಇಷ್ಟ ಪಡ್ತಾ ಇರಲಿಲ್ಲ, ಆದ್ರೆ  we loved and enjoyed sitting at first bench!! ನಾನು ಮತ್ತು ಅಪ್ಪಿ ಇಬ್ಬರು ಕನ್ನಡ ಪ್ರೇಮಿಗಳು, ಉಳಿದವರೆಲ್ಲ ಕನ್ನಡ ಮಾತನಾದುತ್ತಿದ್ದರಾದರೂ, ನಮ್ಮಷ್ಟು ಕನ್ನಡ ದಿನ ಪತ್ರಿಕಗಳನ್ನ ಓದುವುದು, ಅಂಕಣಗಳ ಚರ್ಚೆ, ಅಂಕಣಕೊರರ ವಿಮರ್ಶೆ, journalism  ಅಂದ್ರೆ ವಿಪರೀತ ಆಕರ್ಷಣೆ ಹೊಂದಿರಲಿಲ್ಲ. ನಮ್ಮ ಗುಂಪಿಗೆ ಹೊಸದಾಗಿ ಸೇರ್ಪಡೆ ಆದವಳೇ ಸ್ಪಂದನ!! ಅವಳು ನಮ್ಮಷ್ಟೇ ತೀವ್ರವಾಗಿ ಕನ್ನಡ ದಿನಪತ್ರಿಕೆಗಳತ್ತ ಒಲವು ಹೊಂದಿದ್ದಳು. ಅವಳಿಗೆ ಒಂದು ದಿನಪತ್ರಿಕೆಯ ಅಂಕಣಕಾರ ಚೇತನ್ (ಹೆಸರು ಬದಲಾಯಿಸಲಾಗಿದೆ)  ಎಂಬ jounalist  ಪರಿಚಯವಿತ್ತು. ಹಾಗಾಗಿ ನಮ್ಮ ಗುಂಪಿನಲ್ಲಿ ಅತಿ ಹೆಚ್ಚಾಗಿ ಸ್ಪಂದನಳ ನೆಚ್ಚಿನ ಲೇಖಕನ ಚರ್ಚೆ ಆಗ್ತಾ ಇತ್ತು!


                             ನಮ್ಮ ಜೊತೆ ಕುಳಿತುಕೊಳ್ಳಲು ತುಂಬಾ ಹುಡುಗೀಯರು ಭಯ ಪಡ್ತಾ ಇದ್ರು, ಈವತ್ತಿಗೂ ಅಷ್ಟೇ, ಏನೇ ಕನ್ನಡ papers  ಓದ್ತಿರ? ಹೆಂಗ್ ಓದ್ತಿರೆ?  ಕನ್ನಡ ಫಿಲ್ಮ್ಸ? ಅಯ್ಯೋ ನಮಗಂತೂ ಅರ್ಥ ಅಗಲ್ಲಪ! ಅಂತ ಯಾರೇ ಅಂದರು ಸಾಕು ನಾನು  ಮತ್ತು ಅಪ್ಪಿ ಜೀವಮಾನದಲ್ಲೇ ಕನ್ನಡದ ಬಗ್ಗೆ ಇನ್ನೆಂದು ಉಡಾಫೆಯ ಮಾತುಗಳನ್ನು ಆಡಲಾರದ ಹಾಗೆ ಬೆವರು ಇಳಿಸಿ ಬಿಡುತ್ತಿದ್ದೆವು!! ಸ್ಪಂದನ typical  ಬಿಜಾಪೂರದ ಶೈಲಿಯಲ್ಲಿ ಎನವ ಹೆಂಗದ ಮೈಗೆ?  ನೀ ಹುಟ್ಟು ಮುಂದೆ thames ನೀರ್ ಕುಡಿದಿ  ಏನ್ ಕಥಿ? ಮನ್ಯಾಗ ಯಾವ accent ಮಾತಾಡ್ತಿ? ನಿಮಗೆಲ್ಲ fashion ಆಗ್ಯದ ಏನ್? ಕನ್ನಡ ಬರಂಗಿಲ್ಲ ಅಂತ ಹೇಳ್ಕೊತೀರಲ್ಲ  ಸ್ವಲ್ಪರೆ  ಜೀವಕ್ಕ ನಾಚಿಕಿ ಆಗುದ್ ಬ್ಯಾಡ? ನಿಮ್ಮ ಕಿಂತ ನಾವು ಮೂರು ಮಂದಿ ಬೆಖಾದ್ accent  ನ್ಯಾಗ್ ಇಂಗ್ಲಿಶ್ನ್ಯಾಗ್ ಮಾತಾಡ್ತಿವಿ. ಆದರ್ ನಿಮ್ಮ್ಹಂಗ ಸೊಕ್ಕಿಲ್ಲ ನಮಗ, ನಮ್ಗೆನಿದ್ರು ಕನ್ನಡನೇ ಶ್ರೇಷ್ಠ! ಕನ್ನಡ ಬರಂಗಿಲ್ಲ ಅಂತ ಹೇಳುದು ನಿಮ್ಮ ತಾಯಿಗೆ ಮಾಡಿದ್ದ ಅವಮಾನಕ್ಕಿಂತ ಜಾಸ್ತಿ ನೆನಪ  ಇಟ್ಟ್ಕೋ...ಇದೆ ಲಾಸ್ಟ್ ಇನ್ನೊಮ್ಮೆ ಹಿಂಗ ಅನ್ನು ಮುಂದ ವಿಚಾರ ಮಾಡು ಏನ?? ಅಂತ ಅವಾಜ್ ಹಾಕ್ತ ಇದ್ದಳು.ನಿಜವಾಗಿ ಕನ್ನಡ ಬರ್ದೇ ಇದ್ದವರು, northies ,ಎಲ್ಲರು ನಮ್ಮ ಗುಂಪಿನಲ್ಲಿದ್ದರು. ಅಷ್ಟೇ ಯಾಕೆ ನನ್ನ ಜೀವದ ಗೆಳತಿ ನೈನಳಿಗು ಕನ್ನಡ ಓದಲು ಕಷ್ಟ ಆಗ್ತಾ ಇತ್ತು, ಆದ್ರೆ ಕನ್ನಡ ಬಾರದೆ ಇದ್ದವರು ಮತ್ತು ಬಾರದ ಹಾಗೆ ನಟಿಸುವವರಿಗೂ ತುಂಬಾ ವ್ಯತ್ಯಾಸವಿದೆ.


                            ನಾವು ಮೂರು ಜನ ಫಸ್ಟ್ ಬೆಂಚ್ ನಲ್ಲೆ ಕುಳಿತು ಮಾಡಬಾರದ ಸಾಹಸಗಳನ್ನ ಮಾಡ್ತಾ ಇದ್ವಿ!  maths  period ಕೆಲವೊಮ್ಮೆ ತುಂಬಾ ಬೋರಿಂಗ್ ಅನ್ನಿಸೋಕೆ ಶುರುವಾದಾಗ, ನಾನು ಮೊದಲು ನಮ್ಮ ಸರ್ ನ ಡ್ರೆಸ್ ನೋಡಿ ಕಾಮೆಂಟ್ ಕೊಡೋಕೆ ಶುರು ಮಾಡ್ತಾ ಇದ್ದೆ,  ಪಾಪ ಸರ್  ನೋಡೇ ಇವತ್ತು ಕರೆಕ್ಟ್ ಆಗಿ ಡ್ರೆಸ್ ಪ್ರೆಸ್ ಮಾಡಿಲ್ಲ, ಹೈರ್ ಸ್ಟೈಲ್  ಕೂಡ ಖರಾಬ್ ಆಗಿದೆ, ಅಂದಾಗ ಸ್ಪಂದನ, ಅವರು ತಲೆ ಮೇಲೆ ಮೂರೇ ಮೂರು ಕೂದಲು straight  ಆಗಿದ್ದನ್ನ ನೋಡಿ, ನೋಡ್ರೆ ಉಪ್ಪಿ ಹೈರ್ ಸ್ಟೈಲ್ ಒಂದು  band  ಹಾಕಿದ್ರೆ, ಉಪ್ಪಿಗಿಂತ handsome ಕಾಣಲ್ಲವ ನಮ್ಮ ಸರ್? ಉಪ್ಪಿ ಡ್ರೆಸ್ ನಲ್ಲಿ imagine   ಮಾಡ್ಕೊಂಡು ಬಿದ್ದು ನಗ್ತಾ ಇರ್ಬೇಕಾದ್ರೆ ಈ ಅಪ್ಪಿ ಸುಮ್ನೆ ಇರವ್ಳು, ಅವಳದೆನಿದ್ರು ಲೇಟ್ reaction , ನಾವು ನಕ್ಕು ಸುಮ್ಮನಾದ ಮೇಲೆ ಶುರು ಹಚ್ಹ್ಕೊಳವ್ಳು,  ಎಲ್ಲೋ ಒಂದು ಕಡೆ ಒಂದು ಸ್ಟೆಪ್  ಮಿಸ್ ಆಗಿ  ಯಾರೋ  ಹಿಂದಿನಿಂದ,ಸರ್ its wrong! ಕಿರುಚಲು,  ಸರ್  ತೆಲೆ ಕೆರೆದು ಕೊಂಡಾಗ ನಾನು, ಏನು ಕಂಡು ಹಿಡಿಲಿಕ್ಕೆ ಹೊರಟಿದ್ದಾರೆ ಸರ್? ಅಂದಾಗ ಸ್ಪಂದನ, ಯುರೇಕ!! ಅಂತನ್ನಲೂ ಅಪ್ಪಿ ಖಿಸಕ್ ಅಂತ ನಗಲು, ಸರಿಯಾಗಿ ಸರ್ arpita stand up, tell me the answer! ಪ್ರತಿ ಬಾರಿ ನಮ್ಮ ತುಂಟಾಟಕ್ಕೆ  ಅಪ್ಪಿ ಬಲಿಯಾಗುತ್ತಿದ್ದಳು, ನಾವು solution  ಕಂಡು ಹಿಡಿದೇ ಈ ಚೇಷ್ಟೆ ಮಾಡುತಿದ್ದೆವಾದ್ದರಿಂದ ಸೇಫ್ ಇದ್ವಿ!


                      The most worst part of engineering was workshop!! ಪ್ರತಿ ವಾರ workshop ಎಂದರೆ ನನಗಂತೂ ಜ್ವರ ಬಂದ ಅನುಭವ!! ಆ ವಾರದ session ಮುಗಿಯುವದೊರೋಳಗಾಗಿ ನನ್ನ ಕೈ, ಮುಖ, ಕಣ್ಣು ಎಲ್ಲವು ಕೆಂಪು, ಕೆಂಪು,:-) ಯಾರ್ ಕಂಡು ಹಿಡಿದರೋ ಇದನ್ನ, ಮನಪೂರ್ತಿ ಅವರನನ್ನ ಬೈದುಕೊಂಡೆ,ಲ್ಯಾಬ್ ಶುರು ಮಾಡ್ತಾ ಇದ್ವಿ!   ಎಂದೂ ಸವೆಯಲಾರದ ಕಬ್ಬಿಣದ ಫ್ಲಾಟ್ rod  ತಂದು ಕೊಟ್ಟು, ಹುಡುಗಿಯರು ಎಂಬ ಕೊಂಚ ಕರುಣೆಯು ಇಲ್ಲದೆ, ಥೇಟ್ ಹಿಟ್ಲರ್ ಥರ ನಮ್ಮ ಸರ್, ಶುರುಮಾಡಿ ಅಂದಾಗ ಎಲ್ಲರದು ವಾರೆ ಗಣ್ಣು ನೋಟ, ಲುಕ್ ಅಮೆಲೆ ಕೊದ್ರಮ್ಮ , ಹುಂ ಕೆಲಸ ಮೊದಲು... ಅದನ್ನ ಕುಯ್ದು, ಸ್ಮೂಥಿಂಗ್ ಫಿನಿಶ್ ಕೊಟ್ಟು, ಅವರು ಹೇಳಿದ ಆಕಾರಕ್ಕೆ ಕಟ್ ಮಾಡುವಷ್ಟರಲ್ಲಿ,ನಮ್ಮ ಕ್ಲಾಸ್ ಬಾಯ್ಸ್ ಗಳಿಗೆ ಹಿಡಿ ಶಾಪ ಹಾಕಿ, ಸ್ವಲ್ಪನು ಹೆಲ್ಪಿಂಗ್ nature  ಇಲ್ಲ useless  fellows  ಅಂತ ಪ್ರತಿ ಹುಡುಗಿಯು ಮನಸ್ಸಿನ್ನಲ್ಲಿ ಅಂದುಕೊಳ್ಳುತ್ತಿದ್ದಳು!! ತಿರುಗಿ ಬಂದು ಯಾರೊಟ್ಟಿಗೂ ಮಾತನಾಡದೆ ಎರಡು ತಾಸು ಉದ್ದಕ್ಕೆ ಮಲಗಿದ್ದನ್ನು,
 ಹಾಸ್ಟೆಲ್ ನಲ್ಲಿ, ನನ್ನ ರೂಮಿ ಪ್ರಿಯಾ ಮತ್ತು ನೈನಾ workshop  ಸೈಡ್ ಎಫೆಕ್ಟ್!! ಅಂತ ಗೇಲಿ ಮಾಡಿ ನಗುತ್ತಿದ್ದರು:-) 


               ಈ ನಡುವೆ ಸ್ಪಂದನ, ಒಂದು ದೊಡ್ಡ ಆಕರ್ಷಣೆಗೆ ಸ್ಪಂದಿಸುತ್ತಿರುವುದನ್ನು ಮೊದಲು ನೈನಾ observe  ಮಾಡಿದಳು.ನಾನು ಮತ್ತು ಅಪ್ಪಿ ಅದನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದು ಕೊಳ್ಳಲಿಲ್ಲ.ಚೇತನ್ ಸ್ಪಂದನಾಳ ನೆಚ್ಚಿನ ಲೇಖಕ! ಪ್ರತಿ ವಾರ ಅವನ ಅಂಕಣ ತಪ್ಪದೆ ಓದಿ, ಅವನಿಗೊಂದು feedback  ಕಳಿಸುತ್ತಿದ್ದಳು. ಆತನು ಅಷ್ಟೇ ಸ್ಪಂದನಳನ್ನ ಎಲ್ಲ ಇತರೆ ಓದುಗರಂತೆ ಟ್ರೀಟ್ ಮಾಡಬಹುದು ಅಂತ ನಾವೆಲ್ಲರೂ ತಿಳಿದು ಕೊಂಡಿದ್ದೆವು. ಮೊದಲು ಮೆಸೇಜ್ ಮಾಡುತ್ತಿದ್ದ ಸ್ಪಂದನಾ,ಪ್ರತಿ ವಾರ ಕಾಲ್ ಮಾಡಿ ಲೇಖನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಳು.ಚೇತನ್ ಕೂಡ ಇವಳನ್ನು ಎಷ್ಟು ಹಚ್ಹಿಕೊಂಡಿದ್ದನೆಂದರೆ,ಕಾಲ್ ಇವಳೇ ಮಾಡಿದ್ದರು ಅದನ್ನು ಕಟ್ ಮಾಡಿ ತಾನೇ ತಿರುಗಿ ಇವಳಿಗೆ ಕಾಲ್ ಮಾಡ್ತಾ ಇದ್ದ! ಇವಳ ಸಂಭ್ರಮಕ್ಕಂತು ಎಲ್ಲೆಯೇ ಇಲ್ಲದಂತಾಗಿತ್ತು!ಮೂವರಿಗೂ ಪೇಪರ್ ಓದುವ ಹವ್ಯಾಸವಿತ್ತಾದರು, ತೀರ  ಚೇತನ್ ಜೊತೆ ಗಾಢವಾಗುತ್ತಿರುವ ಸ್ನೇಹದ ಪರಿಣಾಮದಿಂದಾಗಿ,ಅವಳು ಕೇವಲ ಅವನೋಬ್ಬನನ್ನೇ ಓದಲು ಮುಂದಾದಳು, ಉಳಿದವರೆನೆಲ್ಲ ಬೋರಿಂಗ್ ಎಂದೂ ಹೀಯಾಳಿಸುತ್ತಿದ್ದಳು.ಆ ವಾರ ಏನಾದರು ಅವನ ಅಂಕಣ ಮಿಸ್ ಆದರೆ ಆಕಾಶವೇ ತೆಲೆ ಮೇಲೆ ಬಿದ್ದ ಹಾಗೆ ಮುಖ ಕೆಡಿಸುತ್ತಿದ್ದಳು,ಎಷ್ಟೇ ಲೇಟ್ ಆಗಿದ್ದರು ಲೈಬ್ರರಿಗೆ ಹೋಗಿ ಓದಿದ ನಂತರವೇ ಸಮಾಧಾನ! 


                     
                            ಇದೆಲ್ಲವೂ ಸ್ಪಂದನಾ divert ಆಗುತ್ತಿರುವ ಸೂಚನೆಗಳನ್ನು ಕೊಡುತ್ತಿದ್ದವಾದರು ನಾನು ಮತ್ತು ಪ್ರಿಯಾ ಹೆಚ್ಹು ತೆಲೆ  ಕೆಡಿಸಿ ಕೊಳ್ಳಲಿಲ್ಲ, ಆದರೆ ನೈನಾ, something  wrong  with  her ! ಅಂತ ಹೇಳುತ್ತಲೇ ಇದ್ದಳು....ಸ್ಪಂದನಾ divert  ಆದ ಪರಿ ಮತ್ತು divert  ಆಗಲು ನಾನು, ಪ್ರಿಯಾ, ಹಾಗು ಅಪ್ಪಿ ಹೇಗೆ ಕಾರಣಿಭೂತರಾದೆವು  ಎಂಬುದು to be continued.......!!

Wednesday, April 20, 2011

Hostel...!!!


              ಅಂತು ಇಂಜಿನಿಯರಿಂಗ್  ಲಾಸ್ಟ್ ಸೆಂ 2nd  ಇಂಟರ್ನಲ್ ಮುಗಿಸಿದ್ದಾಯ್ತು, ಇವತ್ತಿಗೆ ಸರಿಯಾಗಿ  ಲೆಕ್ಕ ಹಾಕಿದರೆ ಇನ್ನು ಉಳಿದಿರುವುದು ಬರೋಬ್ಬರಿ ೩೦ ಚಿಲ್ಲರೆ ದಿನಗಳು:-( ಆಮೇಲೆ ನಾವ್ ಆಯಿತು ನಮ್ಮ career ಆಯಿತು. ಇನ್ನು ಉಳಿದ ಕೆಲವೇ ದಿನಗಳನ್ನ ಹೇಗೆ ಇನ್ನು ಚೆನ್ನಾಗಿ  ಕಳಿಯಬಹುದು ಅಂತಷ್ಟೇ ಯೋಚನೆ ಮಾಡುವುದೇ ಸೂಕ್ತ! ಇಲ್ಲವಾದಲ್ಲಿ ಮಂಗನ ಮನಸು ಬೇಡವಾದ ಎಲ್ಲ ವಿಷಯಗಳನ್ನು ತನ್ನ ಬುಟ್ಟಿಯಲ್ಲಿ  ಹಾಕಿಕೊಂಡು ಪಡಬಾರದ  ವ್ಯಥೆಯನ್ನು  ಅನುಭವಿಸಲಾರಭಿಸುತ್ತದೇ . ಎಲ್ಲದಕ್ಕೂ ಒಂದು ಅಂತ್ಯ  ಇದ್ದೆ ಇದೆ ಅದಕ್ಯಾಕ್ಕೆ ಇಷ್ಟೊಂದು ಹತಾಶೆ, ದುಃಖ? ಇರಲಿ ನಮ್ಮ interesting ಕಥೆ ಮಧ್ಯೆ ಸುಮ್ಮನೆ ಎಮೋಷನಲ್ ಡ್ರಾಮ  ಯಾಕೆ ಅಲ್ವಾ??


           ನಮ್ಮ ಹಾಸ್ಟೆಲ್! ಇವತ್ತು ನನ್ ರೂಮ್ನಲ್ಲಿ ಬಂದು ಸುಮ್ಮನೆ ಕಣ್ಣು ಹಾಯಿಸಿ ಹೋದ ನನ್ನ ಸ್ನೇಹಿತೆ, ಹಾಸ್ಟೆಲ್ ಅಂದ್ರೆ hell ! ಯಾವಾಗ್ಲಾದ್ರು ಮುಗಿಯುತ್ತೋ ನನ್ ನಾಲ್ಕು ವರ್ಷ ದೇವರೇ ಇಲ್ಲಿಂದ ಯಾವಾಗ  ಹೊರ ಹೋಗುತ್ತೇನೋ ಅಂತ ವಟಗುಟ್ಟುತಿದ್ದವಳು  ನೀನೆ ಏನೇ ಈಗ ಬ್ಲಾಗ್ ನಲ್ಲಿ ಅನುಭವ ಕಥನ ಗಳನ್ನ ಬರೆಯುತ್ತಿರುವುದು  ಅಂತ ಗೇಲಿ ಮಾಡಿದಳು, ಅವಳ ಮಾತು ಅತಿಶಯೋಕ್ತಿ ಏನಲ್ಲ. ಇದೆ ನಾಲ್ಕು  ವರ್ಷಗಳ ಹಿಂದೆ ಅಪ್ಪ ಅಮ್ಮನ ಕಳಿಸಿ ನನ್ನ ರೂಮಿಗೆ ಬಂದಾಗ ಹಾಗೆ  ಅನ್ನಿಸಿದು ಸತ್ಯ! ಆದ್ರೆ ಸಮಯದ ಚಕ್ರಕ್ಕೆ ಸಿಲುಕಿ, ಪ್ರತಿಯೊಂದನ್ನು ನಮ್ಮ ಜೀವನ ಶೈಲಿಗೆ ಹೊಂದುವಂತೆ ಮಾರ್ಪಾಡು ಮಾಡಿಕೊಂಡು ಅಥವಾ ನಮಗೆ ಗೊತ್ತಿಲ್ಲದೇ ಎಲ್ಲವು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗಿ ಬಿಡುವುದೇ ಅಲ್ಲವೆ  ಬ್ಯೂಟಿ ಆಫ್ ಲೈಫ್? ಇರಲಿ ಇನ್ನು ಜಾಸ್ತಿ ಸಮಯ ವ್ಯರ್ಥ ಮಾಡದೆ, ಒರಿಜಿನಲ್ ಸ್ಟೋರಿಗೆ ಹಿಂತಿರುಗೋಣ.

       ಅವಳು ನನ್ನ ಪಕ್ಕದ ರೂಮಿನಲ್ಲೇ ಇದ್ದಳು, ಎಲ್ಲರೊಂದಿಗೆ ತುಂಬಾ ಬೇಗ ಬೆರತು ಹೋಗುವ  ಸ್ವಭಾವದ ಹುಡುಗಿ, ತುಂಬಾ ಸಮಯ ತೆಗೆದು ಕೊಂಡು ಆಕೆಯನ್ನ ಸೃಷ್ಟಿ ಮಾಡಿದ್ದನೇನೋ ಬ್ರಹ್ಮ ಅಂತ ಅನ್ನಿಸುವಷ್ಟು ಸೌಂದರ್ಯ ರಾಶಿ. ರೇಶಿಮೆ ಕೂದಲು, ಯಾವ ಸಿನಿಮಾ ನಟಿಗಿಂತ ಏನು ಕಡಿಮೆ ಇಲ್ಲವೇನೋ ಅನ್ನೋ ಅವಳ ಮೈಮಾಟ, ಎಲ್ಲವು ಸೂಪರ್. ಅವಳಿಗೆ ಬಂದ ಪ್ರೋಪೋಸಲ್ಸ್ ಗಲೆಷ್ಟೋ? ಅದೆಷ್ಟು ಹುಡುಗರು ಅವಳನ್ನ ನೋಡಿ ನೋಡಿಯೇ ಮರುಳಾಗಿದ್ದರೋ ಕಾಣೆ! ಹೀಗಂತ ನನ್ನಲ್ಲಿ ನಾನೇ ಮಾತಾಡಿಕೊಂಡು ಸ್ವಲ್ಪ ಹೊಟ್ಟೆ ಉರಿದುಕೊಂಡು ಅವತ್ತು ನನ್ನ ಚೀರ್ ಅಪ್ ಮಾಡಿ ನನ್ನ ರೂಮಿಗೆ ತಂದು ಬಿಟ್ಟ ನೈನಾ ಬಗ್ಗೆ ರಾತ್ರಿಯಲ್ಲ ಯೋಚನೆ ಮಾಡುತ್ತಾ ಮಲಗಿ, ಬೆಳಗ್ಗೆ ಎದ್ದು ಕ್ಲಾಸ್ ತಲುಪೋ ಹೊತ್ತಿಗೆ ತುಂಬಾ ತಡವಾದ್ದರಿಂದ, ಯಾರನ್ನು ಮಾತನಾಡಿಸದೆ ಹೋದೆ. ಸಂಜೆ ಬರುವ ಹೊತ್ತಿಗೆ, ನನ್ನ ತುಂಬಾ ಸಂತೈಸಿದ ಸುಂದರಿಗೆ ವಿಪರೀತ ಜ್ವರ! ಊರು ಹೊಸದೇನಲ್ಲ ಆದರು ಹತ್ತು ವರ್ಷಗಳ ಬಳಿಕ ಮೆಡಿಕಲ್ ಶಾಪ್ ಬಗ್ಗೆ ಸಂಪೂರ್ಣ ಮಾಹಿತಿ ತಪ್ಪಿ ಹೋದ್ದರಿಂದ ಸ್ವಲ್ಪ ಅಳುಕಿನಿಂದಲ್ಲೇ ಆಟೋ ಹತ್ತಿ ಹೋಸ್ಪಿಟಲ್ ತಲುಪುವ ಹೊತ್ತಿಗೆ ಹರ ಹರ ಮಹಾದೇವ....!!! ಡಾಕ್ಟರ ಸಿಕ್ಕು ಮೆಡಿಸಿನ್ ಕೊಟ್ಟು ವಾಪಸ್ ಆಟೋ ಹತ್ತಿ ಬರುವಾಗ  ಇಬ್ಬರು ಮುಖ ಮುಖ ನೋಡಿಕೊಂಡು ಮುಸಿ ಮುಸಿ ನಗಲಾರಂಭಿಸಿದೆವು!!!:-)

          ನನಗೆ ಯಾವ ಹೊಸ್ಪಿಟಲ್ಗೆ ಹೂಗವುದೆಂದು ತಿಳಿಯದೆ ಆಟೋ ಚಲಕನನ್ನೇ ಯಾವುದಾದರು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಲೇಡಿ ಡಾಕ್ಟರ ಇರ್ಬೇಕು ಅಂತ ಮಾತ್ರ ಹೇಳಿದ್ದೆ, ಆ ಮಹಾಶಯ ನಮ್ಮ ಇಬ್ಬರನ್ನು maternity ಹೋಸ್ಪಿಟಲ್ ಗೆ ಕರೆದೊಯ್ದು ಬಿಟ್ಟ! ಖುಷಿ ಪಡಲು ನನಗೊಂದು ಕಾರಣವು ಇತ್ತು. ಈಗ್ಗೆ ೨೦ ವರ್ಷಗಳ ಹಿಂದೆ ಕರೆಕ್ಟ್ ಆಗಿ ಮಟ ಮಟ ಮಧ್ಯಾನಕ್ಕೆ ಅಮ್ಮನಿಗೆ  ಜನ್ಮಕ್ಕಾಗುವಷ್ಟು ನೋವು ಕೊಟ್ಟು ಏಪ್ರಿಲ್ ೧ನೆ ತಾರೀಖಿನಂದು ನಾನು ಹುಟ್ಟಿದ್ದು ಇದೆ ಆಸ್ಪತ್ರೆಯಲ್ಲಿ ಅಂತ ಆ ಬೋರ್ಡ್ ಓದಿದ ಮೇಲೆ ಅರ್ಥವಾಯಿತು.(Dr . ಇಂದಿರಾ MBBS ,MD (ಗಯನಕಾಲೋಗಿಸ್ಟ್). ಇಷ್ಟು ಸಾಕಿತ್ತು ಹಳೆದನೆಲ್ಲ ನೆನಪಿಸಿಕೊಳ್ಳಲು. ಆದ್ರೆ ಇಂಥ ಅದೆಷ್ಟು ಹೆರಿಗೆ ಗಳನ್ನೂ ಈ ಇಪ್ಪತು ವರ್ಷದಲ್ಲಿ ಅವ್ರು ಮಾಡಿರುತ್ತರೋ? ಅವರಿಗೆ ನಿನ್ನೆ ಮಾಡಿದ ಹೆರಿಗೆಯೇ ನೆನಪಿನಲ್ಲಿ ಉಳಿದಿರುವುದಿಲ್ಲ ಇನ್ನು ನಿನ್ನ  ಗುರುತು ಹಿಡಿದಾರೆಯೇ? ಸುಮ್ನೆ ಬೇರೆ ಕಡೆ ಹೋಗೋಣ ನಡೆ ಮಾರಾಯ್ತಿ ಇದೆಲ್ಲಿಯ ಸಹವಾಸ ಸಣ್ಣ ಜ್ವರಕ್ಕೆ maternity  ಆಸ್ಪತ್ರೆಗೆ ಬರೋದ? ನೈನಾ ತನ್ನ ಕ್ಷೀಣ ಧ್ವನಿಯಲ್ಲಿ ಹೇಳುತ್ತಲೇ ಇದ್ದಳು, ಹೊರ ಜಗತ್ತಿನ ಪರಿಚಯವೇ ಇಲ್ಲದೆ ಅಪ್ಪನ ಸಹಾಯವಿಲ್ಲದೆ ಒಂದು ದಿನ ಕೂಡ ಆಸ್ಪತ್ರಗೆ ಹೋಗಿರದ ನಾನು, ಆವತ್ತು ಏನೋ ದೊಡ್ಡ ಸಾಧನೆ ಮಾಡುವರ ಹಾಗೆ ಅವಳು ಅಷ್ಟು ಹೇಳುತ್ತಿದ್ದರು ಕಿವಿಯಲ್ಲಿ ಹತ್ತಿ ಇಟ್ಟುಕೊಂಡಿರುವಂತೆ  ಕುಳಿತು ಬಿಟ್ಟೆ.

       ಆಗ ಶುರುವಾಯಿತು ನಿಜವಾದ ಪ್ರಪಂಚ ಪರಿಚಯ!! ನಾವು ಕುಳಿತು ಹತ್ತು ನಿಮಿಷ ಮೀರಿದರೂ, ಡಾಕ್ಟರನ ಸುಳಿವೇ ಇಲ್ಲ, ಪೇಶಂಟ್ temperature ಜಾಸ್ತಿ ಆಗ್ತಾ ಇದೆ ಇನ್ನು ಎಷ್ಟು ಹೊತ್ತ ಆಗುತ್ತಮ್ಮ  ಅವರು ಬರಲು? ಅಂತ ಕೇಳಿದ್ದಕ್ಕೆ, ಅಲ್ಲಿರುವ ಆಯಾ ಅಯ್ಯೋ abortion  ಕೇಸ್ ಅಂದ್ರೆ ಇನ್ನು ಲೇಟ್ ಆಗುತ್ತೆ ನೀವು ಸುಮ್ನೆ ಅಲ್ಲಿ ಹೋಗಿ ಕುಳಿತುಕೊಳ್ಳಿ ಅಂದು ಬಿಡೋದ??? !!! maternity ಆಸ್ಪತ್ರೆಗೆ  ಇಬ್ಬರು ವಯಸ್ಸಿಗೆ ಬಂದ ಹುಡುಗೀಯರು ಮಾತ್ರವೇ ಬಂದಿದ್ದಾರೆ ಅಂದ್ರೆ ಈ ರೀತಿಯ ಸತ್ಕಾರಾನ?? ಅದೆಲ್ಲಿತ್ತೋ ಅಷ್ಟು ಕೋಪ (ಅದು ಯಾವಾಗಲು ನನ್ನ ಮೂಗಿನ ನೇರಕ್ಕೆ ಇರುತ್ತೆ ಬಿಡಿ) ಹೇಯ್ ರಾಕ್ಷಷಿ ಏನೇ ಬಾಯಿಗೆ ಬಂದ ಹಾಗೆ ಮಾತಾಡ್ತಿಯ ಏನ್ ಅನ್ಕೊಂಡಿದಿಯ ನೀನು ನನ್ನನ್ನು? ನೋಡಕ್ಕೆ ತೆಳ್ಳಗೆ ಕಾಣಿಸ್ತೀನಿ ಅಷ್ಟೇ  ಎರೆಡು ಬಿಟ್ಟ ಅಂದ್ರೆ  ಜೀವನ ಪೂರ್ತಿ  ಮಾತಾಡಬಾರದು ಹಾಗೆ ಮಾಡ್ತೀನಿ ಹುಷಾರ್!! ಅಂತ ಅವಾಜ್ ಹಾಕ್ದೇ ನೋಡಿ ಆಸ್ಪತ್ರೆಯಲ್ಲಿ ಸ್ಮಶಾನ ಮೌನ!. ಜನರೆಲ್ಲರೂ ನಾನೇನು ಫೂಲನ್ ದೇವಿಯ ಮಗಳಿರಬಹುದ ಅಂತ ಲೆಕ್ಕ ಹಾಕ್ತ ಇದ್ದರೋ ಏನೋ ಪಾಪ, ಅಷ್ಟು ಹೊತ್ತಿಗಾಗಲೇ ನನ್ನ ಕೂಗಾಟ ಡಾಕ್ಟರ ಇದ್ದ ಕೊಣೆಗೂ ಕೇಳಿಸಿದ್ದರಬಹುದು, ಧಾವಿಸಿ ಬಂದು ಏನು ನಡೀತಾ ಇದೆ ಅಂತ ನೋಡುವ ಹೊತ್ತಿಗೆ, ಆಯಾಳ  ಪರಿಸ್ತಿತಿ ನನ್ನ ಕೈಯಲ್ಲಿ ಗಂಭೀರ ಸ್ವರೂಪ ತಾಳಿದದನ್ನು ಕಂಡು, ನನ್ನ ಎಡಗೈ  ಮೇಲಿನ BCG   injection ಗುರುತು ನೋಡಿ, ಅವಳಿಗೆ ನಾನು ಬುದ್ಹಿ ಹೇಳ್ತೀನಿ ಬಿಡಮ್ಮ,ನೀನು ದಾಸರೆಯವರ ಮಗಳ? ಅಂತ ಕೇಳಲು,  ನನ್ನ ಕೋಪವೆಲ್ಲ ಕರಗಿ  ನೀರಾಗಿ ಹರಿದು  ಹೌದು ಮೇಡಂ, ನೋಡಿ ನಿಮ್ಮಲ್ಲಿ ಕೆಲಸ ಮಾಡುವವರು ಎಂಥ  ಮಾತಾಡುತ್ತಿದ್ದಾರೆ??   ಅನ್ನಲು ನನ್ನ ಮತ್ತು ನೈನಳನ್ನ ಒಳ ಕರೆದೊಯ್ದು tablets  ಬರೆದು ಕೊಟ್ಟು,  ತುಂಬಾ ಆತ್ಮೀಯವಾಗಿ ಮಾತಾಡಿದ ಡಾಕ್ಟರ, ನೀನು BCG  ಚುಚ್ಹಿಸಿ ಕೊಳ್ಳುವಾಗಲೇ ನೀನು ಜಗಳಗಂಟಿ ಆಗ್ತಿಯ ಅಂತ ನಿಮ್ಮ ಅಪ್ಪನಿಗೆ ಹೇಳಿದ್ದೆ  ಅಂತ ವ್ಯಂಗ ನಗು ನಕ್ಕಾಗ, ಅಲ್ಲ ಮೇಡಂ ಇಷ್ಟೊಂದು experience  ಇರುವ ನೀವು ನನಗೆ BCG ಹಾಕುವಾಗ ಸರಿಯಾಗಿ ಹಾಕೊದಲ್ವ ನೋಡಿ ಎಷ್ಟು ದೊಡ್ಡದು ಹಾಕಿದಿರ? ಅಂದಾಗ, ನೀನು ಹುಟ್ಟಿದಾಗಿನಿಂದ ಜಗಳಗಂಟಿ ಮಗು, ಅವಾಗ್ಲು ನನ್ ಜೊತೆನೂ ಜಗಳ ಮಾಡಿದ್ದಕ್ಕೆ ಅಷ್ಟು ದೊಡ್ಡದಾಗು ಹಾಗೆ ಆಯಿತು! ಅಂತ ಹೇಳಿದಾಗ, ಸುಮ್ಮನೆ ಹುಸಿ ನಕ್ಕು, ಥ್ಯಾಂಕ್ಸ್ ಹೇಳಿ,  ನೈನಳನ್ನ ಕರೆದುಕೊಂಡು ಬರುವಷ್ಟಿಗೆ, ಆ ಆಯಾ ನನ್ನ ತುಂಬಾ apologic ಆಗಿ ನೋಡುತ್ತಿರುವುದನ್ನು ಕಂಡು ಅವಳಿಗೊಂದು ಸಾರೀ ಹೇಳೇ ಪಾಪ ಅಂತ ನೈನಾ ಹೇಳಿದ್ದಕ್ಕೆ ಕೇಳ್ದೆ ಹೊರತು ನನಗಂತೂ ಅವಳು ಪಾಪ ಅಂತನ್ನಿಸಿರಲಿಲ್ಲ!!!


         ಇಷ್ಟಾದ ಮೇಲೆ ನಾನು ನೈನಾ ಆತ್ಮಿಯರಾಗಲು ಬೇರೆ ಕಾರಣ ಬೇರೆ ಬೇಕಾ?? ಎರಡೇ ದಿನಕ್ಕೆ ನಾವು  ತುಂಬಾ ವರ್ಷದ  ಪರಿಚಿತರೆನೋ  ಅನ್ನೋ ಹಾಗೆ ಒಬ್ಬೊರನ್ನೊಬ್ಬರು ಹಚ್ಹಿಕೊಂಡು ಬಿಟ್ಟೆವು. ಈ ಘಟನೆಯ ಬಳಿಕ ಹಾಸ್ಟೆಲ್ನಲ್ಲಿ ಯಾರಿಗೆ ಜ್ವರ ಬಂದರು ಅದನ್ನ maternity  ಹೋಸ್ಪಿಟಲ್ ಜ್ವರ ಅಂತಲೇ ನೈನಾ ನನ್ನ ಗೇಲಿ ಮಾಡುತ್ತಿದಳು, ನೋಡಲೇ ದಾಸರೆ ಮತ್ತ ಅಕಿಗೆ ಜ್ವರ ಬಂದದ ಅಂತ, ಯಾವ್ maternity ಹೋಸ್ಪಿಟಲ್ ಕರಕೊಂಡು ಹೋಗುನು??? ಅಂತಲೇ ಎಲ್ಲ ಸ್ನೇಹಿತೆಯರು ಕಿಚಾಯಿಸುತ್ತಿದ್ದರು. ಅಬ್ಬ ಭಯಂಕರ ಸಾಧನೆ ನಾನು ಹಾಸ್ಟೆಲ್ ಸೇರಿದ ಮಾರನೆ ದಿನಕ್ಕೆ ಮಾಡಿ ಬಿಟ್ಟಿದ್ದೆ, ಮತ್ತು ಅದಕ್ಕೆ ಸರಿಯಾದ reward  ಕೂಡ ಪೂರ್ತಿ ಸೆಂ ಅನುಭವಿಸೋ ಹಾಗಾಯ್ತು!!! ಏನೇ ಆದರು ಈ ಘಟನೆ ಇಂದಲೇ ನಾನು ಮತ್ತು ನೈನಾ ಇಷ್ಟೊಂದು ಆತ್ಮಿಯರಾಗಲು ಸಾಧ್ಯವಾಗಿದ್ದು,  ನನ್ನಲ್ಲಿ ಇವತ್ತು ಏನೇ changes  ಆಗಿದ್ರು ಅದಕ್ಕೆಲ್ಲ ನನ್ನ ಜೀವದ ಗೆಳತಿ ನೈನಾ ಕಾರಣ.

       ಬರಿ jeanse ಮತ್ತು ಟಾಪ್ ಹಾಕುತ್ತಿದ್ದ, ಬರಿ ಹುಡುಗರ ಹಾಗೆ ವರ್ತಿಸುತ್ತಿದ್ದ ನನ್ನನ್ನು, ಒಬ್ಬ ಸಭ್ಯ, ಸೂಕ್ಷ್ಮ ಹುಡುಗಿಯಾಗಿ ಪರಿವರ್ತಿಸಿದ, ಎಲ್ಲರನ್ನು ಹಚ್ಹಿಕೊಂಡು ಇರಲು ಕಲಿಸಿದ, ಯಾವಾಗಲು ಇಲ್ದೆ ಇದ್ರೆ ಪರವಾಗಿಲ್ಲ ಅವಾಗ ಅವಾಗ, ಒಂದು ಚೂರು ಹುಡುಗಿಯರ ಹಾಗೆ ಸಿಂಗಾರ, ಬಂಗಾರ, ಮೇಕ್ ಅಪ್ ಆಗೋದನ್ನ ಕಲಿಯೇ,  ಇಲ್ಲಾಂದ್ರೆ ನಾಳೆ, ನಿನ್ನ ಮದುವೆಯಾದ ಹುಡುಗ ನಾನು ಹುಡುಗಿ ವೇಷ ದಲ್ಲಿರೋ ಹುಡುಗನನ್ನ ಮದುವೆ ಆದೆನ?? ಅಂತ ಯೋಚನೆ ಮಾಡೋ ಹಾಗೆ ಆದೀತು! ಅವನು ನಿನ್ನ ಹಾಗೆ ಕಂಜುಸ್ ಆಗಿದ್ರೆ ಪರವಾಗಿಲ್ಲ ಬಿಡು ಒಳ್ಳೆ ಜೋಡಿ, ಕರ್ಚೆ ಮಾಡದ ಗಂಡ, ಶೋಪ್ಪಿಂಗೆ ಮಾಡದ ಹೆಂಡತಿ ಒಳ್ಳೆ ಜೋಡಿ ಕಣೆ. ಅಂತ ಅವಾಗ್ ಅವಾಗ್ ಹೇಳ್ತಾ ಇದ್ಲು.  lipstick, maskara, kajol, foundation, compact,eyeshadow, parlour, ಇದು ಯಾವುದರ ಪರಿಚಯವೇ ಇಲ್ಲದೆ ಬೆಳದ ನನಗೆ ಹೊಸದೊಂದು ಲೋಕದ ಪರಿಚಯ ಮಾಡಿ ಕೊಟ್ಟವಳೇ ಅವಳು. ಅವಳನ್ನು ಅನುಸರಿಸಲು ಹೋಗಿ ನಾ ಮಾಡಿಕೊಂಡ ಫಜೀತಿ to be continued............!!!

Tuesday, April 19, 2011

Everlasting Engineering journey......!!!!

              Am excited!! ಅಂತಷ್ಟೇ ಹೇಳಿ ನನ್ನ ಮನಸಿಗೆ ತೋಚಿದ್ದನ್ನು ಬರೆಯಲು ಸಜ್ಜಾಗಿದ್ದೇನೆ.
ಮಕ್ಕಳು ನೋಡ್ತಾ ನೋಡ್ತಾ ದೊಡ್ಡವರಾಗಿ ಬಿಡ್ತಾರೆ ಅನ್ನೋದು ನಮ್ಮ ಪಾಲಕರ ಮಾತುಗಳು. ನಿಜವಾಗಲು ನಾನು ದೊಡ್ದವಳಗಿದ್ದಿನ? ಕನ್ನಡಿಯಲ್ಲಿ ನಿಂತು ನನ್ನ ನಾನೆ ಕೇಳಿಕೊಂಡಾಗ, slap yourself! ಅಂತು ನನ್ನ ತುಂಟ ಪ್ರತಿಬಿಂಬ.

             ಏನೇ ಅಂದ್ರು ನೋಡ್ತಾ ನೋಡ್ತಾ ಎಂಟನೆ ಸೆಮೆಸ್ಟರ್ ತಲುಪಿದ್ದೇನು ಸುಮ್ಮನೆ ಮಾತಾ?? ಮೊನ್ನೆ ತಾನೆ ಅಪ್ಪ- ಅಮ್ಮನ್ನ ಬಿಟ್ಟು ಹಾಸ್ಟೆಲ್ ಸೇರಿದ ಹಾಗಿದೆ, within a blink of an eye we are almost through it! ಇಂಜಿನಿಯರಿಂಗ್ ಲೈಫ್ ಸ್ಟೈಲ್ ಬಗ್ಗೆ ಪುಟಗಟ್ಟಲೆ ಪುಸ್ತಕಗಳನ್ನ ಬರೆದ ಭೂಪರಿದ್ದರೆ. ಒಂದು ಚಿತ್ರವನ್ನೇ ಮಾಡಿ, ಹಿಸ್ಟರಿ create ಮಾಡಿದವರಿದ್ದಾರೆ. ಅವೆಲ್ಲ complete guys oriented ಅಂತ ಅನ್ನಿಸೋಕೆ ಶುರುವಾಗಿ, ಹುಡುಗಿಯರ ಇಂಜಿನಿಯರಿಂಗ್ ಜೀವನದ ಬಗ್ಗೆ ಬರೆದರೆ ಹೇಗೆ ಅಂತ ಯೋಚಿಸ್ತಾ ನನ್ನ ಜೀವದ ಗೆಳತಿ ಅರ್ಪಿತಗೆ ಮೆಸೇಜ್ ಮಾಡಿದೆ.
me: appi wanna write something...
appi: ಏನ್ ಕಡಿಮ ಬಿತ್ತು?/
me: am serious wanna write something about college life...
appi: are you nuts??
me: wait and watch!!
ಅಂತ ಹೇಳಿ ಬರಿಯೋಕೆ ಶುರು ಮಾಡಿದಿನಿ......

            ಜೀವನದ ಅತ್ಯಮೂಲ್ಯ ಮಹತ್ತರ ವರ್ಷಗಳ ಪಾಲುದಾರ ಡಿಗ್ರಿ. ಅತ್ತ matured ಕೂಡ ಅಲ್ಲದ, ಇತ್ತ immatured ಕೂಡ ಅಲ್ಲದ ,  adult ಕೂಡ ಅಲ್ಲದ, childish ಕೂಡ ಅಲ್ಲದ, ಸುಪ್ತ ಸುಪ್ತ, ಹಸಿ ಹಸಿ ಮನಸುಗಳ ಪಿಕಿಲಾಟ,ಹೋರಾಟ,ಸಂಘರ್ಷ,ಸಂತೋಷ,ಆಕರ್ಷಣೆ, ಒತ್ತಡ, ಭಯ,ಅಭಿವ್ಯಕ್ತ,ಸ್ನೇಹ, ಹೊಂದಾಣಿಕೆ,ಪ್ರೀತಿ, ದ್ವೇಷ, ಮಮತೆ, ಜೀವನೋತ್ಸಾಹ,ಹುಂಬತನ,ಅಮಾಯಕತೆ, ವ್ಯಕ್ತಿತ್ವ,ಜೀವನ ಪ್ರೀತಿ, ಇತ್ಯಾದಿ ಇತ್ಯಾದಿ.... ಎಲ್ಲವುಗಳನ್ನೋಳಗೊಂಡ ಹುಡುಗಿಯರ ಇಂಜಿನಿಯರಿಂಗ್ experience ಅನ್ನು ಹಂಚಿಕೊಳ್ಳುವ ತವಕ ನನ್ನನ್ನು, ಇಡೀಯಾಗಿ ಕಳೆದ ಮೂರು ದಿನಗಳಿಂದ ಕಾಡುತ್ತಿದೆ!!!

           ಕಾರಣವಿಷ್ಟೇ , ರವಿನ್ದೆರ್ ಸಿಂಗ್ (Ravinder singh writer of ' I TOO HAD A LOVE STORY'!) ಎಂಥ ಹುಡುಗ! ಪ್ರತಿ ಹುಡುಗಿ ತನ್ನ ಜೀವನ ಸಂಗಾತಿಯಲ್ಲಿ  ಅಪೇಕ್ಷಿಸುವ ಎಲ್ಲ ಗುಣಗಳನ್ನು ಒಳಗೊಂಡಿರುವಾತ. ಮದುವೆ  ಎಂದಾಕ್ಷಣ ನೂರು ಮೈಲಿ ಓಡುವ ನಾನು ಮತ್ತು ನನ್ನಂಥ ಅನೇಕ ಸ್ನೇಹಿತೆಯರಿಗೆ ರವಿನ್ ಅಂಥ ಹುಡುಗ ಸಿಗ್ತಾನೆ ಅಂದರೆ, ಇವತ್ತೇ  ಮದುವೆಯಾಗಿ ಬಿಡುವ ಸಂಭ್ರಮ!! ರವಿನ್ ಬಗ್ಗೆ ಆಗಾಗ ಬರೆಯೋದು ತುಂಬಾ ಇದೆ, ಸಧ್ಯಕ್ಕೆ ನನ್ನನು ಬರೆಯಲು ಪ್ರೇರೇಪಿಸಿದ ಈ  ಲೇಖಕನಿಗೆ ಒಂದು ಥ್ಯಾಂಕ್ಸ್ ಹೇಳಿ, ನಮ್ಮ ಕಥೆ ಆರಂಭಿಸೋಣ ಏನಂತೀರಿ??

         ಸೆಪ್ಟೆಂಬರ್ ೫, ೨೦೦೭ ಇಂಜಿನಿಯರಿಂಗ್ ಮೊದಲ ದಿನ. ದ್ವಿತೀಯ PUC, ಎಂಬ ಮಹಾನ್ ಯುದ್ಧ ಮುಗಿಸಿ, ನಮ್ಮೆಲ್ಲ ಶಸ್ತ್ರಾಸ್ತ್ರಗಳನ್ನ ತ್ಯಜಿಸಿ, ಕಾಲೇಜ್ ಕ್ಯಾಂಪಸ್ನಲ್ಲಿ  ಕಾಲಿಡುವ ಮುನ್ನ ಕ್ಲಾಸ್ ರೂಮ್ಸ್ ಕನಸ ಕಾಣ  ತೊಡಗಿದ್ದಾಗ, ಅಮ್ಮನ ಎಂದು ಮುಗಿಯದ ಬುದ್ಧಿ ವಾದ, ಅಜ್ಜಿಯ ನೆಲ ನೋಡಿ ಹೋಗ್ಬೇಕು ನೆಲ ನೋಡಿ ಬರಬೇಕು ಎಂಬ ಎಚ್ಚರಿಕೆ, ಪ್ರೀತಿಯ ತಮ್ಮನ ಇನ್ನಾದ್ರು ಎಂಜಾಯ್ ಮಾಡ್ರೆ ...ಎಂಬ ಅಪ್ಪಣೆ, ಎಲ್ಲವನ್ನು ಅರಗಿಸಿಕೊಂಡು ಕಾಲೇಜ್ ಕ್ಯಾಂಪಸ್ ಎಂಟ್ರಿ ಕೊಟ್ಟಿದ್ದು, ಇವತ್ತಿಗೂ ನಂಗೆ ಸರಿಯಾಗಿ ನೆನಪಿದೆ ನಾನು ಮೊದಲ ದಿನ ಒಂದನೇ ತರಗತಿ ಶಾಲೆಗೆ ಸೇರಿಸುವಾಗ ಒಂದು ಬದಿ ಅಪ್ಪ ಇನ್ನೊಂದು ಬದಿ ಅಮ್ಮ ನನ್ನ ಪುಟ್ಟ ಕೈಗಳನ್ನು ಹಿಡಿದು ಶಾಲೆಗೆ ಬಿಟ್ಟೂ ಬಂದ ನೆನಪು.  ಇಂಜಿನಿಯರಿಂಗ್  ಮೊದಲ ದಿನವು ಮೊದಲ ಸಲ ಶಾಲೆಗೆ ಹೋದ ಅನುಭವೇ ಸರಿ, ಯಾಕೆಂದರೆ ಅಪ್ಪ ಅಮ್ಮ ಅದೇ ರೀತಿಯಲ್ಲಿ ನಾನೀಗ ಬೆಳೆದು ದೊಡ್ದವಲಾಗಿದ್ದಿನಿ ಎಂಬ ಪರಿವು ಇಲ್ಲದಂತೆ ಮಗುವಿನಂತೆ ನನ್ನ ಎರಡು ಕೈಗಳನ್ನು ಹಿಡಿದುಕೊಂಡು ಕ್ಲಾಸ್ ರೂಂ ತನಕ ಕರೆದುಕೊಂಡು ಹೋಗಿದ್ದು ಕೊಂಚ ವಿಪರೀತ ಅನಿಸಿದರು  ನಿಜ!! 



                   ನನ್ನನ್ನ್ನು  ಬರೆಯಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲ ಗೆಳೆಯರಿಗೆ, ಮತ್ತು ಪರಿಚಯವೇ ಇಲ್ಲದಿದ್ದರೂ  ತುಂಬಾ ಆತ್ಮೀಯವಾಗಿ ಹುರಿದುಂಬಿಸುತ್ತಿರುವ  ಜಲನಯನ blooger  ಸರ್  ಮತ್ತು ಗಣೇಶ್ ಅವರಿಗೆ ಥ್ಯಾಂಕ್ಸ್  ಹೇಳುತ್ತಾ    ನಮ್ಮ ಕ್ಲಾಸ್ ರೂಂ ಸ್ಟೋರಿ  .....

                 ಅವತ್ತು ಎಲ್ಲ ಹುಡುಗಿಯರು ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದರು ನಾನು ಕೂಡ ಅಂತ ಸ್ಪೆಷಲ್ ಆಗಿ ಹೇಳುವ ಅವಶ್ಯಕತೆ  ಇಲ್ಲದಿದ್ದರೂ ಹೇಳ್ತೀನಿ ತಪ್ಪು ತಿಳಿಬೇಡಿ ಪ್ಲೀಸ್;-)....ಹಾ ಹುಡುಗರು ತಕ್ಕ ಮಟ್ಟಿಗೆ Professionals  ಅನ್ನೋ ಹಾಗೆ ರೆಡಿ ಆಗಿದ್ದರು. ಎಲ್ಲ ಹೊಸ ಮುಖಗಳ ನಡುವೆ ಕಪ್ಪು ಬಣ್ಣದ ಸಲ್ವಾರ್ ಹಾಕಿಕೊಂಡಿದ್ದ ಹುಡುಗಿ ಪಕ್ಕದಲ್ಲಿ ಹೋಗಿ ಕುಳಿತೆ. ತುಂಬಾ ಸೌಮ್ಯ ಸ್ವಭಾವದ ಹುಡುಗಿ ಅನ್ನಿಸಿದರು ಮತ್ತೆ ನೋಡಬೇಕು ಅನ್ನುವಷ್ಟು ಚೆನ್ದವಿರುವ ಹುಡುಗಿಯನ್ನು ಮಾತನಾಡಿಸದೆ ಇರುವುದು ಉಂಟೆ?? ಆಯಿತು ವಾಚಾಳಿ ಅದ ನನಗೇನು ಸ್ನೇಹಿತರನ್ನ ಮಾಡಿಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ...ಅವಳತ್ತ ಕೈ ಚಾಚಿ...
Hi  ashwini  here from dharwad(ಮೂವತ್ತು ಹಲ್ಲುಗಳು ಕಾಣುವಂತೆ ದೊಡ್ಡ ಸ್ಮೈಲ್ ಕೊಡುತ್ತ..)
Spandana  from bijapur.....:-) ನಮ್ಮ ಮೊದಲ ದಿನದ ಭೇಟಿ ಅಷ್ಟೇನೂ memorable  ಅಂತ ಅನ್ನಿಸದಿದ್ದರೂ ಅವಳು ನನ್ನ ಜೀವದ ಗೆಳತಿ ನಂಬರ್ ೧ ಆಗುತ್ತಾಳೆ  ಅಂತ ಆ ಕ್ಷಣಕ್ಕಂತು ಅನ್ನ್ನಿಸಿರಲಿಲ್ಲ....ಇಷ್ಟು ಪರಿಚಯದ ನಂತರ

         ತುಂಬಾ ಚಿಕ್ಕವನಂತೆ ಕಾಣುವ, ಮತ್ತು ಅಷ್ಟೇನೂ ಎತ್ತರ ವಿಲ್ಲದಿದ್ದರೂ ಸ್ಪುರದ್ರೂಪಿ, ಕೃಷ್ಣ ಬಣ್ಣದ professionally dressed , lecturer ಕ್ಲಾಸ್ ಒಳ ಬಂದಾಗ ಅವರು ನಮ್ಮ ಲೆಕ್ಟುರೆರ್ ಅಂತ ನಮಗ್ಯಾರಿಗೂ ಅನ್ನಿಸದೆ ಅವರು ನಮ್ಮಂತೆ fresher  ಅಂದು ಕೊಂಡು ಸುಮ್ಮನೆ ಕುಳಿತುಕೊಂಡಿದ್ದು ಮಾತ್ರ ವಿಪರ್ಯಾಸ!! ಪಾಪ ಬೇರೆ ದಾರಿ ಇಲ್ಲದೆ ಅವರೇ stage ಮೇಲೆ ಹೋಗಿ ತಮ್ಮ ಪರಿಚಯ ಹೇಳಿ ಕೊಂಡಾಗಲೇ ಇವರು ನಮ್ಮ ಸರ್,.... ಅಂತ ಗೊತ್ತಾಗಿದ್ದು...ಹುಡುಗರಿಗೆ ಅದು ಚರ್ಚೆಯ ವಿಷಯವೇ ಅಲ್ಲ ಬಿಡಿ.,ಆದ್ರೆ ಹುಡುಗೀಯರು '' ಹೇಯ್ lecturer  ಅಂತೆ ಕಣ್ರೆ ತುಂಬಾ ಚಿಕ್ಕವ್ರಲ್ಲವ?', ಎಷ್ಟು ಚೆನ್ನಗಿದರಲ್ಲ??,ಹೈಟೆ ಇಲ್ಲ ಕಣೆ ಇನ್ನು ಸ್ವಲ್ಪ ಎತ್ತರ ಇರಬೇಕಿತ್ತು ಅಲ್ವ?, ಅಯ್ಯೋ ವಿಪರೀತ ಕಪ್ಪು...! ಅವ್ರು ನಮ್ಮ  ಸರ್ ಅನ್ನೋದಕಿಂತ ಮದ್ವೆ ಹುಡುಗನೇನೋ ಅನ್ನೋ ಥರ  ವ್ಯರ್ಥ ಚರ್ಚೆಗಳನ್ನ ಮಾಡ್ತಾ ಇರ್ಬೇಕಾದ್ರೆ, 'Good morning everyone! i am akash patil ', as this is the first class, let me have your introductions, the very first question of HR round tell me about youself!!! ಅಂತ ಹೇಳಿದ್ರು.

          ಒಂದಿಬ್ಬರನ್ನು ಬಿಟ್ಟರೆ ಉಳಿದೆಲ್ಲರೂ ತುಂಬಾ ಬೋರಿಂಗ್  ಆದ ರೀತಿಯಲ್ಲೇ ತಮ್ಮ Introduction  ಕೊಡಲು ಶುರುಮಾಡಿದರು....ಸ್ವಲ್ಪ ಹೊತ್ತಿನ ನಂತರ ರಮ್ಯ, ಅರ್ಪಿತ, ಅಪೇಕ್ಷ, ಪ್ರಿಯಾಂಕ, ಕಾವ್ಯ ಇಂಟರೆಸ್ಟಿಂಗ್ ಆದ ಹವ್ಯಾಸಗಳನ್ನ   ಹೇಳತ್ತ ಹೋದರು. thank god! ನನ್ನ ಹವ್ಯಾಸಕ್ಕೆ ಸರಿ ಹೊಂದುವ ಹುಡುಗೀಯರು ಸಿಕ್ರಲ್ಲ, ಅಂತ ಅಂದು ಕೊಳ್ಳುವಾಗ ,ನನ್ನ ಸರದಿ ಬಂತು. writing articles to the news papers  ನನ್ನ ಹವ್ಯಾಸ ಅಂತ ಹೇಳಿದ್ದಕ್ಕೂ, ಆವತ್ತೇ ನನ್ನ ಲೇಖನ ವಿಜಯ್ ಕರ್ನಾಟಕದಲ್ಲಿ ಪುಬ್ಲಿಶ್ ಆಗುವುದಕ್ಕೂ ಸರಿ ಹೋಯಿತು. I was the centre of attraction! ಮಧ್ಯಾನ ಊಟಕ್ಕೆ ಹೋದ ಕೆಲ ಗೆಳೆಯರು, ನನ್ನ ಲೇಖನ ಓದಿ  ಮೆಚ್ಚುಗೆ ವ್ಯಕ್ತ ಪಡಿಸಿದರು.  ತುಂಬಾ ಜನ ಮೊದನಲೇ ದಿನಕ್ಕೆ ಸ್ನೇಹಿತರಾದರು. ಇಡೀ ದಿನ ಅಂದರೆ ಮಧ್ಯಾನದ ಸೆಶನ್ ನಲ್ಲಿ,, ಫ್ಯೂಚರ್ ಪ್ಲಾನ್ಸ್ ಹೇಗೆ? ಒಂದೇ ಸೆಂ ನಲ್ಲಿ ಎಂಟೂ ಸುಬ್ಜೆಕ್ಟ್ಸ್ ಗಳನ್ನ ಹೇಗೆ ನಿಭಾಯಿಸಬೇಕು? ಇಂಟರ್ನಲ್ಸ್ ಅಂದ್ರೆ ಏನು? ಎಕ್ಷ್ತೆರ್ನಲ್ಸ ಅಂದ್ರೆ ಏನು, ಲ್ಯಾಬ್ ಏನು? ಮುಂತಾದ ವಿಷಯಗಳನ್ನ ನಮ್ಮ ಪ್ರೀತಿಯ  ಪ್ರಿನ್ಸಿ ತುಂಬಾ ಚೆನ್ನಾಗಿ ಹೇಳಿದ್ದರು. that was an inspiring session of three hours!

              ಸಂಜೆ ಐದು ಗಂಟೆ ಹೊತ್ತಿಗೆ, ನನ್ನ ಲಗೇಜ್ sameta, ಅಪ್ಪ- ಅಮ್ಮ ನನ್ನ ಅಜ್ಜಿ ಮನೆ ಇಂದ  ಹಾಸ್ಟೆಲ್ಗೆ ರೂಂ ನಂಬರ್ ಫ-೧೨ ಗೆ ಶಿಫ್ಟ್ ಮಾಡಿದ್ದರು. ಜೀವಮಾನದಲ್ಲೇ ಹಾಸ್ಟೆಲ್ ಗೇಟ್ ನಲ್ಲಿ  ಮೊದಲಬಾರಿಗೆ ನಿಂತು, ಅಮ್ಮ- ಅಪ್ಪನಿಗೆ ಬೈ ಹೇಳುವ ಹೊತ್ತಿಗೆ ಮನಸು ಭಾರ ಭಾರ :-(. ಗಂಡನ ಮನೆಗೆ ಹೋಗುವಾಗ ಹುಡುಗಿ ಜೊತೆ ಗಂಡನಾದರೂ ಇರುತ್ತಾನೆ, ಅತ್ತರೆ ಸಮಾಧಾನವಾದರೂ ಮಾಡುತ್ತಾನೆ, ಹಾಸ್ಟೆಲ್ ನಲ್ಲಿ ಇರುವುದಕ್ಕಿಂತ ಮದುವೆನೇ ಅಗಿರಬಹುದಿತ್ತಲ್ಲ ಅಂತ ಅನ್ನಿಸಿದ್ದು ಮಾತ್ರ ಸತ್ಯ!:-P. ಅತ್ತರೆ ಸಮಾಧಾನ ಮಾಡುವವರೇ  ಬೈ ಹೇಳುತ್ತಿರುವಾಗ ಏನು ಮಾಡುವುದೋ ತಿಳಿಯದೆ, ಓಡಿ ಹೋಗಿ ಅಪ್ಪನನ್ನ ಗಟ್ಟಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವಾಗ, 'ಶುರುವಾಯ್ತ ನಿಮ್ಮದು?' ಎಂದು ಗದರಿಸುತ್ತಾ, ಅಮ್ಮ 'ರೀ ಅವಳಿಗೆ ರೂಢಿಯಾದ ಮೇಲೆ ಸರಿ ಹೋಗುತ್ತಾಳೆ, ಬಿಡಿ ಅವಳನ್ನ ಎಂದು ತನ್ನ  ದುಃಖ ಮರೆ ಮಾಚಲು ಅಮ್ಮ ಮಾಡಿದ್ದೂ ನಾಟಕ ಎಂದು ತಿಳ್ಯೋ ಹೊತ್ತಿಗೆ ಅಪ್ಪ- ಅಮ್ಮ ನನ್ನಿಂದ ಬಲು ದೂರ ನಡೆದು ಬಿಟ್ಟಿದ್ದರು.
           
             ಅವರು  ಹೋದ ಎಷ್ಟೋ ಹೊತ್ತಿನ ನ0ತರವು, ನಾನು ಗೇಟ್ ಬಳಿಯೇ ನಿಂತಿದ್ದನ್ನೇ ಕಂಡು, ತುಂಬಾ ಸುಂದರವಾಗಿರುವ ಸೀರೆಯುಟ್ಟ ಹುಡುಗಿ, ನನ್ನ ಹತ್ತಿರ ಬಂದು, new admission? ಎಂದಾಗ ಕಣ್ಣು ಒರೆಸುತ್ತಾ,  ಹುಂ ಅಂದೇ. come on dear, cheer up! am naina 1st  sem BBM. ಎಂದಾಗ , ಅವಳು ನನ್ನ ವಾರಿಗೆಯ ಬೇರೆ ಕೋರ್ಸ್ ನ ಹುಡುಗಿ ಎಂದು ತಿಳಿಯದೆ, I am ashu BE 1st sem, should i call you dee? ಎಂದೆ.ಹೇ ಹುಚ್ಚಿ ನಾನು ನಿಮ್ಮ ಬ್ಯಾಚ್ ಮೇಟ್, dee ಯಾಕೆ? ಅಂದಾಗ ನೀನು ನನಗಿಂತ ಎತ್ತರ ಇದ್ದೀಯ, ನನಗಿಂತ ಉದ್ದ ಕೂದಲಿದೆ, ಸೀರೆ ಹಾಕೊಂಡಿದಿಯ, ಅಕ್ಕ ಅಂತ ತಿಳಿದು ಕೊಂಡೆ ಸಾರೀ ಅಂತ ಕೇಳಿದಾಗ,  ದೊಡ್ಡ ದನಿಯಲ್ಲಿ ನಗುತ್ತ ನನ್ನ ಅಮಯಕತೆಯನ್ನು ವ್ಯಂಗ ಮಾಡುತ್ತಾ,  ಮೊದಲ ದಿನವೇ ನನ್ನನು ತುಂಬಾ ಆಕರ್ಷಿಸಿದ್ದ ನೈನಾ, ನನ್ನ ಜೀವದ ಗೆಳತಿ ನಂಬರ್ ೨ ಆಗಬಹುದು ಅಂತ ಆ ಕ್ಷಣಕ್ಕಂತು  ಅನ್ನಿಸಿರಲಿಲ್ಲ!