Total Pageviews

Monday, June 15, 2020

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ!






ನಮ್ಮ ಫಾಸ್ಟ್ ಬದುಕೋ, ಅಥವಾ ತಂತ್ರಜ್ನ್ಯಾನದ ಕೊಡುಗೆಯೂ, ಅಥವಾ ನಾವು ನೆಚ್ಚಿಕೊಂಡ ಮೀಡಿಯಾ ಪ್ರಭಾವವೋ ಎಲ್ಲದೂ ಸೇರಿ,ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಾಗಿ, ಆ ಸಮಸ್ಯೆಯ ಹೊಣೆಯನ್ನು ಯಾರ ಹೆಗಲಿಗೆ ಕಟ್ಟೋದು ಅಂತ ಒದ್ದಾಡುತ್ತಿರುತ್ತೇವೆ!! ಹಾಗೇ ಮಾಡುವಾಗೆಲ್ಲ ನಾವು ಸರಿ ನಮ್ಮ ಸುತ್ತಲಿರುವುದೆಲ್ಲ ತಪ್ಪು ಅನ್ನುವ ಕಲ್ಪನೆ ನಮಗೆ ಗೊತ್ತಿಲ್ಲದೇ ಬಲವಾಗುತ್ತಾ ಹೋಗುತ್ತದೆ! ಮತ್ತೆ ಸಮಸ್ಯೆಯ ಮೂಲ ಕರಣ ಹಾಗೂ ಪರಿಹಾರಕ್ಕಿಂತ ಯಾರನ್ನು ಬೈದು ಇಗೋ ತಣಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ನಡೆಯುತ್ತಿರುತ್ತದೆ. ಇದು ಐಚ್ಛಿಕವಾಗಿಯೋ ಅನೈಚ್ಚಿಕವಾಗಿಯೋ ನಡೆಯುವ ಕ್ರಿಯೆ, ಆದರೆ ಹೀಗೆ ನಮ್ಮ ಮೈಂಡ್ ಟ್ರೈನ್ ಆಗಿರೋದಕ್ಕೆ ಮೇಲೆ ಹೇಳಿದ ಎಲ್ಲವೂ ಕಾರಣಗಳೇ!

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ! ಯಾರು ತಪ್ಪು ಯಾರು ಸರಿ ಅನ್ನುವ ವಿಂಗಡನೆ ಇಷ್ಟ! ಆ ವಿಂಗಡನೆಯಿಂದ ನಮ್ಮ ಗುಂಪು ಯಾವುದು ನಾವು ಯಾರ ಬಣದಲ್ಲಿ ಗುರುತಿಸಕೊಳ್ಳಲು ಬಯಸುತ್ತೇವೆ ಎಂಬುದನ್ನು ನಿರ್ಧರಿಸುವ ಸಾಧನ. ನಿನ್ನೆ ಅರ್ನಬ್ ನಡೆಸಿಕೊಟ್ಟ ಕೆಟ್ಟ ಡಿಬೇಟ ಪ್ರೋಗ್ರಾಮ್ಗಳಲ್ಲೇ ಅತೀ ಕೆಟ್ಟದ್ದು ಅಂದರೆ ತಪ್ಪಾಗಲಾರದೇನೋ, ಈತ ನ್ಯೂಸ್ Hour ಅನ್ನೋ ಪ್ರೈಮ್ ಟೈಮ್ ನಡೆಸಲು ಶುರು ಮಾಡಿದಾಗ ವಾವ್ ಎನಿಸುವಂತೆ ಮಾಡಿದ್ದ, ಮೊದಲ ಬಾರಿ ಮೋದಿ ಗೆಲ್ಲುವಲ್ಲೂ ಈತ ಮಾಡಿದ ಇಂಟರ್ವ್ಯೂಗಳು ನೇರ ಪರಿಣಾಮ ಬೀರಿದ್ದವು. ಇತ್ತೀಚಿಗೆ ಈ ವ್ಯಕ್ತಿ ಜರ್ನಲಿಸಂ ಬಿಟ್ಟು ಇನ್ನೇನೋ ಮಾಡುತ್ತಿರುವನೇನೋ ಎನ್ನುವಷ್ಟು ಬಿಂದಾಸಾಗಿಯೇ ತನ್ನ ಡಿಬೇಟ ನಡೆಸಿಕೊಡುತ್ತಾನೆ, ಒಬ್ಬ ಪತ್ರಕರ್ತ ಹೇಗೆ ನಡೆದುಕೊಳ್ಳಬಾರದು ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿ ನಿಲ್ಲುವವ! ಆತ ನೇಶನ್ ಫಸ್ಟ್ ಅನ್ನೋ ಟ್ಯಾಗ್ ಹಾಕಿದ್ ತಕ್ಷಣ ಅವನು ದೇಶ ಭಕ್ತ ಅಂತ ತಬ್ಬಿ ಮುದ್ದಾಡುವುವರು ಇದ್ದಾರೆ! ಅಲ್ಲಿನ ರಾಜಕೀಯ, ಎಡ ,ಬಲ ಏನೇ ಇರಲಿ, ಪ್ರತಿ ಸಾವು, ದುರ್ಘಟನೆ, ನೋವು ಅನ್ಯಾಯಗಳನ್ನು ರಾಜಕೀಯವಾಗಿ ಯೋಚಿಸುವಂತೆ  ಮಾಡಿರುವ ಕೀರ್ತಿ ಎಲ್ಲ ಮಾಧ್ಯಮಗಳಿಗೂ ಸಲ್ಲಬೇಕು ಅರ್ನಬ್ ಎದ್ದು ಕಂಡರೆ ಕಾಣದ ಕೈಗಳು ಹಲವಾರಿವೆ!! 

ಬಾಲಿವುಡ್ ಹಲವು ದಶಕಗಳಿಂದ ಯಾರ ಕಂಟ್ರೋಲ್ ನಲ್ಲಿ ಇದೆ ಎನ್ನುವುದು ಓಪನ್ ಸೀಕ್ರೆಟ್, ಖಾನ್ ಗಳು , ಕಪೂರ್ಗಳು, ಅಷ್ಟೇ ಏಕೆ ಸಂಜಯ್ ದತ್ತ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವ್ಗನ್ ಕೂಡ ಇದಕ್ಕೆ ಹೊರತೇನಲ್ಲ!! ನಾವು ನಮ್ಮ ನೆಚ್ಚಿನ ತಾರೆಯರನ್ನ ನಮ್ಮ ಸೈಧಾಂತಿಕ ಹಿನ್ನಲೆಯಲ್ಲಿ ಅಳೆಯಲು ಶುರು ಮಾಡಿದ ದಿನದಿಂದ ಎಂಟರ್ಟೈನ್ಮೆಂಟ್ ಕೂಡ ಪಾಲಿಟಿಕಲಿ ಮೋಟಿವೇಟೆಡ್ ಬಿಸಿನೆಸ್ ಆಗಿಯಾಗಿದೆ.

ಇನ್ನು ಸುಶಾಂತ್ ಸಿಂಗ್ ನಾ ಸಾವನ್ನು ಜನ ತಮಗೆ ಬೇಕಾದ ಹಾಗೆ ತಿರುಚಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ! ನೆಪೋಟಿಸಮ್ ಯಾವ ಕ್ಷೇತ್ರದಲ್ಲಿ ಇಲ್ಲ?? ಒಬ್ಬ ಸ್ಟಾರ್ ಮಗನಾಗಿದ್ದಕ್ಕೋ ಅಥವಾ ಶ್ರೀಮಂತ ಮನೆಯ ಕುಡಿಯೆನ್ನುವ ಕಾರಣಕ್ಕೋ ಜನ ಎಲ್ಲರನ್ನೂ ಸ್ವೀಕರಿಸುವ ಹಾಗಿದ್ದರೆ ಅಭಿಷೇಕ್ ಬಚ್ಚನ್ ಆಗಲಿ, ನಿಖಿಲ್ ಕುಮಾರಸ್ವಾಮಿ ಯಾಗಲಿ ಇಷ್ಟೊತ್ತಿಗೆ ಸ್ಟಾರ್ ಗಳಾಗಿ ಮೆರೆಯಬೇಕಿತ್ತು! ರಾಜಕುಮಾರ್ ಅವರ ಪರಿವಾರದ ಶ್ರೀರಕ್ಷೆ ಇದ್ದರೂ ಶಿವರಾಜ್ ಆಗಲಿ ಪುನೀತ್ ಆಗಲಿ ತಮ್ಮ ತಮ್ಮ ಪಾಲಿನ ಹೋರಾಟ ಕಷ್ಟಗಳನ್ನು ಅನುಭವಿಸಿಯೇ ಮೇಲೆ ಬಂದಿರುತ್ತಾರೆ , ಸೋಲು ಅವರುಗಳನ್ನು ಪಾತಾಳಕ್ಕೆ ತಳ್ಳದೇ ಇರಬಹುದು, ಸೋತರೂ ಒಪ್ಪುವ ಜನರು ಇರಬಹುದು ಅದನ್ನು ಬಿಟ್ಟರೆ ಪ್ರತಿ ಕ್ಷೇತ್ರ ಪ್ರತಿಭೆಗೆ ಬೆಲೆ ಕೊಟ್ಟೆ ಕೊಡುತ್ತದೆ ಅಲ್ಲಿ ನಡೆಯುವ ರಾಜಕೀಯ ಹಾಗೂ ಅನ್ಯಾಯದ ಹೊರತಾಗಿ!


ಗಾಡ್  ಫಾದರ್ ಇಲ್ಲದ ಸುಶಾಂತನಿಗೆ, ಧೋನಿಯಂತಹ ಕೋಟ್ಯಾ೦ತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟರ್ ನ ಪಾತ್ರ ಮಾಡಲು ಸಿಕ್ಕ ಅವಕಾಶವೇನು ಚಿಕ್ಕದೇ?? ಅದನ್ನು ಲಕ್ಷಾಂತರ ಜನ ಬೆನ್ನು ತಟ್ಟಿ ,ಧೋನಿಯೆಂದರೆ ನೀನೇ ಎನ್ನುವಷ್ಟು ಆಪ್ತವಾಗಿ ಒಪ್ಪಿಕೊಂಡಿರುವುದು ಸಣ್ಣ ಸಾಧನೆಯೇ?? ಇಷ್ಟೆಲ್ಲ ಸಿಕ್ಕ ವ್ಯಕ್ತಿಗೆ, ಅಲ್ಲಿ ನಡೆಯುವ ಫೇವರಿಸಂನ ಅರಿವಿರಲಿಲ್ಲ ಎನ್ನುವುದು ತೀರಾ ಬಾಲಿಶ ವಾದವಾಗುತ್ತದೆ!!


ಕಾರಣ ಏನೇ ಇರಬಹುದು ಪ್ರತಿ ಆತ್ಮಹತ್ಯೆಗೆ ನಮ್ಮ ಸುತ್ತಲಿನ ಸಿಸ್ಟಮ್, ಸಮಾಜ , ಆಗದಿರುವ ಜನ ಕಾರಣೀಭೂತರಾಗಿರುತ್ತಾರೆ, ಅದನ್ನು ಎದುರಿಸುವಲ್ಲಿ ಸೋತ ಮನುಷ್ಯನ ಧೈರ್ಯ ಚಿಕ್ಕದೆನಿಸುತ್ತದೆ ಯಾಕೆಂದರೆ ಖಿನ್ನತೆಯನ್ನು ನಾವು ಮನೋರೋಗವೆಂದಷ್ಟೇ ಉತ್ಪ್ರೇಕ್ಷೆ ತೋರಿ ಅದೇನೂ ದೊಡ್ಡ ವಿಷಯವೇ ಅಲ್ಲ ಎಂಬಂತೆ ಉದಾಸೀನ ಮಾಡಿರುತ್ತೇವೆ. ಶಾಲೆಗೆ ಹೋಗುವ ಮಗು ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಪಾಲಕರನ್ನು ಕೊಲೆಗಾರರು ಎನ್ನವುದು ಸರಿಯೋ ಅಥವಾ ಹಾಗೆ ಮಾಡಿಕೊಳ್ಳುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಸೂಕ್ತ counselling ಅಥವಾ ಚಿಕಿತ್ಸೆಯ ಚರ್ಚೆ ಮುಖ್ಯವೋ??! 

ಮನುಷ್ಯ ಇದ್ದಾಗ ಅವನ ಆಗು  ಹೋಗುಗಳು , ನೋವು ನಲಿವುಗಳಿಗೆ  ಸ್ಪಂದಿಸದೇ, ಅವನು ಪ್ರಾಣ ಕಳೆದುಕೊಳ್ಳುವವರೆಗೂ ಸುಮ್ಮನಿದ್ದು, ಸತ್ತ ವ್ಯಕ್ತಿ ಈಗ ತಿರುಗಿ ಬರುವುದಿಲ್ಲ ಎಂದು ಧೃಡವಾದಾಗ ಮಾತ್ರ ನಮ್ಮ ಕರುಣೆ ಅನುಕಂಪ ತೋರುವುದು ಎಷ್ಟು ಸರಿ? ಅವನಿಗಾದ ಅನ್ಯಾಯವನ್ನು ಅವನು ಬದುಕಿದ್ದಾಗಲೇ ಧೈರ್ಯ ತುಂಬಿ, ಒಟ್ಟಿಗೆ ಹೋರಾಡಲು ಬಲ ಕೊಟ್ಟು , ಎದುರಿಸುವ ಬಾ ಎಂದು ಹೇಳಿದ್ದರೆ, ಇವತ್ತಿನ ಮೊಸಳೆ ಕಣ್ಣೀರಿಗೆ ಹಾಗೂ ಅನ್ಯಾಯದ  ವಿರುಧ್ಧದ ಹೇಳಿಕೆಗಳಿಗೆ ಬೆಲೆ ಇರುತ್ತಿತ್ತು!!  

No comments:

Post a Comment