Total Pageviews

Friday, February 10, 2012

ಮಾತನಾಡದೇ ಎಲ್ಲ ಹೇಳುವ ಗೋಡೆಗಳು!

                ನಮ್ಮ ಡಿಗ್ರಿ ಕಾಲೇಜ್ ನ, ಹಾಸ್ಟೆಲ್ ಗೋಡೆಗಳು ಬಿಟ್ಟು ಬಿಡದೆ ನೆನಪಾಗಿ ಕಾಡುತ್ತಿವೆ ! ಗೋಡೆಗಳು ಇಟ್ಟಿಗೆ ಸಿಮೆಂಟು ಮಿಶ್ರಣದ, ನಿರ್ಜೀವ್ ವಸ್ತು ಎಂದೂ ನಮಗೆಂದೂ ಕಂಡೆ ಇರಲಿಲ್ಲ, ಪ್ರತಿ ಹುಡುಗಿಯ ವ್ಯಕ್ತಿತ್ವ  ಬಿಂಬಿಸುವ, ಹಾಗೂ ನಮ್ಮೆಲ್ಲರ ಹಸ್ತಾಕ್ಷರದ ಮುತ್ತಿಡಿಸುಕೊಳ್ಳುವ ಹುಡುಗನಂತೆ ಗೋಚರಿಸುತ್ತಿದ್ದವು. ನಮ್ಮ ಹುಚ್ಚು ತಾಣದ ಪರಮಾವಧಿ ಅದ್ಯಾವ್ ಪರಿ ಇತ್ತೆಂದರೆ, ನಾಲ್ಕು ಗೋಡೆಗಳೇ ನಮ್ಮ ಸರ್ವಸ್ವವೂ ಆಗಿ ಹೋಗಿದ್ದವು.

                   ಏನೆಲ್ಲಾ ಬರೆಯುತ್ತಿದ್ದೆವು? ಪ್ರತಿ ಸಂಭ್ರಮಗಳ  ದಿನಾಂಕ, ಚಿಕ್ಕ ಚಿಕ್ಕ ಗೆಲುವುಗಳ ನೆನಪು, ಜಗಳವಾದ ದಿನ, ಮತ್ತೆ ಕೂಡಿದ ಬಿಸಿ ಅಪ್ಪುಗೆ, ಸ್ನೇಹಿತೆಯ ಮದುವೆಯ ವಾರ, ತುಂಬಾ ಇಷ್ಟವಾಗುವ ಗೀತೆ, ಕವನ,ಕನಸಲ್ಲಿ ಕಾಡುವ ಹುಡುಗನ ತಲೆಯೇ  ಇರದ ಚಿತ್ರ, ನಮ್ಮನ್ನು ಸದಾ ಜಗೃತೆಯಿಂದ  ಇರುವಂತೆ ಮಾಡುವ ಸ್ವಾಮಿ ವಿವೇಕಾನಂದರ ಧ್ಯೇಯ ವಾಕ್ಯ, ಕಾಡಿಸುವ ಅಡ್ಡಡ್ಡ ಹೆಸರುಗಳು, ನಮ್ಮ ನೆಚ್ಚಿನ ನಾಯಕರ ಪಟಗಳು, ಗೋಡೆಗೆ ನೋವಾಗುವಂತೆ ಚುಚ್ಚಿದ ಮೊಳೆಗಳಿಂದ ನೇತಾಡುವ ಕ್ಯಾಲೆಂಡರ್, ನಮ್ಮ ಎತ್ತರ ನೋಡಿಕೊಳ್ಳಲು ಎಳೆದ ಉದ್ದ ರೇಖೆ ಇನ್ನು ಅದೆಷ್ಟು ಹೊಸ ಬ್ಯಾಚ್ಗಳಿಗೆ ಅದು ಸಹಕಾರಿಯಾಗಬಲ್ಲುದೋ?! ಒಂದೇ ಎರಡೇ ಪಟ್ಟಿ ಮಾಡುತ್ತಾ ಕುಳಿತರೆ, ದಿನ ಪೂರ್ತಿ ಸಾಲದು.

                   ಅಪ್ಪ-ಅಮ್ಮನ ನೆನಪಾದಾಗ ಸುಮ್ಮನೆ ಗೋಡೆಗೆ ವರಗಿಕೊಂಡು ಅತ್ತಾಗ ಅದೆಂಥ ಆಪ್ತ ಸಮಾಧಾನ! ಗೊತ್ತಿಲ್ಲದೇಯೋ, ಗೊತ್ತಿದ್ದೋ ಸಂಭ್ರಮದ ಕ್ಷಣಗಳಲ್ಲಿ ಗೋಡೆಯನ್ನು ಅಪ್ಪಿ ಮುದ್ದಾಡಿದಂಥ ಮಧುರ ನೆನಪು, ಬೆಳ ಬೆಳಗ್ಗೆ ಓದಲು ಎದ್ದು ಕುಳಿತು ಕಣ್ಣು ಜಗ್ಗಿ ಜಗ್ಗಿ ಓದಲಾಗದ ಸಂದರ್ಭದಲ್ಲಿ ಗೋಡೆಯನ್ನೇ ತಲೆ ದಿಂಬ್ಎಂದು ತಿಳಿದು ಹಾಗೆ ಕಣ್ಮುಚ್ಚಿ ಅನುಭವಿಸುವ ನಿದ್ದೆಯ ಸವಿ, ಒಂಟಿತನಕ್ಕೂ ಏಕಾಂತಕ್ಕೋ ಇರುವ ವ್ಯತ್ಯಾಸವನ್ನ ಅರೆಯುವಂತೆ ಮಾಡುವುದೇ ಈ ಗೋಡೆಗಳು.

                  ಹಾಗಾಗಿಯೇ ಈಗಲೂ ನನಗೆ ಮನೆಗಳಿಗಿಂತ ಗೋಡೆಗಳೇ ತುಂಬಾ ಆಪ್ತವೆನಿಸುತ್ತವೆ, ಇದು ಕೊಂಚ ವಿಪರೀತ ಅನ್ನಿಸಿದರೂ, ಗೋಡೆಗಳು ಮನೆಗೆ ಹೇಗೆ ಆಧಾರ ಸ್ಥಂಭ ಗಳಾಗಿರುತ್ತವೆಯೋ, ಹಾಗೆಯೇ ನಮಗೆ ಗೊತ್ತಿಲ್ಲದೇ ನಮ್ಮದೇ ಒಂಟಿತನದ ಗೆಳೆಯನಂತಾಗಿ ಬಿಡುತ್ತವೆ. ಕೇವಲ ಮನೆ, ಹಾಸ್ಟೆಲ್, ಹಾಗೂ ರೂಮ್ಗಳ ಮಾತಲ್ಲ, ನಿಮ್ಮ ನಿಮ್ಮ ಕಛೇರಿಗಳ ಗೋಡೆಗಳನ್ನು ಒಮ್ಮೆ ಮಗ್ಗುಲು ಬದಲಿಸಿ ನೋಡಿ, ನಿಮಗೆ ಗೊತ್ತಿಲ್ಲದೇ ಅದೆಷ್ಟು ಸಲ ಅವಗುಳ ಅಪ್ಪುಗೆ ಇಂದ ನಿರಾಳ ಗೊಂಡಿದ್ದಿರಿ ಎಂಬುದು ಜ್ಞಾಪಿಸಿಕೊಳ್ಳಿ. ಮನೆಯ ಗೋಡೆಗಳು , ತುಂಬಾ ಶಾಂತ  ಸ್ವಭಾವದ, ಗಂಭೀರ ಗೆಳೆಯನಂತೆ  ಕಂಡು ಬಂದರೂ, ಆ ಘನಘೋರ ಗಾಂಭೀರ್ಯದ ನಡುವೆಯೂ, ವಯಸ್ಕರಿಗೆ ಆಧಾರ ವಸ್ತುವಿನಂತೆ, ಚಿಕ್ಕ ಮಕ್ಕಳಿಗೆ ತಮ್ಮ ಮನದಾಳದ ರೇಖೆಗಳನ್ನು ಗೀಚುವ ಹಾಳೆಗಳಂತೆ ಕಾಣಿಸುತ್ತವೆ.

                   ನಾವೆಲ್ಲರೂ ಒಂದಿಲ್ಲೊಂದು ನಿರ್ಜೀವ ವಸ್ತುವಿನೋಟ್ಟಿಗೆ ಭಾವನಾತ್ಮಕವಾಗಿ ಬೆಸೆದು ಕೊಂಡಿರುತ್ತೇವೆ, ಅದು ಅಜ್ಜ ಕೊಡಿಸಿದ ಮೊದಲ ಕೈ ಗಡಿಯಾರ, ಮೊದಲ ದ್ವಿಚಕ್ರ ವಾಹನ,  ಶಾಲೆ, ಕಾಲೇಜ್ ಗಳಲ್ಲಿ ನಾವು ನಾವಷ್ಟೇ ಕುಳಿತುಕೊಳ್ಳುವ ನಿರ್ದಿಷ್ಟ ಜಾಗ,  ಅಮ್ಮ ಮೊದಲು ಕೊಡಿಸಿದ ಉಂಗುರ, ಅಕ್ಕ ಕೊಡಿಸಿದ ಕಾದಂಬರಿ, ತಮ್ಮನ ಅಲಾರ್ಮ್, ಇಂಥ ಅನೆಕವೂ ನಮ್ಮದೇ ಎಂಬ ವಿಪರೀತ ಪೋಸ್ಸೇಸ್ಸಿವ್ನೆಸ್ಸ್  ಬೆಳೆಸಿಕೊಂಡಿರುತ್ತೇವೆ, ಅದ್ಯಾಕೆ ಹೀಗೆ ಈ ನಿರ್ಜೀವ ವಸ್ತುಗಳ ಮೇಲೆ ನಮಗೆ ಅಷ್ಟೊಂದು ಪ್ರೇಮ?? ವ್ಯಕ್ತಿಗಳಾದರೆ ಬದುಕಿನ ತಿರುವುಗಳಿಗೆ  ಒಳಗಾಗಿ ನಮ್ಮನ್ನು ಬಿಟ್ಟು ಹೋಗಬಹುದು, ಆದರೆ ಇವುಗಳು ನಾವೇ ಬಿಡುವ ವರೆಗೂ ನಮ್ಮನ್ನು ಬಿಡದೆ ಇರುವ ಕಾರಣಕ್ಕೋ?? ಅಥವಾ ನಮ್ಮನ್ನು ಎಂದೂ ಒಂಟಿತನ ಕಾಡದಿರಲಿ ಎಂದು ನಾವೇ ನಿರ್ಮಿಸಿಕೊಳ್ಳುವ pseudo  ಮುದ ನಿಡುವ ನಮ್ಮವೇ ಅಂದು ಕೊನೆವರೆಗೂ ಗುರುತಿಸುಕೊಳ್ಳುವ ಐಡೆಂಟಿಟಿ ಗಳು ಆಗಿರಬಹುದು.


                     ನಮ್ಮದೇ ಅನ್ನಿಸಿಬಿಟ್ಟ ಗೋಡೆಗಳು ಈಗ ಅದ್ಯಾವ ಹುಡುಗಿಯರ ಸ್ವತ್ತಾಗಿವೆಯೋ ಯಾಂವ ಬಲ್ಲ?  ಕೊನೆವರೆಗೂ ನಮ್ಮದೇ ಗೋಡೆಗಳಾಗಿ ಉಳಿಯಬೇಕೆಂದು ಬಯಸುವುದು, ಹತ್ತಿದ ಬಸ್ಸು ಇಷ್ಟವಾಯಿತೆಂದು ನಮ್ಮ ನಿಲ್ದಾಣ ಬಂದರೂ ಇಳಿಯದೇ ಅಲ್ಲೇ ಕುಳಿತುಕೊಳ್ಳುವ ಪ್ಯಾಲಿತನ ಅಲ್ಲವೇ?? ಹಾಗಂತ ನಾವಿದ್ದ ಹಳೆ ಮನೆ, ನಾವ್ ಆಡಿದ ಶಾಲೆ ಮೈದಾನ, ಕಾಲೇಜ್ ಮುಂದಿನ ವಿಶಾಲ ಆಲದ ಮರ, ನಾವು ನಡೆದಾಡಿದ ರಸ್ತೆ, ಓಡಾಡಿದ ಬೀದಿ, ಪಕ್ಕದ್ಮನೆ ಹುಡುಗ, ದೂರದಲ್ಲೆಲ್ಲೋ ಕುಳಿತು ಬಿಕ್ಷೆ ಬೇಡುತ್ತಿದ್ದ ಅಶಕ್ತ ಅಜ್ಜಿ, ಪಾರ್ಕ್ನಲ್ಲಿ ಕಂಡ ಅದ್ಯಾವುದೋ ಮುದ್ದು ಮಗುವಿನ ಮುದ್ದು ನಗು, ಇದ್ಯಾವುದನ್ನು ನಾವು ವಿಪರೀತ ಹಚ್ಚಿಕೊಳ್ಳಲಾಗುವದಿಲ್ಲ,ಇವುಗಳನ್ನೆಲ್ಲ ಫಾರ್ ಟೈಮ್ ಬಿಇಂಗ್ ಅಷ್ಟೇ ಅನುಭವಿಸಿ ಸುಮ್ಮನಾಗಬೇಕು, ಯಾಕೆಂದರೆ ಇವುಗಳನ್ಯಾವುದನ್ನೂ ನಾವು ಕೊನೆವರೆಗೂ carry  ಮಾಡಲಾಗುವುದಿಲ್ಲ, ನಮ್ಮ ನೆನಪಿನ ಅಂಗಳದಲ್ಲಿ ಇವುಗಳದ್ದೆಲ್ಲ ಮಧುರ ಅಧ್ಯಾಯಗಳಷ್ಟೇ ಹೊರತು, ಇವುಗಳೇ ನಮ್ಮ ಅಸ್ತಿತ್ವಗಳು ಎಂದಾಗಲು ಸಾಧ್ಯವಿಲ್ಲ, ಹಾಗಂತ ಅಂದುಕೊಂಡೆ ಸಮಾಧಾನ ಪಡಬೇಕು.

                     ಬೇಜಾರಾದಾಗ ತಿರುಗುವ ಸೀಲಿಂಗ್ ಫ್ಯಾನ್ ನೋಡಿ ನಮ್ಮ ನೆನಪಿನ DVD  player  ಸ್ವಿಚ್ ಆನ್ ಮಾಡಿದಾಗ, ಪ್ಲೇ ಮಾಡಲು ಯಾವ ಮಧುರ ನೆನಪೇ ಇಲ್ಲದಿದ್ದರೆ ಹೇಗೆ? ಕೆಲುವು ಕ್ಷಣಗಳು ನೆನಪಾಗಿರುವುದೇ ಸಂಭ್ರಮ, ಆ ನೆನಪುಗಳನ್ನು ಕೊನೆ ವರೆಗೂ rewind  ಮಾಡಿ ನೋಡುವ ಆನಂದಕ್ಕಿಂತ, ಇನ್ನೊಂದು ಖುಷಿ ಕೊಡುವ ಸಂಗತಿ ಇದೆಯೇ??








Tuesday, February 7, 2012

ಬರೆಯುವ ಸಂಭ್ರಮಕ್ಕೆ ನಾಲ್ಕು ಮುನ್ನುಡಿ !!!

            
             

         
               ಓದು, ಬರಹ ಎಲ್ಲದಕ್ಕೂ ಕಳೆದ ಐದು ತಿಂಗಳಿಂದ ಬ್ರೇಕ್ ಹಾಕಿದ್ದೆ. ದಿನ ಬೆಳೆಗ್ಗೆ ಎದ್ದು ಕಾಲೇಜ್ ಗೆ  ಓಡಿ ಹೋಗುವ ಪರಿ, ಕ್ಲಾಸ್ ಗಳು, ಸೆಮಿನಾರ್ ಗಳು, ಪ್ರಾಜೆಕ್ಟ್, ಅಸ್ಸೈನ್ಮೆಂಟ್ಗಳು, ಇವುಗಳ ಮದ್ಯ ಕೊಂಚ್ ಕೊಂಚ್ refreshments  ಅನ್ನೋ ಹಾಗೆ ಕಂಡು ಕೊಳ್ಳುವ ಚಿಕ್ಕ-ಪುಟ್ಟ ಸಂಭ್ರಮಗಳು, ಇನ್ನೂ ಒಂದು ವರೆ  ವರ್ಷದ ವರೆಗೆ ನಾನು ಅದೃಷ್ಟವಂತೆಯೇ !!
                  
                ಬದುಕಿರುವಾಗಲೇ ಖಾಲಿಯಾಗುವ ಖಾಯಿಲೆ ನನ್ನ ಕೊನೆಯ ಪೋಸ್ಟ್ , ಅದಾದಮೇಲೆ  ಒಂದೇ ಒಂದು ಹೊಸ ಪೋಸ್ಟ್ ಕೂಡ ಬರೆಯಲಾಗಲಿಲ್ಲ, ಅದಕ್ಕೆ ಸ್ನೇಹಿತರೆಲ್ಲರೂ ನೀವೇ ಖಾಲಿಯಾಗಿಬಿಟ್ಟಿರ? ಎಂದು ಕಾಲೆಳೆಯುತ್ತಿದ್ದಾರೆ ;). ಬರಿಯಲೇ ಬೇಕು ಎಂದು ಶತಾಯು ಗತಾಯ  ನಿರ್ಧಾರ ಮಾಡಿ ತಲೆ ತುಂಬಾ ಸಾವಿರಾರು ವಿಚಾರಗಳನ್ನು ಇಟ್ಟುಕೊಂಡು ಶುರು ಮಾಡಿದ್ದೇನೆ. ನಾನೀಗ ಬರೆಯುವುದು ನನ್ನದೇ ಆದ ವಿಚಾರಗಳಿಗೆ ವಿರುದ್ಧವಾದದ್ದು, ಆದರೂ ಈಗ ಬರೆಯುತ್ತಿರುವುದೇ ಸರಿ ಅಂತ ಅನ್ನಿಸಲಾರಂಭಿಸಿದೆ.

                ಪ್ರೀತಿಯ ಬಗ್ಗೆ ನನಗಿರುವ ಹುಚ್ಚು ಕಲ್ಪನೆ ಹೋಗಲಾಡಿಸುವುದಕ್ಕೆ, ನನ್ನ ಚಿಕ್ಕಪ್ಪ ''ನನ್ನ ತೇಜಸ್ವಿ'' ಬುಕ್ ಓದಲು ಸಲಹೆ ನೀಡಿದ್ದರು. ಸರಿ, ಏನಿದೆ ಎಂದು ಬೆಳಗ್ಗೆ ಆರು ಗಂಟೆಗೆ ಟ್ರೈನ್ ನಲ್ಲಿ ಓದಲು ಶುರು ಮಾಡಿದವಳು ಹುಬ್ಬಳ್ಳಿ ತಲುಪುವವರೆಗೂ , ತೇಜಸ್ವಿಯ ಇನ್ನೊಂದು ವ್ಯಕ್ತಿತ್ವವನ್ನು ಕಂಡು ಬೆರಗಾದೆ! ತೇಜಸ್ವಿ ಹಾಗೂ ಅವರ ಅರ್ಧಾಂಗಿ ರಾಜೇಶ್ವರಿ ಯವರ ತೀರ ವೈಯಕ್ತಿಕ  ಪ್ರೇಮ ಪತ್ರಗಳ ಸಂಗ್ರಹ ಹಾಗೂ, ನಾವುಗಳೆಲ್ಲ, ಕೇಳದ, ಕಾಣದ hidden ತೇಜಸ್ವಿಯ ಅನಾವರಣ.

                ನಾವೆಲ್ಲಾ ಎಷ್ಟೊಂದು ಅಲ್ಪ ತೃಪ್ತರು? ನಮ್ಮ ಜನಾಂಗದವರಿಗೆ  ಪತ್ರಗಳ ಪರಿಚಯವೇ ಇಲ್ಲ, ಪತ್ರ ದೂರದ ಮಾತು, sms ಗಳು ಎರಡು ಸಾಲಿಗಿಂತ ಜಾಸ್ತಿ ಇದ್ದರೇ ಓದಲಾಗದ ಹಿಂಸೆ, ಇನ್ನು ಉದ್ದುದ ಪತ್ರ ಓದುವುದು, ಬರೆಯುವುದು ಸುಮ್ಮನೆ ಮಾತೆ?? ಎಲ್ಲವನ್ನು ಸರಳ ಮಾಡಿಕೊಟ್ಟ ತಂತ್ರಜ್ನ್ಯಾನ , ಪ್ರೀತಿಯ ಆಳ , ತೀವ್ರತೆ, ಭಾವುಕತೆ, ಕಾಡುವ ತವಕ, ಯಾವುದು ಇಲ್ಲದಂತಾಗಿಸಿದೆ.

            ದೂರದಲ್ಲಿರುವ ತನ್ನ ಪ್ರಿಯಕರ ಎಲ್ಲಿ ತನ್ನನ್ನು ಮರೆತು ಬಿಡುವನೋ ಎಂಬ ಆತಂಕದಲ್ಲಿ ಬರೆದ ಪತ್ರಕ್ಕೆ ತೇಜಸ್ವಿ ಉತ್ತರಿಸಿದ ಪತ್ರದ ಕೆಲ ಸಾಲು ಗಳು ಅದ್ಭುತವಾಗಿವೆ, '' Love  ಎಂದರೆ ಏನು ಗೊತ್ತ? ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು, ದೈಹಿಕವಾಗಿ, ಮಾನಸಿಕವಾಗಿ'' ಇದಕ್ಕಿಂತ ಮಿಗಿಲಾದ ಲವ್ definition  ಹಿಂದೆಂದು ಕೇಳಿರಲಿಲ್ಲ. ಪ್ರತಿ ಅಕ್ಷರವೂ ಆ ಕ್ಷಣದ ಭಾವ ತೀವ್ರತೆಯನ್ನು ಅನಾಯಾಸವಾಗಿ ಮನಸಿಗೆ ನಾಟುವಂತೆ ಮಾಡುವ ಶಕ್ತಿ ಪತ್ರಗಳಿಗಿದೆ.

       ಪ್ರೀತಿ ಎಂದರೆ ಕೇವಲ ಪದ ಅಲ್ಲ , ನನ್ನ ನೆಚ್ಚಿನ ಲೇಖಕ ರವಿಂದರ್ ಸಿಂಗ್ ಹೇಳುವಂತೆ , '' I just do not say  I Love you, it means that you are the best thing that has ever happened to me'' ಎಂಥ ಸಾಲುಗಳು, ಇಂಥವುಗಳನ್ನು ಓದಿ ಓದಿ, ತೇಜಸ್ವಿಯಂಥ ಹುಡುಗನ ಹುಡುಕಾಟದಲ್ಲಿ ಸನಿಹವು ಇಲ್ಲವೋ, ದೂರವು ಇಲ್ಲವೋ, ಎಲ್ಲಿ ನೀ ಇರುವೆಯೋ ಪ್ರಿಯ ತಿಳಿದಿಲ್ಲ !!!

                ಬರೆಯೋದಕ್ಕೆ ನಿಜಕ್ಕೂ ತುಂಬಾ ಇದೆ , ನಮ್ಮ ಬೆಂಗಳೂರು ನಮ್ಮದೇ ಆಗಿಬಿಡುವ ಆಪ್ತತೆ, PG ಬದುಕು, ಕಾಲೇಜ್ ಹೊಸ ಸ್ನೇಹಿತರು, ಫಾಸೆಬೂಕ್ ನಲ್ಲಿ ಸಿಕ್ಕ ಅಮೂಲ್ಯ ಮುತ್ತು-ರತ್ನಗಳು, ಏನು ಅಂತ ಬರೆಯಲಿ, ಎಷ್ಟು ಅಂತ ಸಂಭ್ರಮಿಸಲಿ? ಇಂದಿನಿಂದ  ಎಲ್ಲವನ್ನು ಬರೆಯಲು ಪ್ರಯತ್ನಿಸುತ್ತೇನೆ. 

                 

                       
                   


Wednesday, August 24, 2011

ಬದುಕಿರುವಾಗಲೇ ಖಾಲಿಯಾಗುವ ಖಾಯಿಲೆ!


                         ಬದುಕು ಒಂದು ಖಾಲಿ ಕ್ಯಾನ್ವಾಸ್  ಹಾಳೆಯಂತೆ! ಬೆಳಗ್ಗೆ ಎದ್ದು ಬೃಷ್ ಮಾಡಲು ಹೋದಾಗ ಖಾಲಿಯಾದ ಟೂಥ್ ಪೇಸ್ಟ್ ಟ್ಯೂಬ್  ಕಂಡು ಏನೇನೋ  ವಿಚಾರಧಾರೆಗಳ ಸಂಚಲನ. ಎಲ್ಲ ಖಾಲಿಯಾದ ವಸ್ತುಗಳು replace  ಆಗುತ್ತಲೇ ಇರುತ್ತವೆ. ನಾವು ಪ್ರತಿನಿತ್ಯ ಬಳಸುವ ಪದಾರ್ಥಗಳು, ಮಹಡಿ ಮೇಲಿನ syntax , ಯಾವುದೇ ಆಗಿರಲಿ ಖಾಲಿಯಾದಾಗಲೆಲ್ಲಾ ಅವುಗಳನ್ನು ಪುನಃ replace ಮಾಡಲಾಗುತ್ತದೆ. replace ಆದ ವಸ್ತುಗಳು ಒಂದು ದಿನ ಖಾಲಿಯಾಗುತ್ತ  ಹೋಗುತ್ತವೆ.ಇದನ್ನು ಗಮನಿಸದೆ ದಿನ ಕಳೆಯುವ ನಾವುಗಳು ದೈಹಿಕವಾಗಿ ( ಕೆಲೊವೊಮ್ಮೆ ಮಾನಸಿಕವಾಗಿ ) ಖಾಲಿಯಾಗುತ್ತ ಹೋಗುತ್ತೇವೆ. ಎಂಥ ವಿಚಿತ್ರವಿದು?

                       ಅತೀ ಸಂತುಷ್ಟ ಮನುಷ್ಯನು ಕೆಲೊವೊಮ್ಮೆ ಖಿನ್ನತೆಗೊಳಗಾಗೋದು ನಿಜ, ಹೀಗೇಕಾಗುತ್ತದೆ? ತುಂಬಿದ ಸಂಸಾರ, ಒಬ್ಬೊರನ್ನೊಬ್ಬರು ಅಗಾಧವಾಗಿ ಪ್ರೀತಿಸುವ ದಂಪತಿ, ಮುದ್ದಾದ ಮಕ್ಕಳು, ಯಾವುದೂ ಕೊರತೆ ಇರದ ಮನೆ, ಹೀಗಿದ್ದಾಗಲೂ ಆಕೆ ಬೇರೆ ಯಾವುದೊ ದಿಗಂತಕ್ಕೆ ಕೈ ಚಾಚಿ ಕುಳಿತುಕೊಂಡಿರುತ್ತಾಳೆ, ಆತ ತನ್ನ ಕೆಲಸದಲ್ಲೇ ಮುಳಗೆದ್ದು ಹೋಗಿರುತ್ತಾನೆ, ಮಕ್ಕಳು ತಂದೆ- ತಾಯಿಯರ ಪ್ರೀತಿ-ಮಮತೆಗಾಗಿ ಚಡಪಡಿಸುತ್ತವೆ.

                       ದಾಂಪತ್ಯ ಹಳೆತಾಗುತ್ತ ಹೋದಂತೆ, ಅಲ್ಲಿ ದೈಹಿಕ ಕಾಮನೆಗಳು ಕಡಿಮೆಯಾಗಿ ಮಕ್ಕಳ ಲಾಲನೆ-ಪಾಲನೆಗಳಲ್ಲಿ ಸಮಯ ವಿನಿಯೋಗಿಸಲ್ಪಡುತ್ತದೆ . ಇದು ಸಹಜ  ಪ್ರಕ್ರಿಯೆ. ಆದರೆ ಪಾಲಕರ ಮತ್ತು ಮಕ್ಕಳ ನಡುವೆ ಸಂಬಂಧಗಳ  warmth ನಶಿಸಿ ಹೋದಾಗ, ಅಪ್ಪ ದುಡಿದು ತಂದು ಹಾಕುವ, ಅಮ್ಮ ಅಡುಗೆ ಮಾಡುವ ಮತ್ತು ಮಕ್ಕಳು ಮಾರ್ಕ್ಸ್ ತರುವ ಮಷಿನ್ ಗಳಾಗಿಬಿಡುತ್ತಾರೆ.

                       ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ದಂಪತಿಗಳೂ ಕಾಲಿಗೆ ಸಮಯದ ಚಕ್ರವನ್ನು ಕಟ್ಟಿಕೊಂಡೆ ಓಡಾಡುವ working parents. ನೂರಕ್ಕೆ ಒಂದರಂತೆ ಹೌಸ್ ವೈವ್ಸ್ ಕಾಣಸಿಗುತ್ತಾರೆ, ಇದು ಅವರವರ ಇಷ್ಟ, ಕಷ್ಟ ಮತ್ತು ವೈಯಕ್ತಿಕ ವಿಷಯ ಬಿಡಿ. ಆದರೆ ಪ್ರಶ್ನೆ ಇರುವುದು ನಮ್ಮ ಪಾಲಕರು ನಮ್ಮನ್ನು ಬೆಳಸಿದಂತೆ ಇಂದಿನ ಪಾಲಕರು ತಮ್ಮ  ಮಕ್ಕಳನ್ನು ಬೆಳೆಸಲು ಸಾಧ್ಯವೇ? ಖಂಡಿತ ಇಲ್ಲ. ಅಜ್ಜ ಅಜ್ಜಿಯರು ನಮ್ಮ ಪಾಲಕರನ್ನು ಬೆಳಸಿದಂತೆ ನಮ್ಮನ್ನು ನೋಡಿಕೊಳ್ಳಲಾಗಿಲ್ಲ ಎಂದು ಸ್ವತಹ ಪಾಲಕರೇ ಒಪ್ಪಿಕೊಳ್ಳುತ್ತಾರೆ.

                       ಮಕ್ಕಳ ವಿಕಾಸಕ್ಕಾಗಿ ಎಷ್ಟು ಜನ ಪಾಲಕರು ನಿಜವಾಗಿಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಮಾಡುತ್ತಿದ್ದಾರೆ?  ಯಾವುದೇ ಶಾಲೆಯ ಪಾಲಕರ ಮೀಟಿಂಗ್ಸ್ ಗಳನ್ನು ನೋಡಿ, ಎಲ್ಲ ಪಾಲಕರೂ ಮಕ್ಕಳ ಮಾರ್ಕ್ಸ್ ಬಗ್ಗೆಯೇ ಚರ್ಚಿಸುತ್ತಾರೆ. ಅಯ್ಯೋ  ನಿಮ್ಮ ಮಗಳು ಪಾರದಳು ಬಿಡಿ ಇಂಜಿನಿಯರಿಂಗ್ ಸೀಟ್ ಸಿಕ್ತಂತೆ, ನನ್ನ ಮಗ ಈಗ PUC ಕಣ್ರೀ, ಮೆಡಿಕಲ್ ಸೀಟ್ ಸಿಗಬೇಕಿದೆ ಹೆಂಗ್ ಮಾಡ್ತಾನೋ ಏನೋ? ನನ್ನ ಮಗಳು cet ನಲ್ಲಿ ೫೦ನೆ ರಾಂಕ್ ಗೊತ್ತ? ನನ್ನ ಮಗ 10th ನಲ್ಲಿ 92 % ಮಾರ್ಕ್ಸ್ ತೆಗೆದಿದಾನೆ. ಆದರೂ competetion ಜಾಸ್ತಿ ಬಿಡಿ highest  99 % ಇದೆ! ಹುಹ್ ಎಂಥ ದಿವ್ಯ ದರ್ಶನ! ಅಖಂಡ ಭಾರತ ದೇಶದ ಮುಂದಿನ ಪ್ರಜೆಗಳ ಪಾಲಕರ ಮನದಾಳದ ಮಾತುಗಳಿವು.

                      ನಮ್ಮ ಸಮಾಜ ತಾಂತ್ರಿಕವಾಗಿ ಬೆಳೆದು ಹೋದಂತೆಲ್ಲ ನಮ್ಮ  ಸಂಬಂಧಗಳೆಲ್ಲ extinction ಹಂತ ತಲುಪುತ್ತಿವೆಯೇ? ಯಾವುದೋ ಸ್ಪರ್ಧೆಯಲ್ಲಿ ಸೋತು ಬಂದ ಮಗುವನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಸಾಂತ್ವನ ಹೇಳುವ ತಾಯಂದಿರು ಕಡಿಮೆಯಾಗುತ್ತಿದ್ದಾರೆ. ಹಸಿವೆ ಇಲ್ಲ ಎಂದು ಮುನಿಸಿಕೊಳ್ಳುವ ಮಗುವನ್ನು ತನ್ನ ಕೈಯಾರೆ ತಿನಿಸುವ ಅಮ್ಮಂದಿರಿಲ್ಲ. ಅಪ್ಪನ ತಬ್ಬುಗೆಯ warmth ಗೊತ್ತಿಲ್ಲ. ಇಂಥ ಅನೇಕ ಸ್ಮಾಲ್ pleasures ಗಳಿಂದ ವಂಚಿತರಾಗುತ್ತಿರುವ ಇಂದಿನ ಮಕ್ಕಳಿಗೆ ಅಜ್ಜ- ಅಜ್ಜಿಯ ಆಸರೆಯಾದರು ಇದೆಯೇ? ಅದು ಇಲ್ಲ. ಅಜ್ಜಿಯ ಮಡಿಲಿನ ಸ್ವರ್ಗ ಸುಖ ಗೊತ್ತಿಲ್ಲ, ಅಜ್ಜನ ನೀತಿ ಕಥೆಗಳನ್ನು ಕೇಳಿಲ್ಲ, ಅಜ್ಜಿಯ ಕೈ ತುತ್ತಿನ ರುಚಿಯೇ ತಿಳಿದಿಲ್ಲ, ಅಜ್ಜನೊಟ್ಟಿಗೆ ಕೈ ಹಿಡಿದುಕೊಂಡು ಗಾಳಿ ವಿಹಾರಕ್ಕೆ ಹೋಗಿಲ್ಲ.

                     ನಾವುಗಳೆಲ್ಲ ಯಾಂತ್ರಿಕವಾಗಿ ಬದುಕುತ್ತಿರುವುದು ನಿಜ. ಎಲ್ಲವು materialistic ಜೀವನದ ಮೇಲೆಯೇ ನಿರ್ಧಾರಿತವಾಗಿದೆ. ಆದರೂ ನಮ್ಮೆಲ್ಲ ಭಾವನೆಗಳನ್ನು materialize ಮಾಡಲಾಗದೆ ಹೆಣಗುತ್ತಿದ್ದೇವೆ. ಮಾನವೀಯ ಮುಲ್ಯಗಳನ್ನು ಭಾವನಾತ್ಮಕವಾಗಿ ಮೌಲ್ಡ್  ಮಾಡುವಲ್ಲಿ ವಿಫಲರಾಗುತ್ತಿದ್ದೇವೆ. ನಿರ್ಜೀವ ವಸ್ತುಗಳು ಖಾಲಿಯಾದಾಗ replace ಮಾಡುವ ನಾವುಗಳು, ಬದುಕಿರುವಾಗಲೇ ಖಾಲಿಯಾಗಬಾರದಲ್ಲವೇ?

Sunday, July 10, 2011

ಚರ್ಚೆ

''ಆರಂಭದಲ್ಲೇ ಆಂಗ್ಲ ಮಾಧ್ಯಮದಲ್ಲಿ ಅರೆಯುವುದು ಅವೈಜ್ನ್ಯಾನಿಕ'' ಎಂಬ ಶೀರ್ಷಿಕೆಯಡಿ ಪ್ರಕಟವಾದ ಡಾ. ಎಸ. ಎಲ್  ಭೈರಪ್ಪ ನವರ ಚರ್ಚೆ ಲೇಖನಕ್ಕೆ ನನ್ನ ಅನಿಸಿಕೆ.

                       ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಮಗುವು ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಆಂಗ್ಲ ಅಥವಾ ಕನ್ನಡ ಮಾಧ್ಯಮ  ಅನ್ನುವುದಕ್ಕಿಂತ, ಗ್ಲೋಬಲ್  ಲಾಂಗ್ವೇಜ್  ಎಂದೇ ಕರೆಸಿಕೊಳ್ಳುವ ಭಾಷೆಯ ಕಲಿಕೆ ಮತ್ತು ತಿಳಿವಳಿಕೆ ಆರಂಭದಲ್ಲಿ ಅವಶ್ಯಕವಾಗಿ ಕಲಿಸಲೇಬೇಕಾದ ಅನಿವಾರ್ಯತೆ ಇದೆ. ನಮ್ಮ ಮಾತೃ ಭಾಷೆ ಕನ್ನಡ, ಹಾಗಾಗಿ ಮಗು ಮಾತು ಕಲಿಯುವ ಮುನ್ನ ಪ್ರಪ್ರಥಮವಾಗಿ ಹೇಳುವ ಪದವೇ ಅಮ್ಮ.(ಅಪ್ಪ-ಅಮ್ಮ ಆಂಗ್ಲ ವ್ಯಾಮೊಹಿಗಳು ಇರದಿದ್ದರೆ). ನಮ್ಮ ಮಾತೃ ಭಾಷೆಯನ್ನು ಕಲಿಯಲು ನಾವೆಂದು ವ್ಯಾಕರಣದ ಅಧ್ಯಾಯ ಮಾಡುವ ಅವಶ್ಯಕತೆ ಇಲ್ಲ. ಮಾತೃ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಬಂದ ಮೇಲೆ ತಾನೆ ಶಾಲೆಯಲ್ಲಿ ವ್ಯಾಕರಣದ ಪಾಠ  ಹೇಳಿ ಕೊಡುವುದು? ಹಾಗೆಯೇ ಯಾವುದೇ ಭಾಷೆಯಾಗಲಿ ಅಥವಾ ಆಂಗ್ಲ ಭಾಷೆಯಾಗಲಿ ಕೇವಲ ಪಾಠ ಹೇಳಿಕೊಡುವುದರಿಂದ ಬರುವಂಥದಲ್ಲ. ಹೀಗಿರುವಾಗ ಆರಂಭದಲ್ಲಿಯೇ ಮಕ್ಕಳಿಗೆ ಆಂಗ್ಲದಲ್ಲಿ ಹೇಳಿಕೊಡುವುದರಿಂದ ಆಗುವ ಹಾನಿ ಏನು?

                     ನಾನು ಮೊದಲಿನಿಂದ ಆಂಗ್ಲ ಮಾಧ್ಯಮದಲ್ಲೇ ಓದಿದವಳು, ಹಾಗಂತ ನನಗೆ ಕನ್ನಡ ಬರೆಯಲು, ಓದಲು ಬರುವುದಿಲ್ಲವೇ? ನನ್ನ ಹೈ ಸ್ಕೂಲ್  ದಿನಗಳಿಂದಲೇ ಭೈರಪ್ಪನವರು ನನ್ನ ನೆಚ್ಚಿನ ಲೇಖಕರು. ಇವತ್ತಿಗೂ ಕನ್ನಡ ಕೃತಿಗಳನ್ನ ಓದುತ್ತೇನೆ. ಮತ್ತು ಕನ್ನಡದಲ್ಲೇ ಬ್ಲಾಗ್ ಬರೆಯುತ್ತೇನೆ.ನನ್ನ ಹಾಗೆ ಇಂಜಿನಿಯರಿಂಗ್ ಮಾಡಿದ  ಅನೇಕ ಸ್ನೇಹಿತ-ಸ್ನೇಹಿತೆಯರು, ಮೊದಲಿನಿಂದಲೂ 
 ಆಂಗ್ಲ ಶಾಲೆಯಲ್ಲೇ ಓದಿದ್ದರೂ, ಆಂಗ್ಲಕ್ಕಿಂತ ಕನ್ನಡದ ಮೇಲೆಯೇ ಜಾಸ್ತಿ ವ್ಯಾಮೋಹ ಇರುವುದರಿಂದಲೇ ಇವತ್ತು ಕನ್ನಡ ಬ್ಲಾಗರ ಗಳ  ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಲ್ಲಿಗೆ ಆಂಗ್ಲ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಕನ್ನಡದ ಜ್ನ್ಯಾನ ಕಡಿಮೆ ಎನ್ನುವ ಮಾತು ಅಪ್ರಸ್ತುತ!.

                     ಇನ್ನು ಮೊದಲಿನಿದ ಕನ್ನಡ ಮಾಧ್ಯಮದಲ್ಲಿ ಕಲಿತು, ಒಮ್ಮೆಲೇ ಪಿ.ಯು .ಸಿ  ಗೆ ಆಂಗ್ಲ ಮಾಧ್ಯಮಕ್ಕೆ ಸೇರಿದ ವಿಧ್ಯಾರ್ಥಿಗಳ ಗೋಳು ಕೇಳಿ ನೋಡಿ, ಅವರು ಹೇಳುವ ಒಂದೇ ಮಾತು ನಾವು ಮೊದಲಿನಿದ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಬೇಕಿತ್ತು ಅನ್ನುವುದು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆಲ್ಲ ಇಂಗ್ಲಿಷ್ ಬರುವುದಿಲ್ಲ್ವೆಂದಲ್ಲ, ಅಲ್ಲಿಯೂ ಆಂಗ್ಲ ಮಾಧ್ಯಮದವರನ್ನು ಮೀರಿಸುವ ಹಾಗೆ ಮಾತನಾಡುವ ವಿಧ್ಯಾರ್ಥಿಗಳು ಇರಬಹುದು, ಆದರೆ ಮೆಜೋರಿಟಿ ವಿಧ್ಯಾರ್ಥಿಗಳಿಗೆ ಅದು ಕಷ್ಟವೇ. ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಯಾವ ತೊಂದರೆಯನ್ನು ಅನುಭವಿಸುವದಿಲ್ಲ, ಆದರೆ ಮಾತನಾಡಲು ಮಾತ್ರ ಹಿಂಜರಿಕೆ. ಕರ್ನಾಟಕದಲ್ಲಿದ್ದು ಕಡ್ಡಾಯವಾಗಿ ಕನ್ನಡದಲ್ಲಿಯೇ ಕಲಿಯಬೇಕು, ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳುವ ಅದೆಷ್ಟು ಜನ ಬುದ್ಧಿ  ಜೀವಿಗಳು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾರೆ? ವ್ರತ್ತಿ ಪರ ಕೋರ್ಸ್  ತೆಗುದುಕೊಂಡ ವಿಧ್ಯಾರ್ಥಿಗಳಿಗೆ, ಅದರಲ್ಲೂ ಇಂಜಿನಿಯರಿಂಗ್ ಓದುವ ವಿಧ್ಯಾರ್ಥಿಗಳನ್ನು ಕಂಪನಿ ಗಳು  ಆರಿಸಿಕೊಳ್ಳುವಾಗ  ಇಂಗ್ಲಿಷ್ ಭಾಷೆಯೇ ಮಾನದಂಡ ವಾಗಿರುವ, ಇಂಗ್ಲಿಷ್ ಮಾತನಾಡಲು ಬಾರದ ಒಂದೇ ಕಾರಣಕ್ಕೆ, ನಾಲ್ಕು ವರ್ಷ ಪಟ್ಟ ಕಷ್ಟ ವ್ಯರ್ಥ ವಾಗಬೇಕೆ?

                      ಯಾವುದೇ ಭಾಷೆಯ ಕಲಿಕೆ ಇಂದ ಅಥವಾ ಆರಂಭದಿಂದಲೇ ಅದರ ಅಧ್ಯಯನದಿಂದ ಕನ್ನಡಕ್ಕೆ ಕುತ್ತು ಬರುವ ಹಾಗಿದ್ದರೆ, ನಮ್ಮೆಲ್ಲ ಕನ್ನಡ ದಿನಪತ್ರಿಕೆಗಳು, ಕನ್ನಡ ಪುಸ್ತಕಗಳು, ಕಾದಂಬರಿಗಳು,ಹಾಗೂ ಟೀವಿ ಚನ್ನೆಲ್ಲುಗಳು ಎಂದೋ ದಿವಾಳಿ ಎದ್ದು ಹೋಗಬೇಕಿತ್ತಲ್ಲವೇ? ಯಾವ ಮಾಧ್ಯಮದಲ್ಲಿ ಓದಿಸಿದರೂ ಮನೆಯಲ್ಲಿ ಮಾತೃ ಭಾಷೆ ಕನ್ನಡ ಆಗಿರುವುದರಿಂದ, ಆಂಗ್ಲವೇ ಇರಲಿ ಇನ್ನ್ಯಾವ ಭಾಷೆಯೇ ಇರಲಿ ಮಕ್ಕಳು ಅದನ್ನ ಕನ್ನಡಕ್ಕೆ ಅನುವಾದ ಮಾಡಿಕೊಂಡೆ ಕಲಿಯುತ್ತಾರಾದರಿಂದ, ಕನ್ನಡಕ್ಕಂತೂ  ಯಾವ ಕುತ್ತೂ ಇಲ್ಲ.

                      ಯಾವ  ಮಾಧ್ಯಮದಲ್ಲಿ ಓದುತ್ತಿದ್ದರೂ ಮಕ್ಕಳಿಗೆ ದಿನಪತ್ರಿಕೆಗಳನ್ನು ಓದಿಸಬೇಕು.ಕನ್ನಡ ಸಾಹಿತ್ಯದಬಗ್ಗೆ ಆಸಕ್ತಿ ಬೆಳೆಸಬೇಕು  ಮತ್ತು ಕನ್ನಡದ  ಅಪ್ರತಿಮ, ಲೇಖಕ, ಸಾಹಿತಿ ಹಾಗೂ ಕವಿಗಳ ಕೃತಿಗಳನ್ನು ಬಿಡುವಿನ ವೇಳೆಯಲ್ಲಿ  ಓದುವಂತೆ ಪ್ರೇರೇಪಿಸಬೇಕು.ಇದನ್ನು ಬಿಟ್ಟು ಕೇವಲ ಕನ್ನಡ ಕಲಿಸಿ ಕನ್ನಡ ಕಲಿಸಿ ಎಂದು ಹೇಳುವುದರಿಂದ, ಕನ್ನಡ ಕೇವಲ ಒಂದು ವಿಷಯವಾಗಿ ಉಳಿದು ಹೋಗುತ್ತದೆಯೇ ಹೊರತು ಅದರಿಂದಾಗುವ ಲಾಭ ಏನೂ ಇಲ್ಲ.ಕನ್ನಡ ಮಾಧ್ಯಮದಲ್ಲಿ ಕಲಿಯುವದಕ್ಕು ಮಕ್ಕಳು ಕನ್ನಡದ ಮೇಲೆ ಆಸಕ್ತಿ ಬೆಳೆಸಿಕೊಲ್ಲುವುದಕ್ಕು ಸಂಭಂದವಿಲ್ಲ. ಅದೆಷ್ಟು ಜನ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಕನ್ನಡ ಸಾಹಿತ್ಯದ ಅರಿವಿದೆ? ಕನ್ನಡ ಮಾಧ್ಯಮದಲ್ಲಿ ಕಲಿತ ಮಾತ್ರಕ್ಕೆ ಕನ್ನಡವನ್ನು ಉಳಿಸಲು ಸಾಧ್ಯವೇ? ಮಾಧ್ಯಮ ಯಾವುದಾದರೇನು? ಆಸಕ್ತಿ ಬೆಳೆಸಿ ಉಳಿಸುವುದು ನಮ್ಮ ಕೈಯಲ್ಲಿದೆ. 

Wednesday, June 22, 2011

ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು.....

                

                 ಯಾವ ಮಹಾನುಭಾವ ಹೇಳಿದ್ದಾನೋ  ಗೊತ್ತಿಲ್ಲ, ನಮ್ಮ ಉತ್ತರ ಕರ್ನಾಟಕದೆಡೆಗೆ, ತುಂಬಾ popular ಮಾತೊಂದಿದೆ. ''ಧಾರವಾಡ ಮಳಿ ನಂಬ ಬ್ಯಾಡ, ಬೆಳಗಾವಿ ಹುಡುಗಿ ನಂಬ ಬ್ಯಾಡ!'' ನಮ್ಮ ವರಕವಿ ಬೇಂದ್ರೆ ಅವರು  ನಮ್ಮ ಧಾರವಾಡದ ಮಳೆಯ ಬಗ್ಗೆ ತುಂಬಾ ಅಧ್ಭುತವಾದ ಕವನಗಳನ್ನ ಬರೆದಿದ್ದಾರೆ, ಅವುಗಳೆಲ್ಲ ನಿಜ ಎಂದು ಕಳೆದು ನಾಲ್ಕು ದಿನಗಳಿಂದ ಅನ್ನಿಸುತ್ತಿದೆ, ನಾನು ಬೇಸಿಗೆಯಲ್ಲಿ ಹುಟ್ಟಿದ ಕಾರಣಕ್ಕೋ ಏನೋ ಮಳೆಗೂ ನಂಗು ಮೊದಲಿನಿಂದ ಅಷ್ಟಕ್ಕಷ್ಟೇ. ನನ್ನೆಲ್ಲ ಸ್ನೇಹಿತೆಯರು, ಮಳೆಯಂದ್ರೆ ಇಷ್ಟ ಇಲ್ವಾ? ಯಾವ ಸೀಮೆಯವಳೇ ನೀನು? ಅಂತ ರೆಗಿಸಿದಾಗ,ಮಳೆಗೆ ನನ್ನ ಕಂಡ್ರೆ ಇಷ್ಟ ಕಣ್ರೆ, ಅಂತ ಹೊಟ್ಟೆ ಉರಿಸುತ್ತಿದ್ದೆ! ಈಗಲೂ ಅಷ್ಟೇ ಬಿಟ್ಟು ಬಿಡದೆ ಧಾರಾಕಾರವಾಗಿ ಸುರಿಯುವ ಮಳೆ ನೋಡಲು ನನಗೆ ಕಷ್ಟವೇ.. 

               ಮನೆಯಿಂದ ಹೊರನಡೆದ ಎರಡನೇ ಹೆಜ್ಜೆಗೆ, ನನ್ನನ್ನು ಅತೀ ಯಾಗಿ ಪ್ರೀತಿಸುವ ಮಳೆರಾಯನೆಡೆಗೆ ಒಂದು ಅಕ್ಕರೆಯ ಮುಗುಳ್ನಗೆ! ನನ್ನ ಒಂದು ನಗುವಿಗಾಗಿ ವರ್ಷವಿಡಿ ಚಡಪಡಿಸಿದ ಹುಡುಗನಂತೆ, ಒಂದೇ ಕ್ಷಣದಲ್ಲಿ ತನ್ನೆಲ್ಲ ಮನದ ಭಾವನೆಗಳನ್ನು, ಹರ್ಷೋದ್ಗಾರಗಳನ್ನು  ನನ್ನ ಮೇಲೆ ಚಿಮ್ಮಿಸಿ ಆನಂದಿಸುವ ಮಳೆರಾಯನಿಗಿಂತ ಇನ್ನೊಬ್ಬ ಗೆಳೆಯ ಬೇಕೇ?


               ಇದೆಲ್ಲ ಕೇವಲ ನನ್ನ ಕಲ್ಪನೆಯೂ, ಅಥವಾ ಭ್ರಮೆಯೋ ನನಗಂತೂ ಕಳೆದ ನಾಲ್ಕು ದಿನಗಳಿಂದ ಮಳೆಯೊಂದಿಗೆ ವಿಪರೀತ ಪ್ರೇಮ! ನಮ್ಮಿಬ್ಬರಲ್ಲಿ ಕೇವಲ ನಾನೊಬ್ಬಳೆ ಮಾತಿನ ಮೂಲಕ ಪ್ರತಿಕ್ರಿಯುಸುತ್ತೇನೆ, ಮಳೆರಾಯನೋ ನಿರ್ಲಿಪ್ತ ಭಾವನೆಯ, ಅತ್ಯಂತ ಸಹನಶೀಲ ಮತ್ತು ಶಾಂತ ಸ್ವಭಾವದ, ಎಲ್ಲವನ್ನು ವರ್ಷಧಾರೆಯ ಮೂಲಕ ವ್ಯಕ್ತ ಪಡಿಸುವ ಅಪರೂಪದ ಹುಡುಗ!ಅವನು ನನ್ನ ಎಷ್ಟು ಪ್ರೀತಿಸುತ್ತನೆಂದರೆ, ನನ್ನ ಅನುಮತಿ ಇಲ್ಲದೆ ಹೋದರೆ ಬರದೆ ಕೇವಲ ಗುಡುಗು ಮತ್ತು ಮಿಂಚಿನ ಮೂಲಕ ನನ್ನ ಪ್ರತಿಕ್ರಿಯೆಗೆ ಕಾಯುತ್ತ ಕುಳಿತಿರುತ್ತಾನೆ.

              ಮೊನ್ನೆ ಕಲಾಭವನ್ ಸರ್ಕಲ್ ಇಂದ ನನ್ನ ಸ್ಕೂಟಿ ಕಿವಿ ಹಿಂಡಿ, ಮುಂದೆ ಹೋಗುವಾಗ ಧಬಲ್ಲನೆ ಎದುರಾದ ಸಿಗ್ನಲ್  ಕಂಡು ಗಾಡಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ, ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದನ್ನು ಕಂಡು, ಜರ್ಕಿನ್  ಮತ್ತು ಕ್ಯಾಪ್ ಮರೆತು ಬಂದ ನನ್ನನ್ನು ನಾನೇ  ಹಳಿದುಕೊಂಡು, ಉಪಾಯ ಮಾಡಿ ಆಕಾಶವನ್ನೇ ನೋಡುತ್ತಾ, ಮನದಲ್ಲೇ ಪ್ಲೀಸ್ ಕಣೋ ನಾನು ಮನೆಗೆ ಹೋಗುವ ವರೆಗೂ ಬರಬೇಡ, ನಿನ್ನ ಪ್ರೀತಿಯ ಹುಡುಗಿಯನ್ನ ಮನೆವರೆಗೂ ಸೇಫ್ ಆಗಿ ತಲುಪಿಸುವುದು ನಿನ್ನ ಜವಾಬ್ದಾರಿ ಅಲ್ವ? ಪ್ಲೀಸ್ ಬರಲ್ಲ ತಾನೆ ಅಂತ ಗೊಣಗುತ್ತಿರುವುದನ್ನು, ನನ್ನ ಪಕ್ಕದ ಬೈಕ್ ಮೇಲೆ ಕುಳಿತ ಸ್ಪುರದ್ರೂಪ ಹುಡುಗ  ಅವಕ್ಕಾಗಿ, what's going on? ಅಂದ, nothing serious, speaking to my boy friend Mr Rain! ಅಂದೆ, ಆ ಹುಡುಗನ reaction ಪಡೆಯುವದರೊಳಗಾಗಿ, ಗ್ರೀನ್ ಸಿಗ್ನಲ್  ಬಂತು, ಮತ್ತೆ ನನ್ನ ಸ್ಕೂಟಿಯ ಕಿವಿ ಹಿಂಡಿ ಮನೆಯೆಡೆಗೆ ಹೋಗುವಾಗ ಒಂದೇ ಪ್ರಶ್ನೆ ಮನದಲ್ಲಿ ಕಾಡುತ್ತಿತು ಮಳೆರಾಯ ನನ್ನ ಮಾತು ಕೇಳುತ್ತಾನ? ಕೇಳದೆ ಏನು ಮನೆ ತಲುಪೋ  ವರೆಗೂ ಒಂದು ಹನಿಯನ್ನೂ ಸುರಿಸದೇ,  ಇರುವದನ್ನು ಕಂಡು ಆಕಾಶವನ್ನು ನೋಡಿ ಸಿಹಿ ಮುತ್ತೊಂದನ್ನ ನನ್ನ ಪ್ರೀತಿಯ ಹುಡುಗನೆಡೆಗೆ  ತೇಲಿ  ಬಿಟ್ಟೆ. ಮನೆಸೇರಿದ ಎರಡೇ ನಿಮಿಷಕ್ಕೆ ಧಾರಾಕಾರ ಮಳೆ!

            ಅಮ್ಮ ಆಫೀಸಿಂದ ಮನೆಗೆ ಬಂದ ತಕ್ಷಣ, ಈವತ್ತು ಸಿಗ್ನಲ್ನಲ್ಲಿ ನಿಂತಾಗ.........................................................  ಹಿಂಗಾಯ್ತು. ಅಂತ ವಿವರಿಸಿದಾಗ ಅಮ್ಮ ನನ್ನನ್ನು ಪೆದ್ದಿ ಅನ್ನೋ ಹಾಗೆ ಒಂದು ಹುಸಿ ನಗು ನಕ್ಕಳು. ನಂಗೊತ್ತು  ನೀನು ನಂಬೋಲ್ಲ ಅಂತ, ಆಯಿತು ಈಗಲೇ prove ಮಾಡ್ತಿನಂತೆ. ಈಗ ಮಳೆ ಜೋರಾಗಿದೆ ತಾನೇ? ಆಯ್ತು ಈಗ ನಾನು ಹೊರಗೆ ಹೋಗಿ ಆಕಾಶವನ್ನು ನೋಡಿ ನಾನು ಮತ್ತು ಅಮ್ಮ ಪಾರ್ಕ್ ವರೆಗೂ ಹೋಗಿ ಬಾರೋ ತನಕ ನಿಲ್ಲು. ಅಂತ ಕೇಳ್ತೀನಿ ನೋಡು.ಅವಾಗ್ ನೀನೆ ನಂಬ್ತಿ.  ಅಮ್ಮ ಕಾಫಿ ಕುಡಿದು ಹೊರಗೆ ಬರುವದರೋಳಗಾಗಿ ನನ್ನ ಪ್ರೀತಿಯ ಹುಡುಗನಿಗೆ ನನ್ನ ವಿನಂತಿ ತಲುಪಿಸಿದ್ದೆ. ಅವನದು ನನ್ನಡೆಗೆ ನಿಜವಾದ ಪ್ರೀತಿಯಮ್ಮ, ನೋಡು ನನ್ನ ಮಾತನ್ನೆಲ್ಲ ಕೇಳುತ್ತಾನೆ, ಎಂದು ಹರಟುತ್ತ ನಡೆದ ಸ್ವಲ್ಪ ಸಮಯದ ನಂತರ, ಪುಟ್ಟ ಮನೆಗೆ ಮೆಂಟಲ್ ಹಾಸ್ಪಿಟಲ್ ತುಂಬಾ ಹತ್ರ ಇರೋದ್ರಿಂದ ನಿನಗೆ ಸೈಡ್ ಎಫ್ಫೆಕ್ಟ್ಸ್ ಆಗ್ತಾ ಇದೆ ಕಣೋ , ಒಂದ್ಸಲ  ಹೋಗಿ ಚೆಕ್ ಅಪ್ ಮಾಡಿಸೋಣ, ಮನೆಗೆ ಹೋಗುವ ಮೊದಲು ಆಸ್ಪತ್ರೆಗೆ ಹೋಗೋಣ್ವಾ? !

            ಅಮ್ಮ ......ಗುರ್ರ್ರ್ ...ಅನ್ನುವಾಗ ಮತ್ತೆ ನನ್ನ ಪ್ರೀತಿಯ ಹುಡುಗನ ಆರ್ಭಟ ಶುರುವಾಯ್ತು. ಮನೆಗೆ ಹೋಗೋ ವರೆಗೂ ಬರಲ್ಲ ಅಂದೆಲ್ಲ ಈಗ ಏನ್ ಹೇಳ್ತಿಯ? ನನ್ನ ಪ್ರೀತಿಯ ಹುಡುಗ ನನ್ನಷ್ಟೇ ಪ್ರೀತಿಸ್ತಾನೆ, ಅವನ ಅತ್ತೆಯನ್ನಲ್ಲ ! ಅಮ್ಮ ನನ್ನ ಕಿವಿ ಹಿಡಿದು ಏನಂದೆ ಅಂದಾಗ, ಹೌದಮ್ಮ  ನೀನು ನನ್ನ ಬೈದ್ರೆ ಅವನಿಗೆ ಕೋಪ ಬರುತ್ತೆ, ಎಲ್ಲಿ ಒಂದು ಮುತ್ತು ಕೊಡು ನೋಡೋಣ ? ಮತ್ತೆ ಮಳೆ ನಿಂತು ಹೋಗುತ್ತೆ  ಅಂದೆ. ನಿನಗೇನು ತೆಲೆ ಕೆಟ್ಟಿದೆಯ ? ಪಾರ್ಕ್ನಲ್ಲಿ ಮುತ್ತು ಕೊಡು ಅಂತಿಯ ? ಅಮ್ಮ ನಾನೇನು ಅಪ್ಪನಿಗೆ ಮುತ್ತು ಕೊಡು ಅಂದ್ನ ? ಇಲ್ವಲ್ಲ ನಾಚ್ಕೊಬೇಡ  ಬೇಗ ಕೊಡು ಇಲ್ದೆ ಹೋದ್ರೆ  ಇಬ್ರೂ ನೆನೆದು ಹೋಗ್ತೇವೆ ಅಮ್ಮ .  ಆಯ್ತು ನೋಡೇ ಬಿಡೋಣ ಅಮ್ಮ ನನ್ನ ಕೆನ್ನೆಗೆ ಮುತ್ತಿಡಲು ಮಳೆರಾಯ ಶಾಂತ! ಏನೇ ಕಂದ ಇದು ವಿಸ್ಮಯ? ಎಂದು ಅಮ್ಮ ಕಣ್ಣು ಬಿಟ್ಟು ನೋಡ್ತಾ ಕುಳಿತು ಬಿಟ್ಲು   ! ನೋಡು  ನಿನಗೆ ಮಳೆರಾಯನಿಗಿಂತ  ಒಳ್ಳೆ ಅಳಿಯ ಬೆಕ?  ಈವತ್ತೇ ಅಪ್ಪನೊಟ್ಟಿಗೆ ಮಾತಾಡಿ ನನಗು ಮಳೆರಾಯನಿಗು ಮದ್ವೆ ಫಿಕ್ಸ್ ಮಾಡು.    ''ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು, ಹಗಲಿರಲಿ ಇರುಳಿರಲಿ ನೀನಿರದೆ ನಾ ಹೇಗಿರಲಿ?.......'' ಪ್ರೇಮ ಕವಿ ಕಲ್ಯಾಣರ ಪತ್ನಿಯೆಡೆಗೆ, ಸಣ್ಣ ಮರುಕ! 

Sunday, June 19, 2011

ಜನ ಮರುಳೋ ಜಾತ್ರೆ ಮರುಳೋ?

                       Back home :-)! ಅಂತು- ಇಂತೂ  ಇಂಜಿನಿಯರಿಂಗ್ ಮುಗಿಸಿದ್ದಾಯ್ತು. ನಿನ್ನೆ ಮನೆಗೆ ಬಂದಾಗಿನಿಂದ ನಿಜವಾಗಲು ನಾನು ಡಿಗ್ರಿ ಮುಗಿಸಿದ್ದೇನ? ತುಂಬಾ ದೊಡ್ಡವಳು ಆದೆನ? ನನ್ನ ಪುಣ್ಯಕ್ಕೆ ಈವತ್ತು ಸಂಡೇ ಅಮ್ಮನಿಗೆ ರಜೆ, ಮನೆಯಲ್ಲಿ ಇದಾಳಲ್ಲ, ಸರಿ ಅಮ್ಮನ ತೆಲೆ ತಿನ್ನೋಣ ಅಂತ, ಅಮ್ಮ.. ನಾನು ನಿಜವಾಗಲು....? ಬಂದಾಗಿನಿಂದ ೧೦೦ ಸಲ ಕೇಳಿದ್ದೆ ಕೇಳ್ತಾ ಇದ್ದೀಯ ಏನಾಗಿದೆ ನಿನಗೆ? ಜಗತ್ತಿನಲ್ಲಿ ನೀನೊಬ್ಬಳೆ ಡಿಗ್ರಿ ಮುಗ್ಸಿದಿಯ ಏನ್ ಕಥೆ? ನನ್ನ ಪುಟ್ಟ ಮಗು ನನಗೆ ಯಾವಾಗಲು ಪುಟ್ಟ ಮಗುನೆ! ನಾಲ್ಕು ವರ್ಷ ನೀನು ಮನೇಲಿ ಇರಲಿಲ್ಲ ಅನ್ನೋದು ಬಿಟ್ಟರೆ, ನಿನ್ನಲ್ಲಂತೂ ಯಾವ maturity  ಕೂಡ ನನಗೆ ಕಾಣುತ್ತಿಲ್ಲ, ಆದರು ಹೊರಗಿನ ಜನಕ್ಕೆ ನೀನು ಈಗ ದೊಡ್ದವಳೇ! ಇನ್ನು ಮೇಲಾದರೂ ತಮ್ಮನ ಜೊತೆ  ಹೊಡೆದಾಡಬೇಡ, ದೊಡ್ಡ ದನಿಯಲ್ಲಿ ಕೂಗಾಡಬೇಡ, ಸ್ವಲ್ಪ ಸೀರಿಯಸ್ ಆಗಿ ಇರೋದನ್ನ ಕಲಿ, ಚೆಲ್ಲು ಚೆಲ್ಲಾಗಿ  ಆಡುವದನ್ನು ಬಿಡು........and the list continues...ಯಾಕಾದರೂ ಅಮ್ಮನ್ನ ಕೆಳಿದೇನೋ ಅನ್ನುವಷ್ಟು  advise ಗಳ  ಸುರಿಮಳೆ!

                     ಇತ್ತ ಅಮ್ಮ ಹೇಳಿದ್ದನ್ನೇ ಹೇಳುತ್ತಿರುವಾಗ,ಸದ್ದಿಲದಂತೆ  ಹಾಲಿನ ಲೋಟ ಎತ್ತುಕೊಂಡು, ಬಿಸಿ ಬಿಸಿ ಟೀ ಹೀರುತ್ತಾ ಪೇಪರ್ ಓದುತ್ತ ಕುಳಿತ ಅಪ್ಪನ ಪಕ್ಕದಲ್ಲಿ ಹೋಗಿ ಕುಳಿತು, ಟಿವಿ ಆನ್ ಮಾಡಿದಾಗ  ಬಂದ ಮೊದಲ ಸುದ್ದಿ FDA  ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ ೭ ಲಕ್ಷ ರುಪಾಯೀ ಎಂಬ breaking  ನ್ಯೂಸ್! ಅಮ್ಮ ಅಡುಗೆ ಮನೆಯಿಂದ ಹೊರ ಬಂದು, ನನ್ನ ತೆಲೆ ಮೊಟಕಿ , ನೋಡು ಬರೀ FDA ಪರೀಕ್ಷೆಗೆ ಈ ಪರಿಸ್ಥಿತಿ, ಇನ್ನು ನೀನು ಇಂಜಿನಿಯರಿಂಗ್ ಓದಿದ್ದು ಸಾಕು, Mtech ಮಾಡಲ್ಲ, IAS ಮಾಡ್ತೀನಿ ಅಂತೀಯ? ಎಲ್ಲ ಸರಕಾರೀ ಪರಿಕ್ಷೆಗಳದ್ದು ಇದೆ ಹಣೆ ಬರಹ, ಆಮೇಲೆ ನೀನು depressed ಆಗಿ ತೆಲೆ ಕೆಡಿಸಿಕೊಳ್ಳುವುದು ಬೇಕಿಲ್ಲ, ಸುಮ್ಮನೆ PGCET ಬರೆದು Mtech ಮಾಡು. ಅದಾದಮೇಲೆ ಏನು ಬೇಕೋ ಅದನ್ನ ಮಾಡ್ಕೋ...ಅಮ್ಮ ನಂಗೆ ಹೇಳುತ್ತಿಲ್ಲವೇನೋ ಎಂಬಂತೆ ಪೇಪರ್ ಓದುತ್ತ ಕುಳಿತುಕೊಂಡೆ.

                    ಅತ್ತ ಅಪ್ಪ ಕೂಡ, ಹೌದು ಪುಟ್ಟ ಸುಮ್ಮನೆ  ಸಮಯ ವ್ಯರ್ಥ ಮಾಡಬೇಡ PGCET preparation ಶುರು ಮಾಡು. ನಾನು ಯಾವತ್ತು ನಿನ್ನ ಕನಸುಗಳಿಗೆ ಅಡ್ಡ ಬಂದವನಲ್ಲ, ಈವತ್ತಿಗೂ ನನಗೆ ನಿನ್ನ ಸಾಮರ್ಥ್ಯದ ಬಗ್ಗೆ ಅನುಮಾನಗಳಿಲ್ಲ, ನೀನು ಮೊದಲು Mtech ಮುಗಿಸಿ ಆಮೇಲೆ ಇದರತ್ತ ಗಮನಹರಿಸು. ನಮ್ಮ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಖಂಡಿಸುವ, ಖಂಡಿಸಿ ಬರೆಯುವ ಹುಮ್ಮಸ್ಸು, ಧೈರ್ಯ ಎರಡೂ ನಿನ್ನಲಿದೆ, ಆದರೆ ಇದು ಕೇವಲ ಇವೆರಡರಿಂದ ಆಗುವ ಕೆಲಸವಲ್ಲ. ನಾನು ಅಮ್ಮನ ಹಾಗೆ ಮಾತಾಡ್ತಾ ಇದೀನಿ ಅನ್ಕೊಬೇಡ, lets be practical, ನಮಗೆ ಇನ್ನೊಂದು option ಇರಲೇಬೇಕು, ಇದಾಗದಿದ್ದರೆ ಇನ್ನೊಂದು ಅನ್ನೋ ಥರ, ನೋಡು ಯೋಚನೆ ಮಾಡು, ಇಷ್ಟಾಗಿಯೂ ನಿನಗೆ ಅದೇ ಮಾಡುವುದಿದ್ದರೆ ಮಾಡು ಪರವಾಗಿಲ್ಲ, ನಾವೇನು ಅಡ್ಡ ಬರೋಲ್ಲ, ದೆಲ್ಹಿಗೆ ಹೋಗುವ ವ್ಯವಸ್ಥೆ ಮಾಡ್ತೇನೆ.

                   ಬೆಳಗ್ಗೆ ಬೆಳೆಗ್ಗೆನೆ ತುಂಬಾ ಖಿನ್ನತೆಗೆ ಆವರಿಸಿ ಕೊಂಡಿರುವಂತಾಗಿ, ಏನು ಮಾಡಿ ಏನು ಪ್ರಯೋಜನ? ನಾನು ಯಾವ  ಊರಿನ ದಾಸಯ್ಯ? ಯಾವ ಆದರ್ಶ ಅಂತ ಇಟ್ಟು ಕೊಂಡು ಬದುಕಿ ಏನಾಗ ಬೇಕಿದೆ? ಒಂದು ಕಡೆಯಲ್ಲಿ ಭ್ರಷ್ಟ ಸರಕಾರ, ಇನ್ನೊಂದು ಕಡೆ ತಮ್ಮನ್ನು ತಾವು ಸನ್ಯಾಸಿಗಳು ಎಂದು ಹೇಳಿಕೊಂಡು ೧೦೦ ತೆಲೆಮಾರಿಗಾಗುವಷ್ಟು ಸಾವಿರ ಕೋಟಿಗಳಲ್ಲಿ ದುಡ್ಡು ಮಾಡುವ ಬಾಬಾಗಳು, ಹೇಸಿಗೆ ಹುಟ್ಟುವಷ್ಟು ಜನರ ಮೌಢ್ಯ, ಇಂಥವರ ಮುಖವಾಡ ಬಯಲು ಮಾಡಿ ಪುಟಗಟ್ಟಲೆ ಲೇಖನ ಬರೆದು, ಗಂಟಗಟ್ಟಲೆ TV ಪರದೆಯ ಮೇಲೆ ಭಾಷಣ ಹೊಡೆದು, ಕಡೆಗೆ ಅವಕಾಶ ಸಿಕ್ಕಾಗಲೆಲ್ಲ ಇದೆ ಭ್ರಷ್ಟರಿಂದ ಸೈಟು-ಮನೆ  ಮಾಡಿಕೊಂಡು ಸಮಾಜಕ್ಕೆ ನೈತಿಕ ಪಾಠ ಹೇಳಿ ಕೊಡುತ್ತಿರುವಾಗ, ನನ್ನೊಬ್ಬಳಿಂದ ಅಥವಾ ನನ್ನಂಥ ಅನೆಕರಿಂದಾದರು ಏನು ಮಾಡಲು ಸಾಧ್ಯ? ನಾವೆಲ್ಲಾ ಎತ್ತ ಸಾಗುತ್ತಿದ್ದೇವೆ? ಮುಂತಾದ ಪ್ರಶ್ನೆಗಳು ತೆಲೆಯಲ್ಲಿ ಹೊಕ್ಕಿ ಕೊರೆಯಲು ಶುರು ಮಾಡಿದವು.

                    ಏನಾಗಿದೆ ನಮ್ಮ ಜನರಿಗೆ? ಬಾಬಾ ರಾಮದೇವ್ ಆಸ್ತಿ ಸವಿಸ್ತಾರವಾಗಿ ಅಂಕೆ ಅಂಶಗಳ  ಬಹಿರಂಗ ಪಡಿಸಿದ್ದಾಗಿಯು, ಪಕ್ಕದ ಮನೆ ಆಂಟಿ ಅವನಿಂದಲೇ ಅವರ ಮಧುಮೇಹ ವಾಸಿ ಆಯಿತು  ಅಂತ ಹೇಳ್ಕೊತಾರಲ್ಲ ಯಾಕೆ? ಪುಟ್ಟ ಪರ್ತಿಯ ಜನರಿಗಂತೂ ಸತ್ಯ ಸಾಯಿ ಬಾಬಾ ನಡೆದಾಡುವ ದೇವರು, ಸಚಿನ್ ತೆಂಡೂಲ್ಕರ್ ಅಂಥ ಸ್ಟಾರ್ ಕೂಡ ಬಾಬಾನ ಚಮತ್ಕಾರಗಳಿಗೆ ಮಾರು ಹೋಗಿದ್ದನೆಂದರೆ, ಉಳಿದ ಜನ ಸಾಮಾನ್ಯರ ಪಾಡೇನು? ಯಾಕೆ ಜನರು ಇಷ್ಟು ಸುಲಭವಾಗಿ ಮೋಸ ಹೋಗುತ್ತಾರೆ? ಜನರ ಅಮಯಕತೆಯನ್ನೇ ಬಂಡವಾಳ  ಮಾಡಿಕೊಂಡು, ಕೋಟಿಗಟ್ಟಲೆ ಹಣ ಮಾಡುವ ಇಂಥ ನೀಚ ಬಾಬಾಗಳನ್ನು ಅವತಾರ ಪುರುಷರು ಎಂಬಂತೆ 24x7 ಹೇಳಿದ್ದನ್ನೇ ಹೇಳುವ ಚನ್ನೆಲ್ಲುಗಳು, ಅಸಾಹಯಕ ವೀಕ್ಷಕರು ಥೂ-ಛಿ ಎಂಬ ಉಧ್ಗಾರಗಳನ್ನು ಬಿಟ್ಟು ಬೇರೆ ಇನ್ನೇನು ಮಾಡಲು ಸಾಧ್ಯ? 

                    ಸೆಕ್ಸ್-ಸ್ಕ್ಯಾಂಡಲ್  ಇಂದಾಗಿ ಇಡೀ ಸನ್ಯಾಸಿಗಳ ಅಸ್ತಿತ್ವವನ್ನೇ ಅವಮಾನಿಸಿದ, ಸ್ವಾಮಿ ನಿತ್ಯಾನಂದನಿಗೆ ಇವತ್ತಿಗೂ ದೇಶ ವಿದೇಶಗಳಿಂದ ಭಕ್ತ ಸಾಗರ ಹರಿದು ಬರುತ್ತಿರುವದು, ನಿಜಕ್ಕೂ ವಿಪರೀತ ಭಕ್ತಿಯ ಪರಾಕಾಷ್ಟೆ ಅಂತೆ ಹೇಳಬೇಕು..ನಮ್ಮಂತೆ ಅವನು ಕೂಡ ಉಪ್ಪು-ಖಾರ ತಿನ್ನುವ ಮನುಷ್ಯ ತಪ್ಪು ಮಾಡಿದ್ದರೂ ಮಾಡಿರಬಹುದು, ತಪ್ಪನ್ನು ನೋಡಿಕೊಳ್ಳಲು ಕೋರ್ಟ್ ಇದೆ, ಆದರು ಆತ ಕೇವಲ ಮುಟ್ಟಿಯೇ ನನ್ನ ರೋಗ ಗುಣ ಪಡಿಸಿರುವ ಪವಾಡ ಪುರುಷ. ಯಾರು ಏನೇ ಹೇಳಿದರು ಅವನಿಂದ ನಂಗೆ ಒಳ್ಳೆಯದೇ ಆಗಿದೆ ಹಾಗಾಗಿ ನಾನು ಅವನಲ್ಲಿಗೆ ಮತ್ತೆ ಮತ್ತೆ ಹೋಗಿ ನನ್ನ ರೋಗ ವಾಸಿ ಮಾಡಿಕೊಂಡು ಬರುತ್ತೇನೆ ಅಂತ ಹೇಳುವ ಅವಿವೇಕಿ ಭಕ್ತರಿಗೆ ಏನನ್ನು ಹೇಳಲು ಸಾಧ್ಯ? 

                  ಅಯ್ಯೋ ನಮ್ಮ ಬಾಬಾ ರಾಮದೇವ್, ಆ ನಿತ್ಯಾನಂದನಿಗಿಂತ  ಒಳ್ಳೆಯವನಲ್ಲವ? ಈವತ್ತು ಎಲ್ಲ ಸ್ವಾಮಿಗಳು ದುಡ್ಡು ಮಾಡುತ್ತಿದ್ದಾರೆ, ರಾಮದೇವ್ ಒಬ್ಬನೇ ಏನು ಅಲ್ಲವಲ್ಲ? ಅವನು ಎಷ್ಟೇ ದುಡ್ಡು ಮಾಡಿದ್ದರೆನಂತೆ, ಅವನು ಕ್ಯಾನ್ಸೆರ್ ಮತ್ತು ಏಡ್ಸ ರೋಗಗಳನ್ನು ವಾಸಿ ಮಾಡಬಲ್ಲ, ನಮಗೆ ಅವನ ವೈಯಕ್ತಿಕ ಬದುಕು, ಅವನ ಹಣ, ಆಸ್ಥಿಗಳಿಂದ ಏನಾಗಬೇಕಿದೆ? ನನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರೆ ಕತ್ತೆ ಕಾಲಾದರೂ ಹಿಡಿದು ಬಗೆ ಹರಿಸಿ ಕೊಳ್ಳಲು ಸಿದ್ಧನಿರುವಾಗ, ರಾಮದೇವ್ ಎಂಬ ಪರಮ ದೇಶ ಭಕ್ತನ ಅನುಯಾಯಿ ಆದರೆ ತಪ್ಪೇನು ಎಂದು ಕೇಳುವವರಿಗೆ ಏನು ಹೇಳಬಹುದು?

                 ಇವತ್ತು ನಮ್ಮ ದೇಶದಲ್ಲಿ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆಯೋ, ಅದರ ಎರಡು ಪಟ್ಟು ಮಠ-ಮಂದಿರಗಳು ಮತ್ತು ಅದರ ಸ್ವಾಮಿಗಳು ಆ ಗಬ್ಬಿನಲ್ಲೇ ಮುಳಿಗೆದ್ದು ಹೋಗಿದ್ದಾರೆ, ಹಿಂದೆ ಕೆಟ್ಟು ಹೋದ ಸಾಮ್ರಾಜ್ಯ  ಎಂದೇ  ಖ್ಯಾತಿಗಳಿಸಿದ್ದ ರಾಜಕೀಯ ಕೂಡ ಈ ಬಾಬಾಗಳ ಭ್ರಷ್ಟತೆ ಗಿಂತ ವಾಸಿ ಎನ್ನುವ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದಿದಿರುವುದು ಎಂಥ ವಿಪರ್ಯಾಸ? ಭಾರತ ದೇಶ ತನ್ನ ಸಂಸ್ಕೃತಿ, ಧ್ಯಾನ, ಆಧ್ಯಾತ್ಮ, ಯೋಗಗಳಿಂದಲೇ, ಹೊರಜಗತ್ತಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದು, ಈವತ್ತು  ನಿಜವಾಗಲು ನಮ್ಮ ಮಣ್ಣಿನಲ್ಲೇ ಸ್ವಾಮಿ ವಿವೇಕಾನಂದ ನಂಥ ಮಹಾ ಪುರುಷರು   ಜನಿಸಿದ್ದರಾ? ಎಂಬ ಪ್ರಶ್ನೆ ಕೇಳುವ ಹಾಗಾಗಿದೆ? ಎಷ್ಟೋ ವರ್ಷಗಳ ಹಿಂದೆ ಸರ್ವಜ್ಞ್ಯ'' ತನ್ನ ಬಿಟ್ಟು ದೇವರಿಲ್ಲ'' ಎಂಬ ಉಕ್ತಿಯನ್ನು ಇಂಥ ಕಲಿಯುಗದ ಢೋಂಗಿ ಬಾಬಾಗಳನ್ನು ತೆಲೆಯಲ್ಲಿ ಇಟ್ಟುಕೊಂಡೆ ಹೇಳಿರಬಹುದ? ಏನೇ ಆದರು ಸರ್ವಜ್ನ್ಯನ ದೂರಾಲೋಚನೆಗೆ   HATS OFF!

Wednesday, May 11, 2011

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ?ಇರೋದ್ರೊಳಗೆ ಬಿದ್ದು ನೋಡಿ ಪ್ರೇಮದ ಗುಂಡಿ! ಅಂತ ಹೇಳ್ತಾರ್ ದೊಡ್ಡ ಮಂದಿ!!

                          
                      ಪ್ರೀತಿ, ಪ್ರೇಮ, ಆಕರ್ಷಣೆ, ಯವ್ವನ, ಹುಚ್ಚು ಮನಸು, ಹರೆಯ, ಮುಂತಾದ ಪದಗಳನ್ನು ಒಂದಿಲ್ಲೊಂದು ರೀತಿಯಲ್ಲಿ, ಸಿನಿಮಾ, ಧಾರವಾಹಿ, ಅಥವಾ ಪತ್ರಿಕೆ ಎಲ್ಲಿಯಾದರೂ ಕೇಳಿಯೇ ಕೇಳಿರುತ್ತೇವೆ. ನಾನಿರುವ ಹಂತ ಗಮನಿಸಿದರೆ ನನಗಂತೂ ಇದೊಂದು ಕೇವಲ ಮಾನಸಿಕ ಅಸ್ವಸ್ಥತೆ ಅಂತ ಅನ್ನಿಸುತ್ತದೆ!! ಹಾಗಂತ ನಾನು ತೀರ ಪ್ರೇಮ ವಿರೋಧಿ ಏನಲ್ಲ, ನನ್ನಲ್ಲೂ  ಕನಸುಗಳಿವೆ, ಕನಸುಗಳಿಗೆ ಬಣ್ಣ ತುಂಬುವ ಸಂಗಾತಿಯ ಅಸ್ಪಷ್ಟ ಚಿತ್ರವಿದೆ! ಆದರೆ ಪ್ರಶ್ನೆ ಇರುವುದು ಪ್ರೀತಿ ಯಾವ ಹಂತದಲ್ಲಿ ನಿಜವಾಗಿ ಹುಟ್ಟುತ್ತದೆ? ಅನ್ನೋದು. ನನಗೆ ಗೊತ್ತು ಇವತ್ತು ಪೋಸ್ಟ್ ಮಾಡಿ ನಾಳೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ inbox  ತುಂಬಿ ಹೋಗುವಷ್ಟು ಜನ ನನ್ನ ಸ್ನೇಹಿತರೆಲ್ಲರೂ ನನ್ನನ್ನ ಹಿಗ್ಗ ಮುಗ್ಗ ಬೈದು sms  ಮಾಡಿರುತ್ತಾರೆ! but friends am helpless:-( ನಾನು ನಿಮ್ಮ ಪ್ರೀತಿಯನ್ನು ಅವಮಾನಿಸುತ್ತಿಲ್ಲ, ಬದಲಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೆನಷ್ಟೇ.

                        ಯಾರನ್ನೇ ಕೇಳಿ ನೋಡಿ ಪ್ರೀತಿ ಒಂದು ಅನನ್ಯ ಅನುಭವ, ಮಾಡಿದವರಿಗೆ ಮಾತ್ರ ಗೊತ್ತಾಗುತ್ತದೆ, ಮಾಡದೆ ಇರುವವರು ದೊಡ್ಡ ನಷ್ಟ ಅನುಭವಿಸುವವರು ಎಂಬ ರೀತಿಯಲ್ಲಿ, ಪ್ರೀತಿಯಲ್ಲಿ ತೇಲಾಡುವ ಮನಸ್ಸುಗಳು ಹೇಳುವ ಮಾತಿದು. ಹಾಗಾದರೆ, ಪ್ರೀತಿ ಎಂಬುದು ಒಬ್ಬ ಹುಡುಗ/ಹುಡುಗಿಗೆ ಮಾತ್ರ ಸೀಮಿತವಾದ ಅಮೂಲ್ಯ ಸಂಪತ್ತಾ?  ಯಾಕೆ ನಮ್ಮ ಯುವ ಜನಾಂಗ ತನ್ನ ಹುಚ್ಚು  ಬಯಕೆಗಳಿಗೆ, ಅಪ್ರಭುದ್ಧ ಭಾವನೆಗಳಿಗೆ ಪ್ರೀತಿ ಎಂಬ ಹೆಸರನ್ನು ಕೊಟ್ಟು ಸಂಭ್ರಮಿಸುತ್ತಾರೆ? ಯಾಕೆಂದರೆ, ನಮ್ಮಲ್ಲಿರುವ ಒಂದೇ ಒಂದು ಬಯಕೆ ಏನೆಂದರೆ ನಾನು ಯಾರಿಂದಲಾದರೂ ಗುರುತಿಸಿಕೊಳ್ಳಬೇಕು ಎಂಬ ಕೆಟ್ಟ ಐಡೆಂಟಿಟಿ ಸೀಕಿಂಗ್!! 

                 ಹಾಗಾದ್ರೆ ಪ್ರೀತಿ ಮಾಡುವವರೆಲ್ಲ ಮೂರ್ಖರು ಅಂತಲ್ಲ, ಪ್ರೀತಿಸುವುದು, ಪ್ರೀತಿಸಲ್ಪಡುವುದು ತಪ್ಪು ಅಲ್ಲ, ಆದರೆ ನಮ್ಮ ಆಕರ್ಷಣೆಗಳಿಗೆ, ಭಾವನೆಗಳಿಗೆ, ಪ್ರೀತಿ ಎಂಬ ಶಬ್ದದ ಬಳಕೆ ಸರಿಯಲ್ಲ.  ನಾವು ಹುಟ್ಟಿದಾಗಿನಿಂದ ಅಮ್ಮ  ತೋರಿಸಿದ್ದು   ನಿಸ್ವಾರ್ಥ unconditional ಪ್ರೀತಿ!, ಅಪ್ಪ ತೋರಿಸುವ ಕಾಳಜಿ ನಿಜವಾದ ಪ್ರೀತಿ, ತನ್ನ ಕರುವಿಗಾಗಿ ಹಪ ಹಪಿಸುವ ಹಸುವಿನದ್ದು ಪ್ರೀತಿ. ಅಪರಿಚಿತ ಮಗುವನ್ನು ಎತ್ತಿಕೊಂಡು ಮುದ್ದು ಮಾಡುವುದು ಪ್ರೀತಿ! ಯಾರದ್ದೋ ಕಣ್ಣಿರಿಗೆ    ಕೆನ್ನೆಯಾಗುವುದು   ಪ್ರೀತಿ!  ಕತ್ತಲು ಕೋಣೆಯಲ್ಲಿ ದುಃಖತಪ್ತ ಸ್ನೇಹಿತನನ್ನು/ಸ್ನೇಹಿತೆಯನ್ನು ಸಮಾಧಾನ ಪಡಿಸುವುದು ಪ್ರೀತಿ! ತಮ್ಮ- ತಂಗಿ, ಅಣ್ಣ- ಅಕ್ಕ ರೋಡೆಗಿನ ಒಡನಾಟ ಪ್ರೀತಿ! ಇಳೀ ವಯಸ್ಸಿನಲ್ಲಿ ತಮ್ಮ ಮಕ್ಕಳಿಗಾಗಿ  ಪರಿತಪಿಸುವ ಹಿರಿಯ ಕಣ್ನುಗಳದ್ದು  ನಿಜವಾದ ಪ್ರೀತಿ!  ಪ್ರಪಂಚ ನಿಂತಿರುವುದೇ ಪ್ರೀತಿ ಎಂಬ ಎರಡಕ್ಷರದ  ಮೇಲೆ ನಿಜ, ಅದು ನಮ್ಮ ಸುತ್ತಲಿರುವ ಪ್ರತಿ ವ್ಯಕ್ತಿಯೊಂದಿಗೆ ಆಗಬಹುದಲ್ಲ? ಪ್ರೀತಿ ಎನ್ನುವುದು ಹೆಣ್ಣು-ಗಂಡಿಗೆ ಸಂಭಂದಿಸಿದ ವಿಷಯ ಅಂತ ಯಾಕೆ ಭಾವಿಸಬೇಕು?


               ನಾವು ಏನೇ ಕಂಡುಕೊಳ್ಳಲು ಹೊರಟರು, ಅಥವಾ ಯಾರನ್ನೇ ಆಗಲಿ ಇಷ್ಟಪಡುವಾಗ ಅಲ್ಲಿ  ಸ್ವಾರ್ಥ ಎಂಬ ಪದ ಹುಟ್ಟಿಕೊಂಡರೆ ಅದು ಪ್ರೀತಿಯೇ ಅಲ್ಲ!! ನನ್ನದು ಆಕೆಯೇಡೆಗಿನ ನಿಸ್ವಾರ್ಥ ಪ್ರೀತಿ ಎಂದು ಕೊಚ್ಚಿಕೊಳ್ಳುವ ಹುಡುಗರೆಲ್ಲರಿಗೂ ಒಂದು ಸಿಂಪಲ್ ಪ್ರಶ್ನೆ, ಅವಳು ನೋಡಲು ಸುಂದರವಾಗಿರದಿದ್ದರೆ ನೀವು  ಅವಳನ್ನು ಇಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಅಂತ ಹೇಳಿಕೊಳ್ಳುತಿದ್ದಿರ? ಖಂಡಿತ ಇಲ್ಲ!! ಕಣ್ನು ಇಷ್ಟ ಪಡುವುದೇ ಸುಂದರವಾದ ವಸ್ತುಗಳನ್ನ ಮತ್ತು ಸುಂದರವಾದ ವಸ್ತುಗಳನ್ನ! ನೋಡದೆ ಪ್ರೀತಿಸುತ್ತಿದ್ದೇವೆ ಅಂತ ಹೇಳಿಕೊಳ್ಳುವ ಶತ ಮೂರ್ಖರಿಗೆ ಇನ್ನೊಂದು ಪ್ರಶ್ನೆ, ಕೇವಲ ಧ್ವನಿ ಕೇಳಿ ಇಷ್ಟ ಪಡುವ ನೀವುಗಳು, backround , career , profession  ಕೇಳದೆಯೇ ನೀನು ಏನೇ ಆಗಿರು ನಿನ್ನನ್ನೇ ಪ್ರೀತಿಸುತ್ತೇನೆ ಅಂತ ಹೇಳಲು ಸಾಧ್ಯವೇ? ಹೇಳುವ  ಸಾಹಸಿಗರು ಬೆರಳಣಿಕೆಯಷ್ಟು  ಸಿಗಬಹುದೇನೋ ಆದರೆ ಅದು ಕೇವಲ ಅವಿವೇಕದ ಪರಮಾವಧಿಯಾಗಬಹುದು.!


                       ಮನುಷ್ಯ ಸಮಾಜ ಜೀವಿ. ಎಲ್ಲರಿಂದ ಪ್ರೀತಿಸಲ್ಪಡುವ ಹಾಗು ಎಲ್ಲರನ್ನು ಪ್ರೀತಿಸಲು ಬರುವ ಏಕೈಕ ಮಾತು ಬಲ್ಲ ಜೀವಿ!  ಹೀಗಿರುವಾಗ ಯಾಕೆ ನಮ್ಮ ಪ್ರೀತಿಯನ್ನು ಒಬ್ಬಳಿಗಾಗಿ/ ಒಬ್ಬನಿಗಾಗಿ ಜೀವಮಾನವಿಡಿ ಕಾಯಿದಿರಿಸಬೇಕು? ಪ್ರೀತಿ ಹಂಚಿದಷ್ಟು ಬೆಳೆಯುತ್ತ ಹೋಗುವ  ವಿಸ್ಮಯ! ಇರುವಷ್ಟು ದಿನ ಎಲ್ಲರೊಳಗೊಂದಾಗಿ ಬಾಳು ಮಂಕು ತಿಮ್ಮ ಅಂತ d v g  ಹೆಳಿದ್ದಾರೆ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರುವುದು ಕೇವಲ ಆಕರ್ಷಣೆ ಹೊರತು ಪ್ರೀತಿಯಲ್ಲ. ದೇಹಕ್ಕೆ-ಕಾಮ, ಹರೆಯಕ್ಕೆ-ಭಾವನೆ, ಕಣ್ಣಿಗೆ- ಸೌಂದರ್ಯ, ನಾಲಿಗೆಗೆ-ರುಚಿ, ಹೇಗೋ ಹಾಗೆ ಯವ್ವನದಲ್ಲಿ- ಸಂಗಾತಿಯ ಅವಶ್ಯಕತೆ ಇರುತ್ತದೆ, ಅದನ್ನ ಪ್ರೀತಿ ಅನ್ನುವುದು ತಪ್ಪಾಗುತ್ತದೆ.  ಪ್ರೀತಿಗೆ, ಕಾಮದ, ಆಕರ್ಷಣೆಯ,  ಭಾವನೆಯ, ಸೌಂದರ್ಯದ ಹಂಗಿಲ್ಲ, ಅದು ಸದಾ ಹರಿಯುವ ಜಲಧಾರೆ! ಮದುವೆಯಾದ ೫೦ ವರ್ಷದ ನಂತರವೂ ಗಂಡ ಹೆಂಡತಿಯ ಸಂಗತಕ್ಕೆ ಅಥವಾ ಹೆಂಡತಿ ಗಂಡನ ಸಂಗಾತಕ್ಕೆ ಹಾತೊರೆಯುವುದು ನಿಜವಾದ ಪ್ರೀತಿ! ಹರೆಯ ಮುಗಿದ ತಕ್ಷಣ ಸತ್ತು ಹೋಗುವ ಆಕರ್ಷಣೆಗೂ ಸಾವಿಲ್ಲದಿರುವ ಪ್ರೀತಿಗೂ ಎತ್ತಣದಿಂದೆತ್ತ  ಸಂಭಂದವಯ್ಯ??!!

                 well , ನಾನು ಬ್ಲಾಗ್ನಲ್ಲಿ ಕನ್ನಡದಲ್ಲಿ ಬರೆಯಲು ಶುರು ಮಾಡಿ ಕೇವಲ ಒಂದು ತಿಂಗಳಾಗಿದೆ. ಆದರೆ ಈ ಒಂದು ತಿಂಗಳಲ್ಲಿ ನನಗೆ ಸಿಕ್ಕ ಪ್ರತಿಕ್ರಿಯೆ, ಟೀಕೆ, ವಿಭಿನ್ನವಾದದ್ದು!! ಕೆಲವು ಸ್ನೇಹಿತರು ಯಾವಾಗ continue ಮಾಡ್ತಿಯ? ಅಂತ ಕೇಳ್ದ್ರೆ, ಇನ್ನು ಕೆಲವರು ಯಾವಾಗ ನಿಲ್ಲಿಸ್ತಿಯ? ಕೆಲವರಂತೂ ಮಾಡೋಕೆ ಕೆಲಸ ಇಲ್ಲ ಅಂತ ಕಾಣುತ್ತೆ ಅದಕ್ಕೆ  ಬೇರೆಯವರ  ಸಮಯವನ್ನು ವ್ಯರ್ಥ ಮಾಡ್ತಾ ಇದ್ದೀಯ? ಅಂತ ಕೇಳ್ತಾ ಇದಾರೆ. ನನಗೆ ಪ್ರೋತ್ಸಾಹಕ್ಕಿಂತ criticise  ಮಾಡಿದ ಸ್ನೇಹಿತರೆ ಸರಿ ಅನ್ನಿಸುತ್ತಿದ್ದಾರೆ. ಹಾಗಂತ ಅವರು ಕೇವಲ ನಿಂದನೆ ಮಾಡದೆ ವಿಮರ್ಶೆ ಮಾಡಿ ಸಲಹೆ ನೀಡಿದ್ದಾರೆ ಅವರಿಗೆಲ್ಲ ನನ್ನ ಧನ್ಯವಾದಗಳು. ಹಾಗಂತ ಯಾರೋ ಹೇಳ್ತಾರೆ ಅಂತ ನಾನು ಬ್ಲಾಗ್ ಅಂತು ನಿಲ್ಲಿಸುವುದಿಲ್ಲ, ನಿಮ್ಮ ಟೀಕೆಗಳನ್ನು ನನ್ನ ಬ್ಲಾಗ್ ಸದಾ ಸ್ವಾಗತಿಸುತ್ತದೆ.